ಆ್ಯಪ್ನಗರ

ಐಟಿ ಬಿಟಿ ಖ್ಯಾತಿಯ ರಾಜ್ಯ ಈಗ ಭ್ರಷ್ಟಾಚಾರದ ರಾಜ್ಯ: ಈಶ್ವರ ಖಂಡ್ರೆ

ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಧಾರ್ಮಿಕ ವಿಚಾರದಲ್ಲಿಜನರ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದೆ. ಜನರು ಈ ಕುರಿತು ಜಾಗೃತರಾಗಬೇಕು. ಕೆಕೆಆರ್‌ಡಿಬಿಗೆ ಅನುದಾನ ಬಿಡುಗಡೆ ಮಾಡಿಲ್ಲ. ನಿರುದ್ಯೋಗಳಿಗೆ ಉದ್ಯೋಗ ಕೊಡಲಿಲ್ಲ.ರೈತರ ಆದಾಯ ದುಪ್ಪಟ್ಟು ಆಗಿಲ್ಲ

Vijaya Karnataka Web 18 Apr 2022, 7:21 pm
ಯಾದಗಿರಿ: ಬಿಜೆಪಿ ಸರಕಾರದಲ್ಲಿ ಸಚಿವರು ಶೇ.40ರಷ್ಟು ಕಮಿಷನ್‌ ಹೊಡೆಯುವುದರಲ್ಲಿ ಮಗ್ನರಾಗಿದ್ದಾರೆ. ಇದು ದೇಶಕ್ಕೆ ಕಪ್ಪುಚುಕ್ಕೆಯಾಗಿದೆ. ರಾಜ್ಯಕ್ಕೆ ದೇಶದಲ್ಲಿಒಳ್ಳೆಯ ಹೆಸರಿತ್ತು. ಐಟಿಬಿಟಿ ತಂತ್ರಜ್ಞಾನದಲ್ಲಿ ಹೆಸರು ಮಾಡಿದ್ದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈಗ ಭ್ರಷ್ಟಾಚಾರದಲ್ಲಿ ಹೆಸರು ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಟುವಾಗಿ ಟೀಕಿಸಿದರು.
Vijaya Karnataka Web ಈಶ್ವರ್‌ ಖಂಡ್ರೆ
ಈಶ್ವರ್‌ ಖಂಡ್ರೆ


ಯಾದಗಿರಿಯಲ್ಲಿ ಸೋಮವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ಪಾಟೀಲ್‌ ಅವರ ಆತ್ಮಹತ್ಯೆಗೆ ರಾಜ್ಯ ಸರಕಾರವೇ ಕಾರಣವಾಗಿದೆ. ಸಂತೋಷ್‌ ಅವರು ಪಿಎಂ ಮೋದಿ ಅವರಿಗೆ ಪತ್ರ ಬರೆದು ಬಿಲ್‌ ಪಾವತಿ ಮಾಡಲು ಶೇ. 40 ಕಮಿಷನ್‌ ಬೇಡಿಕೆ ಇಟ್ಟಿದ್ದಾರೆ. ನನಗೆ ಸಾಧ್ಯವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರೂ ಪ್ರಯೋಜನವಾಗಲಿಲ್ಲ. ಇದಲ್ಲದೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪಿಎಂಗೆ ಹಾಗೂ ರಾಷ್ಟ್ರಪತಿಗೆ ದೂರು ನೀಡಿ, ಸರಕಾರದ ನಾನಾ ಇಲಾಖೆಯಲ್ಲಿ ಶೇ. 40ರಷ್ಟು ಕಮಿಷನ್‌ ಕೊಡದೆ ಇದ್ದರೆ ಬಿಲ್‌ ಪಾವತಿಯಾಗಲ್ಲ. ಈ ಕುರಿತು ತನಿಖೆ ನಡೆಸಬೇಕು ಎಂದು ಬೇಡಿಕೊಂಡರು ಕೂಡಾ ಪ್ರಯೋಜನವಾಗಲಿಲ್ಲ. ಕೊನೆಗೂ ಸಂತೋಷ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಆರೋಪಿಸಿದರು.

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಈಶ್ವರ್ ಖಂಡ್ರೆ ಆಗ್ರಹ

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ದ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಪ್ರಕರಣ ದಾಖಲಿಸಿ ಅರೆಸ್ಟ್‌ ಮಾಡಬೇಕು. ಕಾನೂನು ಎಲ್ಲರ ದೃಷ್ಟಿಯಿಂದ ಒಂದೇ. ಆರೋಪಿಯಾಗಿರುವ ಈಶ್ವರಪ್ಪ ಹಾಗೂ ಅವರ ಸಹಚರರನ್ನು ಇನ್ನೂ ಯಾಕೆ ಬಂಸಿಲ್ಲಎಂಬುದು ತಿಳಿಯದಂತಾಗಿದೆ. ಇದಲ್ಲದೇ ಘಟನೆ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಸಂತೋಷ್‌ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ಸಂತೋಷ್‌ ಅವರಿಗೆ ಕೊಡಬೇಕಾಗಿದ್ದ 4 ಕೋಟಿ ರೂ. ಕೂಡಲೇ ಬಿಡುಗಡೆ ಮಾಡಬೇಕು ಎಂದರು.

ಮತ್ತೊಂದು ನಾಚಿಗೇಡು ಸಂಗತಿ ಎಂದರೇ ಮಠಗಳಿಗೆ, ಆಶ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ಕೂಡಾ ಶೇ. 30ರಷ್ಟು ಕಮಿಷನ್‌ ಕೊಡಬೇಕಾಗಿದೆ. ಅದು ಅತ್ಯಂತ ನಾಚಿಕೆಗೇಡಿನ ವಿಚಾರವಾಗಿದೆ. ಹಲವು ಮಠಾಧೀಶರೇ ಇದನ್ನ ಬಹಿರಂಗ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಧಾರ್ಮಿಕ ವಿಚಾರದಲ್ಲಿ ಜನರ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದೆ. ಜನರು ಈ ಕುರಿತು ಜಾಗೃತರಾಗಬೇಕು. ಕೆಕೆಆರ್‌ಡಿಬಿಗೆ ಅನುದಾನ ಬಿಡುಗಡೆ ಮಾಡಿಲ್ಲ. ನಿರುದ್ಯೋಗಳಿಗೆ ಉದ್ಯೋಗ ಕೊಡಲಿಲ್ಲ.ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ಕೈಗಾರಿಕೆಗಳ ಸ್ಥಾಪನೆ ಮಾಡಲಿಲ್ಲ. ಆದರೆ, ಎಂಎಲ್‌ಎಗಳನ್ನು ಖರೀದಿ ಮಾಡಿ ಅಕ್ರಮ ಮಾರ್ಗದಲ್ಲಿಅಕಾರಕ್ಕೆ ಬಂದು ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರು.

ಸಿಬಿಐ ತನಿಖೆಗೆ ಆಗ್ರಹ

ಪಿಎಸ್‌ಐ ನೇಮಕಾತಿಯಲ್ಲಿ ಕೋಟಿಗಟ್ಟಲೇ ಅಕ್ರಮ ವ್ಯವಹಾರ ನಡೆದಿದೆ. ರಾಜ್ಯ ಸರಕಾರ ಪ್ರಕರಣವನ್ನು ಕೂಡಲೇ ಸಿಬಿಐಗೆ ತನಿಖೆ ನಡೆಸಲು ಒಪ್ಪಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.

ಬಿಸಿಲಿನ ಜತೆಗೆ ದುಬಾರಿ ಬೆಲೆಯ ಬಿಸಿ: ಹೊಟ್ಟೆ ಸುಡುವ ಎಳನೀರು ದರ..!

ಸಿಐಡಿಗೆ ವಹಿಸುವ ಮೂಲಕ ಪ್ರಮುಖರನ್ನು ಬಚಾವ್‌ ಮಾಡಿ ಸಣ್ಣವರನ್ನ ಅರೆಸ್ಟ್‌ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಕೆಲ ಬಿಜೆಪಿ ನಾಯಕರು ಮತ್ತು ಅಕಾರಿಗಳು ಸಹ ಭಾಗಿಯಾಗಿರುವ ಶಂಕೆ ಇದೆ. ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಈಗ ಬಲಿಷ್ಠರನ್ನು ಬಚಾವ್‌ ಮಾಡಿ ಸಣ್ಣವರನ್ನ ಅರೆಸ್ಟ್‌ ಮಾಡಲಾಗುತ್ತಿದೆ. ಹಾಗಾಗಿ, ಪ್ರಕರಣದ ಸತ್ಯಾಸತ್ತತೆ ಹೊರಗೆ ತರಲು ಸಿಬಿಐ ತನಿಖೆ ನಡೆಸಬೇಕು. ಇದರ ಜತೆಗೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಸುಪರ್ದಿಯಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ