ಆ್ಯಪ್ನಗರ

ಸಂಸದ ಖರ್ಗೆ ದೇಶದ ಎರಡನೇ ಅಂಬೇಡ್ಕರ್‌: ರಾಜಶೇಖರ ಪಾಟೀಲ್‌

ಗುರುಮಠಕಲ್‌ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕಚೇರಿ ಕಟ್ಟಡ ಉದ್ಘಾಟನೆ ಬಳಿಕ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

Vijaya Karnataka 11 Mar 2019, 8:22 am
ಯಾದಗಿರಿ: ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಎರಡನೇ ಅಂಬೇಡ್ಕರ್‌. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ದೇಶ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್‌ ಹೇಳಿದರು.
Vijaya Karnataka Web Kharge


ಗುರುಮಠಕಲ್‌ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕಚೇರಿ ಕಟ್ಟಡ ಉದ್ಘಾಟನೆ ಬಳಿಕ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಖರ್ಗೆಜಿ 8 ಬಾರಿ ಶಾಸಕರಾಗಿ, 2 ಬಾರಿ ಲೋಕಸಭೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಮತದಾರರು ಇವರಿಗೆ ಕೂಲಿ ಕೊಡುವ ಕಾಲ ಇದೀಗ ಕೂಡಿ ಬಂದಿದೆ. ಪ್ರಧಾನಿ ಮೋದಿ ಅವರನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಖರ್ಗೆ ಅವರಿಗೆ ಮಾತ್ರ ಇದೆ. ಇದನ್ನು ಗುರುಮಠಕಲ್‌ ಕ್ಷೇತ್ರದ ಜನತೆ ಅರಿತು ಮತ ನೀಡಬೇಕು ಎಂದು ಕೋರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ದೇಶದ ಜನತೆ ಕಾಂಗ್ರೆಸ್‌ ಪಕ್ಷ ಕ್ಕೆ ಮತ ನೀಡುವುದು ಅಗತ್ಯವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರೀ ಹುಸಿ ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕಳೆದ ಐದು ವರ್ಷಗಳಲ್ಲಿ ಆಡಳಿತ ನಡೆಸಿದರೂ ಸಹ ದೇಶಕ್ಕೆ ಏನೂ ಕೊಡುಗೆ ನೀಡಿಲ್ಲ. ಇದೊಂದು ರೈತ ವಿರೋಧಿ ಸರಕಾರವಾಗಿದೆ. ಕೋಮುವಾದ ಸರಕಾರವನ್ನು ಈ ಬಾರಿ ಮತದಾರರು ಸಂಪೂರ್ಣವಾಗಿ ಬುಡಸಮೇತ ಕಿತ್ತು ಹಾಕಬೇಕು. ಜನರಿಗೆ ಸಂವಿಧಾನ ಉಳಿಸುವ ಪಕ್ಷ ವಾಗಿರುವ ಕಾಂಗ್ರೆಸ್ಸಿಗೆ ಮತ ಹಾಕಬೇಕು ಎಂದು ಹೇಳಿದರು.

ಪಾಲ್ಗೊಂಡ ಗಣ್ಯರು

ವಿಧಾನ ಪರಿಷತ್‌ ಸದಸ್ಯರಾದ ಶರಣಪ್ಪ ಮಟ್ಟೂರ, ಬಸವರಾಜ ಪಾಟೀಲ್‌ ಇಟಗಿ, ಅರವಿಂದ ಅರಳಿ, ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ್‌, ಕಲುಬರಗಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ರಾಯಚೂರು ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್‌ ವಜ್ಜಲ್‌, ಜಿಪಂ ಮಾಜಿ ಅಧ್ಯಕ್ಷ ಬಸರಡ್ಡಿಗೌಡ ಮಾಲಿ ಪಾಟೀಲ್‌ ಅನಪೂರ, ಮಹಿಪಾಲರೆಡ್ಡಿ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ, ರಾಧಾಕೃಷ್ಣ, ಡೇವಿಡ್‌ ಸಿಮಿಯೋನ್‌, ಕೆ.ವಿ.ಗೌತಂ, ಚಿದಾನಂದಪ್ಪ ಕಾಳಬೆಳಗುಂದಿ, ಭೀಮರೆಡ್ಡಿ ಉಟ್ಕೂರ, ರಾಘವೇಂದ್ರ ಮಾನಸಗಲ್‌, ಶಾಂತರೆಡ್ಡಿ ದೇಸಾಯಿ, ಬುಚ್ಚಣ್ಣ ಜೈಗ್ರಾಂ, ಬಾಷು ರಾಠೋಡ್‌, ಶರಣಪ್ಪಗೌಡ ಮಲ್ಹಾರ ಸೇರಿದಂತೆ ಇನ್ನಿತರರಿದ್ದರು.

ಬಿಜೆಪಿ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದೆ. ಹೀಗಾಗಿ ಇವರಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಬೇಕು.ಸಂಸದ ಖರ್ಗೆ ಅವರು ಅಭಿವೃದ್ಧಿ ಪರ ಮತ್ತು ಜನಪರವಾಗಿ ಆಡಳಿತ ನೀಡುವ ಮೂಲಕ ಅವರು ದೇಶದಲ್ಲಿ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡಬೇಕು - ಡಾ. ಶರಣ ಪ್ರಕಾಶ್‌ ಪಾಟೀಲ್‌,ಮಾಜಿ ಸಚಿವ

ಬಿಜೆಪಿಗರು ಬರೀ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಮತದಾರರು ಇವರ ಬಣ್ಣದ ಮಾತುಗಳಿಗೆ ಯಾವುದೇ ಕಾರಣಕ್ಕೂ ಈ ಬಾರಿ ಮರಳಾಗಬಾರದು. ಅವರಿಗೆ ತಕ್ಕಪಾಠ ಕಲಿಸಬೇಕು-
ಮರಿಗೌಡ ಹುಲ್ಕಲ್‌,ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ಪ್ರಧಾನಿ ಮೋದಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಸಂಸದ ಖರ್ಗೆ ಅವರಿಗಿದೆ. ಹೀಗಾಗಿ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು- ಬಿ.ವಿ.ನಾಯಕ್‌ ,ಸಂಸದ ,ರಾಯಚೂರು.

ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಅವರು ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕೆಂದು ಹೇಳುತ್ತಿದ್ದಾರೆ. ಬಿಜೆಪಿ ಈ ಕೆಲಸ ಶೀಘ್ರವೇ ಮಾಡಲಿದೆ ಎಂದು ಹೇಳುವ ಮೂಲಕ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ- ರಾಜಗೋಪಾಲರೆಡ್ಡಿ ,ಕಾಂಗ್ರೆಸ್‌ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ