ಕೊಡೇಕಲ್ (ಯಾದಗಿರಿ): ಹೆಚ್ಚುತ್ತಿರುವ ಒಳ ಹರಿವಿನಿಂದಾಗಿ ರಾಜ್ಯದ ಮೂರನೇ ಹಾಗೂ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಅಣೆಕಟ್ಟಾದ ನಾರಾಯಣಪುರ ಬಸವಸಾಗರ ಜಲಾಶಯ ಸದ್ಯ ಭರ್ತಿಯಾಗಿದ್ದು, 5 ಕ್ರಸ್ಟ್ ಗೇಟ್ಗಳ ಮೂಲಕ 45 ಸಾವಿರ ಕ್ಯೂಸೆಕ್ ನೀರನ್ನು ಬುಧವಾರದಿಂದ ಕೃಷ್ಣೆಗೆ ಹರಿಸಲಾಗುತ್ತಿದೆ. ಮಹಾರಾಷ್ಟ್ರದ ಮಹಾಬಲೇಶ್ವರ, ಮುಂಬೈ, ಸಾಂಗ್ಲಿ, ಮೀರಜ್ ಸೇರಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿರುವ ಕಾರಣ, ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಿದ್ದರಿಂದ ನಾರಾಯಣ ಪುರದ ಬಸವಸಾಗರ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಹೀಗಾಗಿ, ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿದ್ದು, ಜಲಾಶಯದ 5 ಮುಖ್ಯ ಕ್ರಸ್ಟ್ ಗೇಟುಗಳನ್ನು ತೆರೆಯುವ ಮೂಲಕ 45 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಕೃಷ್ಣೆಯ ಒಡಲು ಭೋರ್ಗರೆಯುವ ಹಂತಕ್ಕೆ ತಲುಪಿದೆ. ನದಿ ತೀರದ ಜುಮಾಲಪುರ, ಬಂಡೊಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಮೀನುಗಾರರು, ರೈತರು ಹಾಗೂ ಜಾನುವಾರು ನದಿಗೆ ಇಳಿಯದಂತೆ ಸೂಚನೆ ಹೊರಡಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ ನೀರಿನ ಸಂಗ್ರಹ 489. 70 ಮೀ ತಲುಪಿದೆ. ಪೂರ್ಣ ಭರ್ತಿಯಾಗಲು ಮೂರು ಮೀಟರ್ ಮಾತ್ರ ಬಾಕಿ ಇದೆ. ಇದರಿಂದಾಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಕ್ರಸ್ಟ್ ಗೇಟ್ಗಳಿಗೆ ಸಾಂಪ್ರದಾಯಿಕ ಪದ್ದತಿಯಂತೆ ಪೂಜೆ ಸಲ್ಲಿಸಿ ಜಲಾಶಯದ 5 ಗೇಟ್ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.
ಜಲಾಶಯಕ್ಕೆ ಬುಧವಾರ ರಾತ್ರಿ ವೇಳೆ ಇನ್ನೂ ಹೆಚ್ಚಿನ ಒಳಹರಿವು ಉಂಟಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗೇಟ್ಗಳ ಮೂಲಕ ನದಿಗೆ ನೀರು ಹರಿಸುವ ಸಂಭವ ಹೆಚ್ಚಾಗಿದೆ. ನದಿ ತೀರದ ಗ್ರಾಮಗಳ ಜನರು ತಮ್ಮ ಸರಕು ಸಾಮಗ್ರಿಗಳು ಮತ್ತು ಸಾಕು ಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮಾಹಿತಿ ನೀಡಲಾಗಿದೆ.
'ಬಸವ ಸಾಗರ ಭರ್ತಿಯಾಗಿದ್ದು, ಗೇಟ್ ತೆರೆದು 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಒಳ ಹರಿವು ಹೆಚ್ಚಳವಾಗುವ ಕಾರಣ ನೀರಿನ ಮಟ್ಟ ಕಾಯ್ದುಕೊಂಡು ಗಮನ ಹರಿಸಿದ್ದೇವೆ. ನದಿ ತೀರದ ಜನ-ಜಾನುವಾರು ಎಚ್ಚರ ವಹಿಸಬೇಕು. ಈ ಕುರಿತು ಡಿಸಿ ಹಾಗೂ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದೆ' ಎಂದು ನಾರಾಯಣಪುರ ಮುಖ್ಯ ಅಭಿಯಂತರ ಎಸ್. ರಂಗಾರಾಮ್ ಮಾಹಿತಿ ನೀಡಿದ್ದಾರೆ.
ಕೃಷ್ಣೆಯ ಒಡಲು ಭೋರ್ಗರೆಯುವ ಹಂತಕ್ಕೆ ತಲುಪಿದೆ. ನದಿ ತೀರದ ಜುಮಾಲಪುರ, ಬಂಡೊಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಮೀನುಗಾರರು, ರೈತರು ಹಾಗೂ ಜಾನುವಾರು ನದಿಗೆ ಇಳಿಯದಂತೆ ಸೂಚನೆ ಹೊರಡಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ ನೀರಿನ ಸಂಗ್ರಹ 489. 70 ಮೀ ತಲುಪಿದೆ. ಪೂರ್ಣ ಭರ್ತಿಯಾಗಲು ಮೂರು ಮೀಟರ್ ಮಾತ್ರ ಬಾಕಿ ಇದೆ. ಇದರಿಂದಾಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಕ್ರಸ್ಟ್ ಗೇಟ್ಗಳಿಗೆ ಸಾಂಪ್ರದಾಯಿಕ ಪದ್ದತಿಯಂತೆ ಪೂಜೆ ಸಲ್ಲಿಸಿ ಜಲಾಶಯದ 5 ಗೇಟ್ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.
ಜಲಾಶಯಕ್ಕೆ ಬುಧವಾರ ರಾತ್ರಿ ವೇಳೆ ಇನ್ನೂ ಹೆಚ್ಚಿನ ಒಳಹರಿವು ಉಂಟಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಗೇಟ್ಗಳ ಮೂಲಕ ನದಿಗೆ ನೀರು ಹರಿಸುವ ಸಂಭವ ಹೆಚ್ಚಾಗಿದೆ. ನದಿ ತೀರದ ಗ್ರಾಮಗಳ ಜನರು ತಮ್ಮ ಸರಕು ಸಾಮಗ್ರಿಗಳು ಮತ್ತು ಸಾಕು ಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮಾಹಿತಿ ನೀಡಲಾಗಿದೆ.
'ಬಸವ ಸಾಗರ ಭರ್ತಿಯಾಗಿದ್ದು, ಗೇಟ್ ತೆರೆದು 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಒಳ ಹರಿವು ಹೆಚ್ಚಳವಾಗುವ ಕಾರಣ ನೀರಿನ ಮಟ್ಟ ಕಾಯ್ದುಕೊಂಡು ಗಮನ ಹರಿಸಿದ್ದೇವೆ. ನದಿ ತೀರದ ಜನ-ಜಾನುವಾರು ಎಚ್ಚರ ವಹಿಸಬೇಕು. ಈ ಕುರಿತು ಡಿಸಿ ಹಾಗೂ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದೆ' ಎಂದು ನಾರಾಯಣಪುರ ಮುಖ್ಯ ಅಭಿಯಂತರ ಎಸ್. ರಂಗಾರಾಮ್ ಮಾಹಿತಿ ನೀಡಿದ್ದಾರೆ.