ಆ್ಯಪ್ನಗರ

ಶಾಸಕರಿಂದ ತಪ್ಪು ಮಾಹಿತಿ: ದರ್ಶನಾಪುರ

ರಾಜ್ಯ ಸರಕಾರದ ಜನಪರ ಆಡಳಿತ ಹಾಗೂ ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ಧರಾಮಯ್ಯ ವರ್ಚಸ್ಸು ಕ್ಷೇತ್ರ ಜನರನ್ನು ಕಾಂಗ್ರೆಸ್‌ನತ್ತ ಸೆಳೆಯುತ್ತಿದ್ದು, ಇದರಿಂದ ಶಾಸಕರು ಹತಾಶೆಗೊಂಡಿದ್ದಾರೆ ಎಂದು ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ವ್ಯಂಗ್ಯವಾಡಿದರು.

Vijaya Karnataka 29 Mar 2018, 4:59 pm
ಶಹಾಪುರ : ರಾಜ್ಯ ಸರಕಾರದ ಜನಪರ ಆಡಳಿತ ಹಾಗೂ ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ಧರಾಮಯ್ಯ ವರ್ಚಸ್ಸು ಕ್ಷೇತ್ರ ಜನರನ್ನು ಕಾಂಗ್ರೆಸ್‌ನತ್ತ ಸೆಳೆಯುತ್ತಿದ್ದು, ಇದರಿಂದ ಶಾಸಕರು ಹತಾಶೆಗೊಂಡಿದ್ದಾರೆ ಎಂದು ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ವ್ಯಂಗ್ಯವಾಡಿದರು.
Vijaya Karnataka Web false information from mlas darshanpur
ಶಾಸಕರಿಂದ ತಪ್ಪು ಮಾಹಿತಿ: ದರ್ಶನಾಪುರ


ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕ ಗುರು ಪಾಟೀಲರು ಮಾಡಿದ ಆರೋಪಕ್ಕೆ ಟಾಂಗ್‌ ನೀಡಿದರು. ಚುನಾವಣೆಯಲ್ಲಿ ಶಿರವಾಳ ಮತ್ತು ದರ್ಶನಾಪುರ ಕುಟುಂಬಗಳ ಮಧ್ಯೆ ಜಿದ್ದಾಜಿದ್ದಿ ಇದ್ದರೂ ಸೌಹಾರ್ದತೆಗೆ ಸಾಕ್ಷಿಯಾಗಿವೆ. ಯಾವತ್ತು ಒಬ್ಬರಿಗೊಬ್ಬರು ನಿಂದಿಸಿಲ್ಲ. ಮುಂದೆಯೋ ಆರೋಗ್ಯಕರ ಸ್ಪರ್ಧೆ ಇರಲಿದೆ ಎಂದರು.

ಬೂದಿಹಾಳ-ಪೀರಾಪುರ ಯೋಜನೆಯ ನನ್ನ ಹೇಳಿಕೆ ಕುರಿತು ಶಾಸಕರು ಆರೋಪ ಕುರಿತ ಸ್ಪಷ್ಟನೆ ನೀಡಿದ ಅವರು, ನಾನು ಎಲ್ಲಿಯೂ 250 ಕೋಟಿ ಸರಕಾರ ಬಿಡುಗಡೆ ಮಾಡಿದೆ ಎಂದು ಹೇಳಿಲ್ಲ. ಏತನೀರಾವರಿ ಯೋಜನೆಯಡಿ ಕೈಬಿಡಲಾದ ಗ್ರಾಮಗಳ ಸೇರ್ಪಡೆ ವಿಚಾರದಲ್ಲಿ ನಾನು ಸಚಿವ ಎಂ.ಬಿ.ಪಾಟೀಲರಿಗೆ ಸಂಪರ್ಕಿಸಿ ಯೋಜನೆಯಲ್ಲಿ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಲೇ ಬೇಕು ಎಂದು ಮನವೊಲಿಸಿದ್ದೆ. ಸಿ.ಎಂ.ಸಿದ್ದರಾಮಯ್ಯನವರು ನಗರಕ್ಕೆ ಬಂದಾಗ ಜನತೆಗೆ ಭರವಸೆ ನೀಡಿದರು ಎಂದರು.

2018-19ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯ ವಿಸ್ತರಣೆ ಕುರಿತು ಅನುಮೋದನೆ ಸಿಕ್ಕಿದೆ. ಯಾವುದೇ ಒಂದು ಹೊಸ ಯೋಜನೆ ವಿಸ್ತರಣೆಗೊಂಡಲ್ಲಿ ಅದನ್ನು ಮೊದಲು ಕಾರ್ಯಸಾಧ್ಯತೆಯ ಅಧ್ಯಯನ(ಫಿಜಿಬಿಲಿಟಿ ಟೆಸ್ಟ್‌) ಮಾಡಿಸಲಾಗುತ್ತದೆ. ಅಧ್ಯಯನದ ತಂಡ ಯೋಜನೆಯ ವೆಚ್ಚದ ಕುರಿತು ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ನಂತರ ತಾಂತ್ರಿಕ ಅನುಮೋದನೆ ಮತ್ತು ಹಣಕಾಸಿನ ಅನುಮೋದನೆ ಪಡೆದ ನಂತರ ಟೆಂಡರ್‌ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರಸ್ತುತ ಯೋಜನೆ ಕಾರ್ಯಸಾಧ್ಯತೆಯ ಅಧ್ಯಯನದ ಮೊದಲನೆಯ ಹಂತದಲ್ಲಿದೆ ಎಂದು ನಾನು ಹೇಳಿದ್ದೇನೆ. ಶಾಸಕರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಒಂದು ವೇಳೆ ಶಾಸಕರಿಗೆ ಈ ಬಗ್ಗೆ ಸಹಮತವಿರದಿದ್ದಲ್ಲಿ ಅಧಿವೇಶನದಲ್ಲಿ ಅದನ್ನು ಕುರಿತು ಪ್ರತಿರೋಧಿಸಬಹುದಿತ್ತು ಎಂದು ಹೇಳಿದರು.

ಹೊಂದಾಣಿಕೆ ರಾಜಕಾರಣ ಇಲ್ಲ:

ಕ್ಷೇತ್ರದಲ್ಲಿ ಒಮ್ಮೆ ನಾನು ಒಮ್ಮೆ ನೀನು ಎನ್ನುವ ಹೊಂದಾಣಿಕೆ ರಾಜಕಾರಣ ನಡೆದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ ಎಂದು ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನಾಪುರ, ಇದು ಯಾವತ್ತು ನಡೆದಿಲ್ಲ ಎಲ್ಲ ಪಕ್ಷ ದ ಅಭ್ಯರ್ಥಿಗಳು ತಮ್ಮ ಪಕ್ಷ ಮತ್ತು ತಾವು ಆಯ್ಕೆಯಾಗಲು ಸರ್ವ ಪ್ರಯತ್ನ ನಡೆಸುತ್ತಾರೆ ಎಂದು ಆರೋಪವನ್ನು ಅಲ್ಲಗೆಳೆದರು.

ಡಿಸಿಸಿ ಬ್ಯಾಂಕ್‌ ರೂ,28ಕೋಟಿ ಅವ್ಯವಹಾರ ಕುರಿತು ಪ್ರಶ್ನಿಸಿದಾಗ ತನಿಖೆ ನಡೆಯಲಿ ಆರೋಪಿಗಳಿಗೆ ಸೂಕ್ತ ಕ್ರಮ ಜರುಗಿಸಲಿ ಎಂದು ತಿಳಿಸಿದರು. ಅದೇ ರೀತಿಯಲ್ಲಿ ಗುರು ಪಾಟೀಲ ಶಾಸಕರ ಅವಧಿಯಲ್ಲಿ ಒಳಚರಂಡಿಗಾಗಿ ಬಂದಿದ್ದ ರೂ,9 ಕೋಟಿ ಅನುದಾನವನ್ನು ಬೆರೆ ಕಾಮಗಾರಿಗೆ ವರ್ಗಾಯಿಸಿರುವುದು, ಮತ್ತು ಕ್ಷೇತ್ರದಲ್ಲಿ ಭೀಮಾನದಿಯಿಂದ ಶಾಶ್ವತ ಕುಡಿಯುವ ನೀರಿನ ಸೌಲಭ್ಯ, ಪಾಲಿಟೆಕ್ನಿಕ್‌ ಕಾಲೇಜು ಸ್ಥಾಪನೆ ಮಾಡುವುದಾಗಿ ನೀಡಿದ ಭರವಸೆಗಳು ಇನ್ನೂ ಭರವಸೆಗಳಾಗಿಯೇ ಉಳಿದಿವೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ