ಆ್ಯಪ್ನಗರ

ಸಕಲರ ಬದುಕು ಸಮೃದ್ಧವಾಗಲಿ

ಈ ನಾಡಿನ ಸಮಸ್ತ ಜನತೆ ಶಾಂತಿ, ಸಹನೆಯಿಂದ ಬಾಳಿ ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ಸಕಲರ ಬದುಕು ಸಮೃದ್ಧವಾಗಿರಲಿ ಎಂದು ಅಬ್ಬೆತುಮಕೂರಿನ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಹೇಳಿದರು.

Vijaya Karnataka 5 Aug 2019, 6:40 pm
ಯಾದಗಿರಿ : ಈ ನಾಡಿನ ಸಮಸ್ತ ಜನತೆ ಶಾಂತಿ, ಸಹನೆಯಿಂದ ಬಾಳಿ ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ಸಕಲರ ಬದುಕು ಸಮೃದ್ಧವಾಗಿರಲಿ ಎಂದು ಅಬ್ಬೆತುಮಕೂರಿನ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಹೇಳಿದರು.
Vijaya Karnataka Web may all lives be prosperous
ಸಕಲರ ಬದುಕು ಸಮೃದ್ಧವಾಗಲಿ


ಗುರುವಾರದಂದು ರಾತ್ರಿ ಶ್ರೀಮಠದಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಶ್ರೀ ವಿಶ್ವಾರಾಧ್ಯರು ದೈವಾಂಶ ಸಂಭೂತರು ಅವರು ಬಾಳಿ ಬದುಕಿದ ಸಂದರ್ಭದಲ್ಲಿ ಈ ಲೋಕದ ಜನತೆಯನ್ನು ಉದ್ಧರಿಸಿದ ಮಹಿಮಾಪುರುಷರು, ಅವರ ಕೃಪಾ ಕಟಾಕ್ಷ ಇಂದಿಗೂ ಸಮಸ್ತ ಭಕ್ತರನ್ನು ಕರುಣಿಸಿ ಕಾಪಾಡುತ್ತಿದೆ ಎಂದು ಹೇಳಿದರು.

ವಿಶ್ವಾರಾಧ್ಯರ ಜನ್ಮಕ್ಷೇತ್ರದಿಂದ ಪ್ರತಿವರ್ಷವೂ 3ದಿನಗಳ ಕಾಲ ಪಾದಯಾತ್ರೆಯನ್ನು ಪರಂಪರಾನುಗತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಲಕ್ಷಾಂತರ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಿದ್ದಾರೆ. ಭಕ್ತಿಯಿಂದ ಪಾಲ್ಗೊಂಡ ಎಲ್ಲರಿಗೂ ವಿಶ್ವಾರಾಧ್ಯ ಕರುಣಿಸಿ ಕಾಪಾಡುತ್ತಾನೆ ಎಂದರು.

ಪಾದಯಾತ್ರೆಯ ಸಂದರ್ಭದಲ್ಲಿ ಅನೇಕರು ದಾಸೋಹ ಕೈಂಕರ್ಯವನ್ನು ನೆರವೇರಿಸಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಜೆಸ್ಕಾಂ ಹೀಗೆ ಅನೇಕ ಅಧಿಕಾರಿಗಳು ಕೂಡ ಪಾದಯಾತ್ರಿಗಳಿಗೆ ತೊಂದರೆಯಾಗದಂತೆ ಅನುಕೂಲ ಮಾಡಿಕೊಟ್ಟಿದ್ದು, ಅವರೆಲ್ಲರಿಗೂ ವಿಶ್ವಾರಾಧ್ಯರು ಕರುಣಿಸಿ ಕಾಪಾಡಲಿ ಎಂದು ಶುಭ ಹಾರೈಸಿದರು.

ಶ್ರೀಗಳು ಪಾದಯಾತ್ರೆಯಲ್ಲಿ ಅಬ್ಬೆತುಮಕೂರಿನ ಪಾದಗಟ್ಟೆಯನ್ನು ತಲುಪುತ್ತಲೇ ಅಲ್ಲಿ ಪಾಳಾಶ್ರೀಗಳು, ದೇವಾಪುರ ಶ್ರೀಗಳು, ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಅಕ್ಕಲಕೋಟದ ಶಾಸಕ ಸಿದ್ದರಾಮ ಮೇತ್ರೆ, ಮಾಜಿ ಶಾಸಕರಾದ ಡಾ.ವೀರಬಸವಂತರಡ್ಡಿ ಮುದ್ನಾಳ, ಚೆನ್ನಾರಡ್ಡಿ ಪಾಟೀಲ ತುನ್ನೂರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋುಷಿಕೇಶ ಭಗವಾನ್‌ ಸೋನುವಾಣೆ, ಚೆನ್ನಪ್ಪಗೌಡ ಮೋಸಂಬಿ, ಡಾ.ಸುಭಾಶ್ಚಂದ್ರ ಕೌಲಗಿ, ನರಸಣ್ಣಗೌಡ ರಾಯಚೂರು, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರಡ್ಡಿ ಸೇರಿದಂತೆ ಅನೇಕ ಗಣ್ಯರು ಶ್ರೀಗಳಿಗೆ ಮಾಲಾರ್ಪಣೆ ಮಾಡಿ ತಮ್ಮ ಗೌರವವನ್ನು ತೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ