ಆ್ಯಪ್ನಗರ

ಅಬಕಾರಿ ದಾಳಿ: ಇಬ್ಬರು ಆರೋಪಿಗಳ ಬಂಧನ

ನಗರದ ವಾಡಿ ರಸ್ತೆಯ ಅಲ್ಲಿಪುರ ಕ್ರಾಸ್‌ ಬಳಿ ಎರಡು ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7 ಲೀಟರ್‌ ಮದ್ಯ, 30 ಲೀಟರ್‌ ಬೀಯರ್‌ ಹಾಗೂ ಬೈಕ್‌ಗಳನ್ನು ಅಬಕಾರಿ ಪೊಲೀಸರು ಸೋಮವಾರ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.

Vijaya Karnataka 11 Apr 2018, 5:49 pm
ಯಾದಗಿರಿ : ನಗರದ ವಾಡಿ ರಸ್ತೆಯ ಅಲ್ಲಿಪುರ ಕ್ರಾಸ್‌ ಬಳಿ ಎರಡು ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7 ಲೀಟರ್‌ ಮದ್ಯ, 30 ಲೀಟರ್‌ ಬೀಯರ್‌ ಹಾಗೂ ಬೈಕ್‌ಗಳನ್ನು ಅಬಕಾರಿ ಪೊಲೀಸರು ಸೋಮವಾರ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.
Vijaya Karnataka Web excise attack arrest of two accused
ಅಬಕಾರಿ ದಾಳಿ: ಇಬ್ಬರು ಆರೋಪಿಗಳ ಬಂಧನ


ಅಬಕಾರಿ ಇಲಾಖೆಯ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಾದ ವೆಂಕಟೇಶ ತಂದೆ ಮರೆಪ್ಪ ಮತ್ತು ಈಶ್ವರ ತಂದೆ ಚಂದ್ರಶೇಖರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮದ್ಯ, ಬಿಯರ್‌ ಹಾಗೂ ಬೈಕ್‌ಗಳ ಮೌಲ್ಯ ರೂ.1,09,000 ಎಂದು ಅಂದಾಜಿಸಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಮಾರ್ಗಸೂಚಿ ಅನ್ವಯ ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಫ್‌.ಎಚ್‌. ಚಲವಾದಿ ಅವರ ಆದೇಶದ ಮೇರೆಗೆ ಯಾದಗಿರಿಯ ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಡಿಸಿಇಐಬಿ ಸ್ಕ್ವಾಡ್‌ ಅಬಕಾರಿ ನಿರೀಕ್ಷಕ ವಿ.ಕೆ.ಗಾಣಿಗೇರ, ಶಹಾಪೂರ ಉಪ ವಿಭಾಗ ಅಬಕಾರಿ ನಿರೀಕ್ಷಕ ಎಲ್‌.ಎಸ್‌.ಸಲಗರೆ, ಯಾದಗಿರಿ ವಲಯ ಅಬಕಾರಿ ಉಪ ನಿರೀಕ್ಷಕ ಸಿದ್ರಾಮಪ್ಪ ತಾಳಿಕೋಟೆ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ