ಆ್ಯಪ್ನಗರ

ಸ್ಥಳಾಂತರಕ್ಕೆ ಒಪ್ಪದ ಗಡ್ಡಿ ಜನ, ಅಧಿಕಾರಿಗಳು ವಾಪಸ್‌

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮಂಗಳವಾರ ಕೃಷ್ಣಾನದಿಗೆ 3.80 ಲಕ್ಷ ಕ್ಯೂಸೆಕ್‌ ನೀರು ಹರಿಸಲಾದ ಹಿನ್ನೆಲೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ನೇತೃತ್ವದ ತಂಡ ನೀಲಕಂಠರಾಯನ ಗಡ್ಡಿಗೆ ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನ ವಿಫಲವಾಯಿತು.

Vijaya Karnataka 7 Aug 2019, 9:58 pm
ಕಕ್ಕೇರಾ:ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮಂಗಳವಾರ ಕೃಷ್ಣಾನದಿಗೆ 3.80 ಲಕ್ಷ ಕ್ಯೂಸೆಕ್‌ ನೀರು ಹರಿಸಲಾದ ಹಿನ್ನೆಲೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ನೇತೃತ್ವದ ತಂಡ ನೀಲಕಂಠರಾಯನ ಗಡ್ಡಿಗೆ ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನ ವಿಫಲವಾಯಿತು.
Vijaya Karnataka Web gaddi people refused to move officials returned
ಸ್ಥಳಾಂತರಕ್ಕೆ ಒಪ್ಪದ ಗಡ್ಡಿ ಜನ, ಅಧಿಕಾರಿಗಳು ವಾಪಸ್‌

ಕಕ್ಕೇರಾ ನೀಲಕಂಠರಾಯನ ಗಡ್ಡಿ ಜನರ ಸ್ಥಳಾಂತರಕ್ಕೆ ಮನವೊಲಿಸುತ್ತಿರುವ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ


ಕೃಷ್ಣಾ ನದಿಯ ನೀಲಕಂಠರಾಯನಗಡ್ಡಿಯ ಪಕ್ಕದಲ್ಲಿರುವ ಬೆಂಚಿಗಡ್ಡಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. 40 ಕುಟುಂಬಗಳಿರುವ ಗಡ್ಡಿಯಲ್ಲಿ ಈಗಾಗಲೇ 35 ಕುಟುಂಬಗಳಿದ್ದು, 5 ಕುಟುಂಬಗಳು ಗುಳೆ ಹೋಗಿವೆ. ಕೃಷ್ಣಾ ನದಿಗೆ 4 ಲಕ್ಷ ಕ್ಯೂಸೆಕ್‌ ನೀರು ಬರುವ ಸಾಧ್ಯತೆಯಿದೆ. ಸುರಕ್ಷ ತೆ ಮತ್ತು ಆರೋಗ್ಯ ದೃಷ್ಟಿಯಿಂದ ಬೆಂಚಿಗಡ್ಡಿಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದ್ದು, ಎಲ್ಲರನ್ನು ಅಲ್ಲಿಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ಜನರನ್ನು ಮನ ಒಲಿಸಿದರು. ಆದರೆ, ಜನರು ಅಧಿಕಾರಿಗಳ ಮಾತಿಗೆ ಕಿವಿಗೊಡಲಿಲ್ಲ. ಇದರಿಂದ ಅಧಿಕಾರಿಗಳು ವಾಪಸ್‌ ಆದರು.

ಡಿವೈಎಸ್‌ಪಿ ಶಿವನಗೌಡ ಪಾಟೀಲ್‌, ತಹಸೀಲ್ದಾರ್‌ ಸುರೇಶ ಅಂಕಲಗಿ, ಉಪ-ತಹಸೀಲ್ದಾರ್‌ ರೇವಪ್ಪ ತೆಗ್ಗಿನಮನಿ, ಕಂದಾಯ ನಿರೀಕ್ಷ ಕ ವಿಠಲ್‌ ಬಂದಾಳ, ಗ್ರಾಮಲ್ಲೆಕ್ಕಾಧಿಕಾರಿ ಸಂತೋಷ ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್‌, ಜೆಸ್ಕಾಂ ಅಧಿಕಾರಿ ಈರಣ್ಣ ಹಳ್ಳಿಚಂಡಿ, ಜೆಸ್ಕಾಂ ತುಕಾರಾಮ, ಪುರಸಭೆ ಸದಸ್ಯ ಭೀಮನಗೌಡ ಹಳ್ಳಿ, ಪಿಎಸ್‌ಐ ಪ್ರದೀಪ್‌ ಬೀಸೆ, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಅಧಿಕಾರಿಗಳ ತಂಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ