ಯಾದಗಿರಿ: ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿರೋ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ನಂಟು ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಪ್ಪು ಯಾರೆ ಮಾಡಿದ್ರು ಕ್ರಮಕೈಗೊಳ್ಳಲಾಗುತ್ತೆ, ಕಾನೂನು ಇದೆ, ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಿದ್ದಾರೆ ಎಂದು ತಿಳಿಸಿದರು. ರಾಜಕಾರಣಿಗಳ ಮಕ್ಕಳು ಇದರಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೆ ಮಾಹಿತಿ ಇಲ್ಲ ಎಂದ ಅಶೋಕ್, ಹಾಗೇನಾದರೂ ಮಾಹಿತಿ ಸಿಕ್ಕರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದರು.
ಶಿರಾ ಬೈಎಲೆಕ್ಷನ್ ಗೆಲುವಿಗೆ ಕಾಂಗ್ರೆಸ್ ರಣತಂತ್ರ; ಡಿಕೆಶಿ ನೇತೃತ್ವದಲ್ಲಿ ಕೈ ನಾಯಕರ
ನೆರೆ ಪರಿಹಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಗೆ ಈಗ ಕೊಟ್ಟಿರುವ ಪರಿಹಾರ ಕಡಿಮೆಯಿದೆ. ನೆರೆ ಪರಿಹಾರಕ್ಕಾಗಿ ನಾಳೆ ಸಿಎಂ ಅವರು ದೆಹಲಿಗೆ ಹೋಗ್ತಾರೆ, ನಾನು ದೆಹಲಿಗೆ ಹೋಗ್ತಾ ಇಲ್ಲ ಎಂದ ಆರ್ ಅಶೋಕ್, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡ್ತಾರೆ. ಈಗಾಗಲೇ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಅಶೋಕ್ ಹೇಳಿದರು.
ಶಿರಾ ಬೈಎಲೆಕ್ಷನ್ಗೆ ಕಾಂಗ್ರೆಸ್ ಟಿಕೆಟ್ ಫೈನಲ್; ಕೈ ಅಭ್ಯರ್ಥಿಯಾಗಿ ಟಿಬಿ ಜಯಚಂದ್ರ ಕಣಕ್ಕೆ..!
ಇನ್ನು ನಮಗೆ ಈಗಾಗಲೇ ಕೊಟ್ಟಿರುವ ನೆರೆ ಪರಿಹಾರ ಕಡಿಮೆ ಇದೆ. ಎರಡನೇ ಕಂತಿನಲ್ಲಿ 395 ಕೋಟಿ ಕೊಟ್ಟಿದ್ದಾರೆ, ಅದು ಸಾಕಾಗಲ್ಲ. ಇನ್ನು ಹೆಚ್ಚು ಪರಿಹಾರ ಕೊಡಬೇಕು ಎನ್ನುವುದು ನಮ್ಮ ಬೇಡಿಕೆ ಇದೆ ಎಂದು ಹೇಳಿದರು. ಅಲ್ಲದೇ, ಕಳೆದ ಒಂದು ವಾರದಿಂದ ಕಲಬುರ್ಗಿ ಯಾದಗಿರಿ ಭಾಗದಲ್ಲಿ ಮಳೆಯಾಗಿ ಪ್ರವಾಹ ಉಂಟಾಗಿದೆ. ಜಿಲ್ಲಾಧಿಕಾರಿಗಳಿಗೆ ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೆನೆ. ಅದು ಸಹ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತೆ. ನಾಳೆ ಸಿಎಂ ದೆಹಲಿಗೆ ಹೋದ್ರು ಸಹ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲ್ಲ. ಅದಿವೇಶನ ಮುಗಿದ ಮೇಲೆ ಸಂಪುಟ ವಿಸ್ತರಣೆ ಮಾಡಲಾಗುತ್ತೆ ಎಂದು ಹೇಳಿದರು.
ಡ್ರಗ್ಸ್ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ನಂಟು ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಪ್ಪು ಯಾರೆ ಮಾಡಿದ್ರು ಕ್ರಮಕೈಗೊಳ್ಳಲಾಗುತ್ತೆ, ಕಾನೂನು ಇದೆ, ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಿದ್ದಾರೆ ಎಂದು ತಿಳಿಸಿದರು. ರಾಜಕಾರಣಿಗಳ ಮಕ್ಕಳು ಇದರಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೆ ಮಾಹಿತಿ ಇಲ್ಲ ಎಂದ ಅಶೋಕ್, ಹಾಗೇನಾದರೂ ಮಾಹಿತಿ ಸಿಕ್ಕರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದರು.
ಶಿರಾ ಬೈಎಲೆಕ್ಷನ್ ಗೆಲುವಿಗೆ ಕಾಂಗ್ರೆಸ್ ರಣತಂತ್ರ; ಡಿಕೆಶಿ ನೇತೃತ್ವದಲ್ಲಿ ಕೈ ನಾಯಕರ
ನೆರೆ ಪರಿಹಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಗೆ ಈಗ ಕೊಟ್ಟಿರುವ ಪರಿಹಾರ ಕಡಿಮೆಯಿದೆ. ನೆರೆ ಪರಿಹಾರಕ್ಕಾಗಿ ನಾಳೆ ಸಿಎಂ ಅವರು ದೆಹಲಿಗೆ ಹೋಗ್ತಾರೆ, ನಾನು ದೆಹಲಿಗೆ ಹೋಗ್ತಾ ಇಲ್ಲ ಎಂದ ಆರ್ ಅಶೋಕ್, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡ್ತಾರೆ. ಈಗಾಗಲೇ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಅಶೋಕ್ ಹೇಳಿದರು.
ಶಿರಾ ಬೈಎಲೆಕ್ಷನ್ಗೆ ಕಾಂಗ್ರೆಸ್ ಟಿಕೆಟ್ ಫೈನಲ್; ಕೈ ಅಭ್ಯರ್ಥಿಯಾಗಿ ಟಿಬಿ ಜಯಚಂದ್ರ ಕಣಕ್ಕೆ..!
ಇನ್ನು ನಮಗೆ ಈಗಾಗಲೇ ಕೊಟ್ಟಿರುವ ನೆರೆ ಪರಿಹಾರ ಕಡಿಮೆ ಇದೆ. ಎರಡನೇ ಕಂತಿನಲ್ಲಿ 395 ಕೋಟಿ ಕೊಟ್ಟಿದ್ದಾರೆ, ಅದು ಸಾಕಾಗಲ್ಲ. ಇನ್ನು ಹೆಚ್ಚು ಪರಿಹಾರ ಕೊಡಬೇಕು ಎನ್ನುವುದು ನಮ್ಮ ಬೇಡಿಕೆ ಇದೆ ಎಂದು ಹೇಳಿದರು. ಅಲ್ಲದೇ, ಕಳೆದ ಒಂದು ವಾರದಿಂದ ಕಲಬುರ್ಗಿ ಯಾದಗಿರಿ ಭಾಗದಲ್ಲಿ ಮಳೆಯಾಗಿ ಪ್ರವಾಹ ಉಂಟಾಗಿದೆ. ಜಿಲ್ಲಾಧಿಕಾರಿಗಳಿಗೆ ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೆನೆ. ಅದು ಸಹ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತೆ. ನಾಳೆ ಸಿಎಂ ದೆಹಲಿಗೆ ಹೋದ್ರು ಸಹ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲ್ಲ. ಅದಿವೇಶನ ಮುಗಿದ ಮೇಲೆ ಸಂಪುಟ ವಿಸ್ತರಣೆ ಮಾಡಲಾಗುತ್ತೆ ಎಂದು ಹೇಳಿದರು.