ಆ್ಯಪ್ನಗರ

ಮಂತ್ರಿ ಸ್ಥಾನ ಮರೀಚಿಕೆ ನಿಗಮ ಮಂಡಳಿಗೆ ತೃಪ್ತಿ

ಸಮ್ಮಿಶ್ರ ಸರಕಾರದಲ್ಲಿ ಜಿಲ್ಲೆಯ ಶಾಸಕರಿಬ್ಬರಿಗೆ ಮಂತ್ರಿ ಸ್ಥಾನ ದೊರೆಯಬಹುದು ನೀರಿಕ್ಷೆಯಲ್ಲಿದ್ದ ಜನತೆ ಇದೀಗ ಕೇವಲ ನಿಗಮ,ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಈ ಮೊದಲು ಜಿಲ್ಲೆಗೆ ಎರಡು ಸಚಿವ ಸ್ಥಾನ ದೊರೆಯಬಹುದು ಎಂಬ ನೀರಿಕ್ಷೆ ಇತ್ತು. ಆದರೆ, ಈ ಇಬ್ಬರ ಮೇಲೆ ಜಿಲ್ಲೆಯ ಅಭಿವೃದ್ಧಿ ಮಾಡುವ ಪ್ರಮುಖ ಜವಾಬ್ದಾರಿ ಹೆಗಲೇರಿದಂತಾಗಿದೆ.

Vijaya Karnataka 10 Mar 2019, 5:00 am
ಮಲ್ಲಪ್ಪ ಸಂಕೀನ್‌, ಯಾದಗಿರಿ :ಸಮ್ಮಿಶ್ರ ಸರಕಾರದಲ್ಲಿ ಜಿಲ್ಲೆಯ ಶಾಸಕರಿಬ್ಬರಿಗೆ ಮಂತ್ರಿ ಸ್ಥಾನ ದೊರೆಯಬಹುದು ನೀರಿಕ್ಷೆಯಲ್ಲಿದ್ದ ಜನತೆ ಇದೀಗ ಕೇವಲ ನಿಗಮ,ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಈ ಮೊದಲು ಜಿಲ್ಲೆಗೆ ಎರಡು ಸಚಿವ ಸ್ಥಾನ ದೊರೆಯಬಹುದು ಎಂಬ ನೀರಿಕ್ಷೆ ಇತ್ತು. ಆದರೆ, ಈ ಇಬ್ಬರ ಮೇಲೆ ಜಿಲ್ಲೆಯ ಅಭಿವೃದ್ಧಿ ಮಾಡುವ ಪ್ರಮುಖ ಜವಾಬ್ದಾರಿ ಹೆಗಲೇರಿದಂತಾಗಿದೆ.
Vijaya Karnataka Web ministries are satisfied corporation council
ಮಂತ್ರಿ ಸ್ಥಾನ ಮರೀಚಿಕೆ ನಿಗಮ ಮಂಡಳಿಗೆ ತೃಪ್ತಿ

ಎರಡು ಕೂಡ ಪ್ರಮುಖ ನಿಗಮ ಮಂಡಳಿಗಳ ಸಾರಥಿಗಳು ಜಿಲ್ಲೆಗೆ ಪಾಲಾಗಿವೆ. ಒಂದು ಕಾಂಗ್ರೆಸ್‌ ಮತ್ತೊಂದು ಜೆಡಿಎಸ್‌ ಶಾಸಕರು ಅಧ್ಯಕ್ಷ ರಾಗಿದ್ದಾರೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಗಿ ಶಹಾಪುರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ನೇಮಿಸಲಾಗಿದೆ. ಇನ್ನೂ ಗುರುಮಠಕಲ್‌ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರನ್ನು ಕರ್ನಾಟಕ ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಗಿ ಮಾಡಿದ್ದು ,ಎರಡು ಸಹ ಮಹತ್ತರವಾದ ಹುದ್ದೆಗಳು ದೊರಕಿವೆ. ಕಳೆದ 2018 ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶದ ಬಳಿಕ ನಾಡಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು.

ಈ ಬಾರಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುವುದು ಪಕ್ಕಾ ಎಂಬ ಖಾತ್ರಿ ಜನರಲ್ಲಿ ಮನೆ ಮಾಡಿತ್ತು. ಜೆಡಿಎಸ್‌ನಿಂದ ನಾಗನಗೌಡ ಕಂದಕೂರ ಅಥವಾ ಕಾಂಗ್ರೆಸ್‌ನಿಂದ ಶರಣಬಸಪ್ಪಗೌಡ ದರ್ಶನಾಪುರ ಅವರ ಪೈಕಿ ಒಬ್ಬರಿಗಾದರೂ ಮಂತ್ರಿ ಅವಕಾಶ ದೊರೆಯಲಿದೆ ಎಂಬ ವಿಶ್ವಾಸವಿತ್ತು.

ಜಿಲ್ಲೆಯ ಜ್ವಲಂತ ಸಮಸ್ಯೆಗಳು ನಿವಾರಣೆಯಾಗಲಿ: ಕೊನೆಗೂ ಇಬ್ಬರಿಗೂ ಸಹ ನಿಗಮಂಡಳಿ ಪಟ್ಟ ದೊರಕಿದೆ. ರಾಜ್ಯ ಆಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಸಹ ಪ್ರಮುಖವಾಗಿದೆ. ಏನಾದರೂ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮಹತ್ತರ ಅವಕಾಶ ಇದಕ್ಕೆ ಇದೆ.ಇನ್ನೂ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹ ಪ್ರಮುಖವಾಗಿದೆ. ಯಾದಗಿರಿ ಜಿಲ್ಲೆಯಾಗಿ 9 ವರ್ಷ ಕಳೆದಿದೆ.ಆದರೆ, ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಹೊಂದಿಲ್ಲ. ಮೂಲ ಸೌಲಭ್ಯಗಳು ಎಂಬುದು ಮರಿಚೀಕೆಯಾಗಿದೆ. ಜನತೆ ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ.ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಫ್ಯಾಕ್ಟರಿಗಳನ್ನು ಆರಂಭಿಸಲು ಮುಂದೆ ಬರುತ್ತಿಲ್ಲ. ಬಾಡಿಯಾಳ ಮತ್ತು ಕಡೇಚೂರು ಕೈಗಾರಿಕೆ ಪ್ರದೇಶದಲ್ಲಿ 3,230 ಎಕರೆ ಭೂಮಿ ಇದೆ. ಆದರೆ ಒಬ್ಬರೇ ಒಬ್ಬರ ಉದ್ಯಮಿಗಳು ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದಿಲ್ಲ.

ಅನುದಾನ ತರಲು ಪ್ರಯತ್ನ ನಡೆಯಲಿ

ಮೆಡಿಕಲ್‌ ಕಾಲೇಜು ಘೋಷಣೆಯಾಗಿ ಮೂರು ವರ್ಷ ಕಳೆದಿದೆ.ಆದರೆ,ಅನುದಾನ ಮಾತ್ರ ಬಿಡುಗಡೆ ಆಗಿಲ್ಲ. ಹೀಗಾಗಿ ಕಾಲೇಜು ಆರಂಭಿಸುವುದು ಕನಸಿನ ಮಾತಾಗಿದೆ. ಇದಲ್ಲದೇ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಸಹ ಇಲ್ಲ. ವೃತ್ತಿಪರ ಕೋರ್ಸ್‌ ಮಾಡಬೇಕು ಎಂಬ ಮಹಾದಾಸೆ ಹೊತ್ತಿರುವ ವಿದ್ಯಾರ್ಥಿಗಳು ನಿರಾಸೆ ಹೊಂದಿದ್ದಾರೆ. ಶಾಸಕ ದರ್ಶನಾಪುರ ಅವರಿಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿದೆ. ಮಂತ್ರಿಯಾಗಿಯೂ ಸಹ ಕೆಲಸ ಮಾಡಿದ್ದಾರೆ.ಎಲ್ಲ ಇಲಾಖೆಗಳ ಅರಿವು ಸಹ ಇದೆ. ಹೀಗಾಗಿ ಜಿಲ್ಲೆಗೆ ಬೇಕಿರುವ ಅನುದಾನ ತರುವ ಅವಕಾಶಗಳು ಹೆಚ್ಚಿವೆ. ಇಚ್ಛಾಶಕ್ತಿ ತೋರ್ಪಡಿಸಿದರೇ ಭರಪೂರ ಅನುದಾನ ಮಂಜೂರು ಮಾಡಿಸಿಕೊಂಡು ಬರುವ ಶಕ್ತಿ ಅವರಲ್ಲಿದೆ. ಇನ್ನೂ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ನಾಗನಗೌಡ ಕಂದಕೂರ ಅವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪರಮಾಪ್ತರು. ಇವರು ಸಹ ಸಿಎಂ ಮೇಲೆ ಒತ್ತಡ ಹೇರಿದರೇ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ