ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ಆರು ಜನ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಬಾಧೆಯಿಂದಾಗಿ ಈ ಕುಟುಂಬ ದಾರುಣ ಅಂತ್ಯ ಕಂಡಿದೆ ಎಂದು ತಿಳಿದುಬಂದಿದೆ. ಕುಟುಂಬದ ಮುಖ್ಯಸ್ಥ 45 ವರ್ಷ ವಯಸ್ಸಿನ ಭೀಮರಾಯ ಶಿವಪ್ಪ ಸುರುಪುರ, ಆತನ ಪತ್ನಿ 38 ವರ್ಷ ವಯಸ್ಸಿನ ಶಾಂತಮ್ಮ, ನಾಲ್ಕು ಜನ ಮಕ್ಕಳಾದ ಸುಮಿತ್ರಾ, ಲಕ್ಷ್ಮಿ, ಶ್ರೀದೇವಿ ಹಾಗೂ ಶಿವರಾಜ ಸಾವನ್ನಪ್ಪಿದ್ದಾರೆ.
ಸ್ವಂತ ಜಮೀನಿನಲ್ಲಿ ಬಾವಿ ತೋಡಿದ್ದ ಶಿವಪ್ಪ, ತೋಟಗಾರಿಕೆ ಮಾಡಬೇಕೆಂದು ವಿಪರೀತ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಸಾಲಕ್ಕೆ ಹೆದರಿ ನಾಲ್ಕು ಮಕ್ಕಳು ಮತ್ತು ಹೆಂಡತಿಯೊಂದಿಗೆ ಬಾವಿಗೆ ಬಿದ್ದು ಇಡೀ ಕುಟುಂಬ ಅಸುನೀಗಿದೆ. ಈ ಹೃದಯ ವಿದ್ರಾವಕ ಘಟನೆ ನೋಡಿ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ.
ಕುಟುಂಬಸ್ಥರು ಮತ್ತು ಸಂಬಂಧಿಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಬಾವಿಯಿಂದ ಮೊದಲು ನಾಲ್ಕು ಶವಗಳನ್ನು ಹೊರಗೆ ತೆಗೆಯಲಾಗಿತ್ತು. ಬಳಿಕ ಮಿಕ್ಕ ಎರಡು ಶವಗಳೂ ಪತ್ತೆಯಾದವು.
ಎಂದಿನಂತೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ತಮ್ಮ ಹೊಲಕ್ಕೆ ಇವರೆಲ್ಲರೂ ಬಂದಿದ್ದಾರೆ. ಬಳಿಕ ಆತ್ಮಹತ್ಯೆಗೆ ಮುಂದಾಗುತ್ತಿದ್ದ ಸನ್ನಿವೇಶವನ್ನು ಗಮನಿಸಿದ ಕುರಿಗಾಹಿಗಳು ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ, ಅಷ್ಟರಲ್ಲಾಗಲೇ ಎಲ್ಲರ ಪ್ರಾಣಪಕ್ಷಿ ಹಾರಿಹೋಗಿದೆ.
ಸ್ವಂತ ಜಮೀನಿನಲ್ಲಿ ಬಾವಿ ತೋಡಿದ್ದ ಶಿವಪ್ಪ, ತೋಟಗಾರಿಕೆ ಮಾಡಬೇಕೆಂದು ವಿಪರೀತ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಸಾಲಕ್ಕೆ ಹೆದರಿ ನಾಲ್ಕು ಮಕ್ಕಳು ಮತ್ತು ಹೆಂಡತಿಯೊಂದಿಗೆ ಬಾವಿಗೆ ಬಿದ್ದು ಇಡೀ ಕುಟುಂಬ ಅಸುನೀಗಿದೆ. ಈ ಹೃದಯ ವಿದ್ರಾವಕ ಘಟನೆ ನೋಡಿ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ.
ಕುಟುಂಬಸ್ಥರು ಮತ್ತು ಸಂಬಂಧಿಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಬಾವಿಯಿಂದ ಮೊದಲು ನಾಲ್ಕು ಶವಗಳನ್ನು ಹೊರಗೆ ತೆಗೆಯಲಾಗಿತ್ತು. ಬಳಿಕ ಮಿಕ್ಕ ಎರಡು ಶವಗಳೂ ಪತ್ತೆಯಾದವು.
ಎಂದಿನಂತೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ತಮ್ಮ ಹೊಲಕ್ಕೆ ಇವರೆಲ್ಲರೂ ಬಂದಿದ್ದಾರೆ. ಬಳಿಕ ಆತ್ಮಹತ್ಯೆಗೆ ಮುಂದಾಗುತ್ತಿದ್ದ ಸನ್ನಿವೇಶವನ್ನು ಗಮನಿಸಿದ ಕುರಿಗಾಹಿಗಳು ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ, ಅಷ್ಟರಲ್ಲಾಗಲೇ ಎಲ್ಲರ ಪ್ರಾಣಪಕ್ಷಿ ಹಾರಿಹೋಗಿದೆ.