ಆ್ಯಪ್ನಗರ

ಭಕ್ತರಿಗೆ ಮಾತಾ ಮಾಣಿಕೇಶ್ವರಿ ದರ್ಶನ

ಗುರುಪೂರ್ಣಿಮೆ ಹಾಗೂ ತಮ್ಮ 86ನೇ ಜನ್ಮ ದಿನದ ನಿಮಿತ್ತ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಣಿಕ್ಯಗಿರಿಯಲ್ಲಿ ಸಹಸ್ರಾರು ಭಕ್ತರಿಗೆ ದರುಶನ ನೀಡಿದರು.

Vijaya Karnataka 26 Jul 2019, 9:12 pm
ಗುರುಮಠಕಲ್‌ :ಗುರುಪೂರ್ಣಿಮೆ ಹಾಗೂ ತಮ್ಮ 86ನೇ ಜನ್ಮ ದಿನದ ನಿಮಿತ್ತ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಣಿಕ್ಯಗಿರಿಯಲ್ಲಿ ಸಹಸ್ರಾರು ಭಕ್ತರಿಗೆ ದರುಶನ ನೀಡಿದರು.
Vijaya Karnataka Web mata manikeshwari darshan for devotees
ಭಕ್ತರಿಗೆ ಮಾತಾ ಮಾಣಿಕೇಶ್ವರಿ ದರ್ಶನ


ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಹಾಸಿಗೆಯಿಂದ ವೀಲ್‌ ಚೇರ್‌ ಮೂಲಕ ಹೊರಬಂದು ಭಕ್ತರಿಗೆ ದರುಶನ ನೀಡಿದರು.

ತಾಲೂಕಿನ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದ ಹಿಂಬದಿಯಲ್ಲಿರುವ, ಗುಹೆಯ ಹೊರಭಾಗದ ಆಸನದಲ್ಲಿ ಮಂಗಳವಾರ ಮಧ್ಯಾಹ್ನ 2ಗಂಟೆಗೆ (10 ನಿಮಿಷ)ಕಾಣಿಸಿಕೊಂಡರು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾತಾ ಮಾಣಿಕೇಶ್ವರಿ ಅಮ್ಮನವರು ದರುಶನ ನೀಡುವುದಿಲ್ಲ. ವೀಲ್‌ ಚೇರ್‌ ಮೇಲೆ ಕೂರಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಭಕ್ತರ ಮೊಗದಲ್ಲಿ ನಿರಾಸೆಯ ಭಾವ ಮೂಡಿತ್ತು. ಅನೇಕ ಭಕ್ತರು ಹಿಂದಿರುಗಲು ಮುಂದಾಗಿದ್ದರು. ಆದರೆ ಕೆಲ ಸಮಯದ ನಂತರ ಅಮ್ಮನವರು ದರುಶನ ನೀಡಲಿದ್ದಾರೆ ಎಂಬ ಸಂದೇಶ ಬಂದ ನಂತರ ಭಕ್ತರಲ್ಲಿ ನವಚೈತನ್ಯ ಮೂಡಿಸಿತು.

ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಭಕ್ತರ ಅಮ್ಮನವರ ದರುಶನಕ್ಕಾಗಿ ಆಗಮಿಸಿದ್ದರು. ಬೆಳಗ್ಗೆಯಿಂದಲೇ ಬೆಟ್ಟದ ತುಂಬೆಲ್ಲಾ ಓಂಕಾರ, ಜೈಕಾರಗಳು ಮೊಳಗುತ್ತಿದ್ದವು.

ಮಾತಾಜಿಯವರ ಜನ್ಮ ಸ್ಥಳವಾದ ಸೇಡಂ ತಾಲೂಕಿನ ಮಲ್ಲಾಬಾದ್‌ ಗ್ರಾಮದಲ್ಲಿ ಮಾಣಿಕೇಶ್ವರಿ ಸೇವಾ ಸಮಿತಿಯಿಂದ ಅಮ್ಮನವರ ಆರೋಗ್ಯಚೇತರಿಕೆಯಾಗಲಿ ಎಂದು ಮಹಾ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ