ಆ್ಯಪ್ನಗರ

ಮೀಟರ್‌ ಬಡ್ಡಿ ವ್ಯವಹಾರ, ಮೂವರ ವಿರುದ್ಧ ಎಫ್‌ಐಆರ್‌

ಮೀಟರ್‌ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆಯಲ್ಲಿಮೂವರ ಆರೋಪಿಗಳ ವಿರುದ್ಧ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.

Vijaya Karnataka 11 Oct 2019, 5:00 am
ಯಾದಗಿರಿ:ಮೀಟರ್‌ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆಯಲ್ಲಿಮೂವರ ಆರೋಪಿಗಳ ವಿರುದ್ಧ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
Vijaya Karnataka Web fir against meter interest business
ಮೀಟರ್‌ ಬಡ್ಡಿ ವ್ಯವಹಾರ, ಮೂವರ ವಿರುದ್ಧ ಎಫ್‌ಐಆರ್‌


ನಗರದ ಗುತ್ತಿಪೇಠ ನಿವಾಸಿ ಡಾ.ಆಯೇಷಾ ಅಜರುದ್ದಿನ್‌ ಗಲಗಲಿ ಎಂಬುವವರು ಮಹಾದೇವಪ್ಪ ನಾಟಿಕಾರ, ಭೀಮರಡ್ಡಿ ಹಾರಣಗೇರಾ, ಪದ್ಮರಾಜ ಮಡಿವಾಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಯೇಷಾಳ ಪತಿ ನಾಲ್ಕು ವರ್ಷಗಳಿಂದ ನಗರದ ಮಾರುತಿ ಮಂದಿರದ ಬಳಿ ಕ್ಲಿನಿಕ್‌ ನಡೆಸುತ್ತಿದ್ದರು. ಈಗ 18 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾರೆ. ಆದರೆ, ಮೂವರು ಆರೋಪಿಗಳು ತಮ್ಮ ಪತಿ ಕ್ಲಿನಿಕ್‌ ನಡೆಸುವುದಕ್ಕಾಗಿಯೇ 2 ಲಕ್ಷ ರೂ. ಸಾಲ ತೆಗೆದುಕೊಂಡು ವಾರಕ್ಕೆ 20 ಸಾವಿರ ರೂ. ಬಡ್ಡಿಯಂತೆ ತೆಗೆದುಕೊಂಡಿದ್ದಾರೆ ಎಂದು ಹೇಳಿ ಅಸಲು, ಬಡ್ಡಿ ನೀಡುವಂತೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಸಾಲ ಪಡೆದಿರುವುದು ತಮ್ಮ ಬಳಿ ಸಾಕ್ಷಾಧಾರವಿದ್ದರೆ ಕೊಡಿ ಎಂದು ಕೇಳಿದರೆ ತಮ್ಮ ಪತಿ ನೀಡಿರುವ ಬ್ಲ್ಯಾಂಕ್‌ ಚೆಕ್‌ ಇದೆ. ಹಣ ನೀಡದಿದ್ದರೆ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸುತ್ತೇವೆ ಎಂದು ಕಿರುಕುಳ ನೀಡುತ್ತಿದ್ದಾರೆ. 2 ಲಕ್ಷ ಸಾಲಕ್ಕೆ 4.80 ಲಕ್ಷ ಬಡ್ಡಿ ಕಟ್ಟಲಾಗಿದೆ. ಈ ಬಗ್ಗೆ ತಮ್ಮ ಮೈದುನ ತೌಸಿಫ್‌ ಕರಾರು ಪತ್ರಗಳಿವೆ ಎಂದು ದೂರಿನಲ್ಲಿತಿಳಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ