ಆ್ಯಪ್ನಗರ

ಕೊಳವೆಬಾವಿ ರಿಪೇರಿ ಮಾಡಿಸದ ಗ್ರಾಪಂ

ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿ ಕೆಟ್ಟು ಹಲವು ತಿಂಗಳುಗಳೇ ಗತಿಸಿದರೂ ದುರಸ್ತಿ ಮಾಡಲಾಗಿಲ್ಲ. ಹೀಗಾಗಿ ಜನತೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ದಲಿತ ಮುಖಂಡ ಸಂತೋಷ ದೊಡ್ಮನಿ ಆರೋಪಿಸಿದ್ದಾರೆ.

Vijaya Karnataka 17 Jan 2019, 5:00 am
ಕೆಂಭಾವಿ :ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿ ಕೆಟ್ಟು ಹಲವು ತಿಂಗಳುಗಳೇ ಗತಿಸಿದರೂ ದುರಸ್ತಿ ಮಾಡಲಾಗಿಲ್ಲ. ಹೀಗಾಗಿ ಜನತೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ದಲಿತ ಮುಖಂಡ ಸಂತೋಷ ದೊಡ್ಮನಿ ಆರೋಪಿಸಿದ್ದಾರೆ.
Vijaya Karnataka Web gram panchayat not repaired
ಕೊಳವೆಬಾವಿ ರಿಪೇರಿ ಮಾಡಿಸದ ಗ್ರಾಪಂ


ಯಕ್ತಾಪುರ -ಬೊಮ್ಮನಹಳ್ಳಿ ರಸ್ತೆಯ ಮಧ್ಯೆ ಹಾಗೂ ಗುತ್ತಿಬಸವಣ್ಣ-ಕೆಂಭಾವಿ ರಸ್ತೆಯ ಮಧ್ಯೆ ಇರುವ ಕೊಳವೆ ಬಾವಿಯಲ್ಲಿ ಕುಡಿಯುವ ನೀರಿನ ಪ್ರಮಾಣ ಸಾಕಷ್ಟಿದ್ದು ಈ ಎರಡೂ ಕೊಳವೆ ಬಾವಿಗಳು ಕೆಟ್ಟು ನಿಂತಿವೆ. ಇವುಗಳ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಮುಂದೆ ಬಾರದೆ ಇರುವುದು ಜನತೆಯ ಕಣ್ಣು ಕೆಂಪಗಾಗಿಸಿದೆ ಎಂದು ಅವರು ದೂರಿದ್ದಾರೆ. ಇಲ್ಲಿನ ಜನರಿಗೆ ಕುಡಿಯುವ ನೀರಿಗಾಗಿ ದೂರದ ಸ್ಥಳಗಳಿಗೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ.

ಈ ಬಾರಿ ಬರಗಾಲ ಆವರಿಸಿದ್ದು, ಈ ಭಾಗದಲ್ಲಿ ನೀರಿಲ್ಲದೆ ಜನ-ಜಾನುವಾರ ಪರದಾಡುತ್ತಿದ್ದಾರೆ. ಕುಡಿಯುವ ನೀರು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿಯ ಜನತೆಗ ಒದಗಿ ಬಂದಿದೆ. ಇಂತಹ ಸ್ಥಿತಿಯಲ್ಲಿ ನೀರು ಒದಗಿಸುವ ಎರಡು ಮುಖ್ಯ ಕೊಳವೆ ಬಾವಿಗಳು ಕೆಟ್ಟು ಹೋಗಿದ್ದು, ಅವುಗಳನ್ನು ಬೇಗ ದುರಸ್ತಿಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಗ್ರಾಮಸ್ಥರೊಂದಿಗೆ ಗ್ರಾಪಂ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ