ಆ್ಯಪ್ನಗರ

ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ರೈತ ಸಾವು

ಜಮೀನಿನಲ್ಲಿಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಪಟ್ಟಣ ಪುರಸಭೆ ವ್ಯಾಪ್ತಿಯ ಪರಸನಹಳ್ಳಿಯಲ್ಲಿಸೋಮವಾರ ರೈತ ಮೃತಪಟ್ಟಿದ್ದಾರೆ. ಬಲಭೀಮರಾವ ಕುಲಕರ್ಣಿ (55) ಮೃತ ರೈತ.

Vijaya Karnataka 16 Oct 2019, 5:00 am
ಕೆಂಭಾವಿ:ಜಮೀನಿನಲ್ಲಿಕೆಲಸ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಪಟ್ಟಣ ಪುರಸಭೆ ವ್ಯಾಪ್ತಿಯ ಪರಸನಹಳ್ಳಿಯಲ್ಲಿಸೋಮವಾರ ರೈತ ಮೃತಪಟ್ಟಿದ್ದಾರೆ. ಬಲಭೀಮರಾವ ಕುಲಕರ್ಣಿ (55) ಮೃತ ರೈತ. ಎಂದಿನಂತೆ ತನ್ನ ಭತ್ತದ ಗದ್ದೆಗೆ ಮಧ್ಯಾಹ್ನ ನೀರು ಬಿಡಲು ತೆರಳಿದಾಗ ಜಮೀನಿನ ಮೇಲೆ ಹಾದುಹೋದ ವಿದ್ಯುತ್‌ ತಂತಿ ಸ್ಪರ್ಶಿಸಿದೆ. ಕೂಡಲೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸ್‌, ಕಂದಾಯ ಹಾಗೂ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕೆಂಭಾವಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ