ಆ್ಯಪ್ನಗರ

ಕಲೆ,ಸಂಸ್ಕೃತಿಗೆ ಹೈಕ ಉತ್ತಮ ವೇದಿಕೆ

ಕಲೆ,ಸಂಸ್ಕೃತಿ,ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಹೈದರಾಬಾದ ಕರ್ನಾಟಕ ಪ್ರದೇಶ ಉತ್ತಮ ವೇದಿಕೆಯಾಗಿದೆ.ಸರಕಾರ ಇನ್ನೂ ಇಂತಹ ವೇದಿಕೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಕಲೆ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು.

Vijaya Karnataka 17 Dec 2018, 5:00 am
ಶಹಾಪುರ :ಕಲೆ,ಸಂಸ್ಕೃತಿ,ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಹೈದರಾಬಾದ ಕರ್ನಾಟಕ ಪ್ರದೇಶ ಉತ್ತಮ ವೇದಿಕೆಯಾಗಿದೆ.ಸರಕಾರ ಇನ್ನೂ ಇಂತಹ ವೇದಿಕೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಕಲೆ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು.
Vijaya Karnataka Web hk is a good platform for art and culture
ಕಲೆ,ಸಂಸ್ಕೃತಿಗೆ ಹೈಕ ಉತ್ತಮ ವೇದಿಕೆ


ನಗರದ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಸಾರಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ 21ನೇ ವರ್ಷದ ಸಗರನಾಡು ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಗರನಾಡು ಕಲೆ ಸಾಹಿತ್ಯ ಸಂಸ್ಕೃತಿಯ ತವರೂರಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಇಂತಹ ವೇದಿಕೆಗಳ ಪ್ರಯತ್ನ ಪೂರಕವಾಗಿದೆ ಎಂದರು.

ಸಂಸ್ಥಾನದ ಪೀಠಾಧಿಪತಿ ಬಸವಯ್ಯ ಶರಣರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕರವೇ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ ಮಾತನಾಡಿ 21ವರ್ಷಗಳವರೆಗಿನ ಸಂಸ್ಥೆಯು ನಡೆದು ಬಂದ ದಾರಿ ಸಹಕರಿಸಿದ ಸರ್ವರನ್ನು ಸ್ಮರಿಸಿದರು.

ವೇದಿಕೆಯಲ್ಲಿ ತಹಸೀಲ್ದಾರ ಸಂಗಮೇಶ ಜಿಡಗೆ, ಪಿಐ ನಾಗರಾಜ ಜಿ, ಎಸ್‌.ಬಿ.ದೇಶಮುಖ ಕಾಲೇಜು ಅಧ್ಯಕ್ಷ ಶಿವರಾಜ ದೇಶಮುಖ,ನಗರಸಭೆ ಸದಸ್ಯ ಬಸವರಾಜ ಆನೆಗುಂದಿ, ಮುಖಂಡ ಮಹೇಶ ಆನೆಗುಂದಿ, ವಾಸ್ತು ತಜ್ಞ ಎ.ಬಿ.ಪಾಟೀಲ್‌, ಕರವೇ ರಾಜ್ಯ ಉಪಾಧ್ಯಕ್ಷ ಶಿವರಾಜಗೌಡ,ಮಂಜೇಗೌಡ, ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ರಾಯಚೂರ ಜಿಲ್ಲಾಧ್ಯಕ್ಷ ವಿರೇಶ ಹೀರಾ ,ಕಲಬುರಗಿಯ ಗೋಪಾಲ್‌ ನಾಟೇಕಾರ,ಹೈಕ ಶರಣು ಇಟಗಿ, ಯಾದಗಿರಿ ಶರಣು ಇಟಗಿ, ಉಕ ಉಪಾಧ್ಯಕ್ಷ ರಾಜಶೇಖರ ಪಾಟೀಲ್‌ ಸೇರಿ ಅನೇಕರಿದ್ದರು. ನಾನಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೊರೆಯುವ ಚಳಿಯಲ್ಲಿಯೂ ನೆರೆದಿದ್ದ ಜನಸ್ತೋಮವನ್ನು ರಂಜಿಸಿದವು.

'ಸಗರನಾಡು ಸಿರಿ' ಗೌರವ ಸನ್ಮಾನ:

ಕಿರುತೆರೆ ಧಾರವಾಹಿ ಬ್ರಹ್ಮಗಂಟು ನಟಿ ಗೀತಾ,ಶನಿ ದಾರವಾಹಿ ಬಾಲ ನಟ ಕನಿಷ್ಕ,ಗಾಯಕ ಶ್ರೀರಾಮ ಕಾಸರ್‌,ಆಳಂದ ಚಲನಚಿತ್ರ ಸಾಹಿತಿ ಶ್ರೀಶೈಲ್‌ ವಿ.ಕೆ.ಜಾಮದಾರ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್‌ ಆಲ್ಫ್ರೈಡ್‌,ತಾಲೂಕು ಪರ್ತಕರ್ತ ಸಂಘದ ಅಧ್ಯಕ್ಷ ನಾರಾಯಣಚಾರ್ಯ ಸಗರ, ನಗರದ ಅಮ್ಮ, ನಮೋ, ಅಜ್ಜಮ್ಮ ಕ್ಯಾಂಟೀನ್‌ ಮಾಲೀಕರಿಗೆ, ಶವಗಳು ಸಾಗಿಸುವ ಎಕ್ಬಾಲ್‌ ಪಠಾಣ ಅವರಿಗೆ ಈ ಬಾರಿಯ ಸಂಸ್ಥೆಯ ವತಿಯಿಂದ ಸಗರನಾಡು ಸಿರಿ ಗೌರವ ಸನ್ಮಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಆರು ಸಂಸ್ಥೆಗಳ ಅಧ್ಯಕ್ಷ ನಾನಲ್ಲ: ಡಾ.ಗದ್ದುಗೆ

ಕೆಲವು ದಿನಗಳ ಹಿಂದೆ ಸುದ್ದಿವಾಹಿನಿಯೊಂದರಲ್ಲಿ ಆರು ಸಂಸ್ಥೆಗಳಿಗೆ ನಾನೇ ಅಧ್ಯಕ್ಷ ಎಂದು ಬಿಂಬಿಸಲಾಗಿದೆ. ಲಕ್ಷಾಂತರ ರೂ. ಸರಕಾರದಿಂದ ಅನುದಾನ ಪಡೆಯುತ್ತಿರುವುದಾಗಿ ಆರೋಪಿಸಿದ್ದಾರೆ. ಆದರೆ, ಅವರ ಸತ್ಯಕ್ಕೆ ದೂರವಾಗಿದೆ . ತಾವು ಕೇವಲ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಮತ್ತು ಕರವೇ ಉಕ ಎರಡು ಸಂಸ್ಥೆಗಳಿಗೆ ಮಾತ್ರ ಅಧ್ಯಕ್ಷ ನಾಗಿದ್ದೇನೆ.ಉಳಿದ ನಾಲ್ಕು ಸಂಸ್ಥೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಡಾ.ಶರಣು ಬಿ.ಗದ್ದುಗೆ ಸ್ಪಷ್ಟಪಡಿಸಿದರು.

ಕರವೇ ಕನ್ನಡಿಗರ ಸ್ವತ್ತು-ಪ್ರವೀಣ ಶೆಟ್ಟಿ

ಕರವೇ ಪ್ರತಿಯೊಬ್ಬ ಕನ್ನಡ ನಾಡಿನ ಹೋರಾಟಗಾರ ಸ್ವತ್ತು ಹೊರತು ಯಾರೋ ಒಬ್ಬರು ಕೋರ್ಟ್‌ ಮೂಲಕ ಗೆದ್ದ ಮಾತ್ರಕ್ಕೆ ಅವರ ಸ್ವತ್ತಾಗಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಹೇಳಿದರು. ಇತ್ತಿಚಿಗೆ ನಾರಾಯಣಗೌಡರು ಪತ್ರಿಕೆಗಳಲ್ಲಿ ಕರವೇ ತಮ್ಮ ಸ್ವಂತ ಸಂಸ್ಥೆ ಎಂದು ನೀಡಿ ಕೋರ್ಟ್‌ ತೀರ್ಮಾನದ ಜಾಹೀರಾತು ಕುರಿತು ಟಾಂಗ್‌ ನೀಡಿದರು. ನಾಡಿನ ನೆಲ ಜಲ,ನಾಡು ನುಡಿಗಾಗಿ ಸಮಸ್ಯೆ ಬಂದಾಗ ಪ್ರತಿಯೋಬ್ಬರು ಹೋರಾಟ ಮಾಡುವುದು ಅವಶ್ಯ ಮತ್ತು ಹಕ್ಕಾಗಿದೆ ಎಂದರು. ರೈಲ್ವೆ ಇಲಾಖೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯಲ್ಲಿ ಬರೆಯುವಂತೆ ಮಾಡಿದ್ದು ನಮ್ಮ ವೇದಿಕೆ. ಅನೇಕ ಹೋರಾಟಗಳಲ್ಲಿ ಪೊಲೀಸರ ಲಾಠಿ ಬೂಟಿನೇಟಿನ ಮೂಲಕ ನಾಡಿನ ಜನತೆಗೆ ನ್ಯಾಯ ದೊರಕಿಸಿದ ಸಂತೃಪ್ತಿ ಇದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ