ಆ್ಯಪ್ನಗರ

ಟಂ ಟಂ ಚಾಲಕನಿಗೆ ದಂಡ, ಒಂದು ವರ್ಷ ಜೈಲು

ನಿರ್ಲಕ್ಷ ್ಯದಿಂದ ಟಂ ಟಂ ಚಲಾಯಿಸಿ, ಒಬ್ಬ ಪ್ರಯಾಣಿಕನ ಸಾವಿಗೆ ಕಾರಣನಾಗಿದ್ದ ಶಹಾಪುರ ತಾಲೂಕಿನ ದೊಡ್ಡ ಸಗರ ಗ್ರಾಮದ ಅಬೂಬಕರ್‌ ಅಹ್ಮದ್‌ ಹುಸೇನ್‌ಗೆ ಇಲ್ಲಿಯ ನ್ಯಾಯಾಲಯ 13,000 ರೂ. ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Vijaya Karnataka 6 Jul 2019, 10:28 pm
ಸುರಪುರ :ನಿರ್ಲಕ್ಷ ್ಯದಿಂದ ಟಂ ಟಂ ಚಲಾಯಿಸಿ, ಒಬ್ಬ ಪ್ರಯಾಣಿಕನ ಸಾವಿಗೆ ಕಾರಣನಾಗಿದ್ದ ಶಹಾಪುರ ತಾಲೂಕಿನ ದೊಡ್ಡ ಸಗರ ಗ್ರಾಮದ ಅಬೂಬಕರ್‌ ಅಹ್ಮದ್‌ ಹುಸೇನ್‌ಗೆ ಇಲ್ಲಿಯ ನ್ಯಾಯಾಲಯ 13,000 ರೂ. ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Vijaya Karnataka Web driver fined one year in jail
ಟಂ ಟಂ ಚಾಲಕನಿಗೆ ದಂಡ, ಒಂದು ವರ್ಷ ಜೈಲು


2011ರ ಜು.29 ರಂದು ಅಹ್ಮದ್‌ ತನ್ನ ಟಂ ಟಂ ನಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಅತಿ ವೇಗವಾಗಿ, ನಿರ್ಲಕ್ಷ ್ಯದಿಂದ ಚಲಾಯಿಸಿ ತಾಲೂಕಿನ ಬಿಜಾಸ್ಪೂರ ಗ್ರಾಮದ ಬಳಿ ಅಟೋ ಟಂ ಟಂ ಪಲ್ಟಿ ಮಾಡಿ ಪರಾರಿಯಾಗಿದ್ದ. ಪಲ್ಟಿ ಹೊಡೆದ ಪರಿಣಾಮ ಪ್ರಯಾಣಿಕ ಸಿದ್ದರಾಮಯ್ಯ ಯಲ್ಲಪ್ಪ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಮೃಪಟ್ಟು, ಇತರರು ಗಾಯಗೊಂಡಿದ್ದರು. ಈ ಕುರಿತು ಸುರಪುರ ಪೊಲೀಸ್‌ ಠಾಣೆಗೆ ಮರೆಪ್ಪÜ ಬಾಗಪ್ಪ ಕೋಳೂರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಟಿ.ಪಿ.ದೊಡ್ಮನಿ ಈ ಕುರಿತು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಚಿದಾನಂದ ಬಡಿಗೇರ ತೀರ್ಪು ನೀಡಿದ್ದಾರೆ. ಸರಕಾರಿ ಸಹಾಯಕ ಅಭಿಯೋಜಕ ಮಹಾಂತೇಶ ಮಸಳಿ ಸರಕಾರದ ಪರ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ