ಆ್ಯಪ್ನಗರ

ಹೊಸ ಪಿಂಚಿಣಿಯೋಜನೆ ರದ್ಧತಿಗೆ ಆಗ್ರಹ

ನೂತನ ಪಿಂಚಿಣಿಯೋಜನೆಯು (ಎನ್‌ಪಿಎಸ್) ಅವೈಜ್ಞಾನಿಕ,ಅನಿಶ್ಚಿತವಾಗಿದೆ.ಹೀಗಾಗಿ ಅದನ್ನು ಕೂಡಲೇ ರದ್ದುಪಡಿಸಬೇಕು ಎಂದು ತಾಲೂಕು ಎನ್‌ಪಿಎಸ್ ಸಂಘದ ಅಧ್ಯಕ್ಷ ರಾಮಕಷ್ಣ ಕಟ್ಕಾವಲಿ ಆಗ್ರಹಿಸಿದ್ದಾರೆ.

ವಿಕ ಸುದ್ದಿಲೋಕ 26 Feb 2016, 5:09 pm
ಶಹಾಪುರ: ನೂತನ ಪಿಂಚಿಣಿಯೋಜನೆಯು (ಎನ್‌ಪಿಎಸ್) ಅವೈಜ್ಞಾನಿಕ,ಅನಿಶ್ಚಿತವಾಗಿದೆ.ಹೀಗಾಗಿ ಅದನ್ನು ಕೂಡಲೇ ರದ್ದುಪಡಿಸಬೇಕು ಎಂದು ತಾಲೂಕು ಎನ್‌ಪಿಎಸ್ ಸಂಘದ ಅಧ್ಯಕ್ಷ ರಾಮಕಷ್ಣ ಕಟ್ಕಾವಲಿ ಆಗ್ರಹಿಸಿದ್ದಾರೆ.
Vijaya Karnataka Web hosa pinciiyjane raddhatige graha
ಹೊಸ ಪಿಂಚಿಣಿಯೋಜನೆ ರದ್ಧತಿಗೆ ಆಗ್ರಹ


ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ರಮೇಶ ಬಾಬು ಹಾಲು ಮೂಲಕ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು,

ನೌಕರರ ಇಳಿವಯಸ್ಸಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿಯನ್ನು 2004ರಿಂದ ಕೇಂದ್ರ ಸರಕಾರ ಹಾಗೂ 2006 ರಿಂದ ರಾಜ್ಯ ಸರಕಾರಗಳು ರದ್ದು ಮಾಡಿ ಹೊಸ ಪಿಂಚಿಣಿಯೋಜನೆಯನ್ನು ಘೋಷಿಸಿ ಸರಕಾರಿ ನೌಕರರಲ್ಲಿಯೇ ಎರಡು ಗುಂಪುಗಳನ್ನಾಗಿ ವಿಂಗಡಿಸಿದೆ. ನೌಕರನ ವೇತನದಿಂದ ಶೇ. 10 ರಷ್ಟನ್ನು ಕಡಿತಗೊಳಿಸಿ ಸರಕಾರ ಅದಕ್ಕೆ ಸಮಾನವಾದ ಮೊತ್ತವನ್ನು ವಂತಿಗೆ ರೂಪದಲ್ಲಿ ನೀಡುತ್ತಿದೆ. ಹಾಗೇ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆ ಯಲ್ಲಿ ತೊಡಗಿಲಾಗುತ್ತಿರುವುದರಿಂದ ನಷ್ಟ ಅನುಭವಿಸಿದರೆ ಹಣಕ್ಕೆ ಯಾವುದೇ ಭದ್ರತೆ ನೀಡಿಲ್ಲ. ಈಗಾಗಲೇ ಫ್ರಾನ್ಸ್, ಸ್ಪೇನ್, ಗ್ರೀಸ್ ಹಾಗೂ ಡೆನ್ಮಾರ್ಕ್‌ನಲ್ಲಿ ಇದೇರೀತಿ ಷೇರು ಮಾರುಕಟ್ಟೆಯಲ್ಲಿ ನೌಕರ ಹಣವನ್ನು ಹೂಡಿದ ಕಂಪನಿಗಳು ಇತ್ತೀಚಿನ ಜಗತ್ತಿನ ಆರ್ಥಿಕ ಕುಸಿತದಿಂದ ನಷ್ಟ ಅನುಭವಿಸಿ ದಿವಾಳಿಯಾಗಿವೆ.

ಕೂಡಲೇ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಈ ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಸನಗೌಡ ಬೆಳ್ಳಿಕಟ್ಟಿ, ರಾಜಶೇಖರ ಪತ್ತಾರ, ಶಿವಾನಂದ ಜಾಯಿ, ಸಂಜೀವಕುಮಾರ, ಆನಂದ ಕಾಜಗಾರ, ಗುರುಸ್ವಾಮಿ, ರಮೇಶ ಹೊಸ್ಮನಿ, ಬಸವರಾಜ, ಭೀಮಾಶಂಕರ, ಗುರುಮೂರ್ತಿ, ಕಲ್ಲಪ್ಪ, ಪರಸಪ್ಪ, ಅಯ್ಯನಗೌಡ, ಸಂತೋಷಚವ್ಹಾಣ, ರಮೇಶ ನಾಯಕ, ಸಂತೋಷ, ಗೌರೀಶ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ