ಆ್ಯಪ್ನಗರ

ಯಾದಗಿರಿ: ಜಿ.ಪಂ ವಿರೋಧ ಪಕ್ಷದ ನಾಯಕನ ಮೇಲೆ ಹಾಡಹಗಲೆ ತಲ್ವಾರ್‌ ದಾಳಿ!

ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕನ ಮೇಲೆ ಮೂವರು ದುಷ್ಕರ್ಮಿಗಳ ತಂಡ ಮಾರಾಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಯಾದಗಿರಿ ನಗರದ ಚಿತ್ತಾಪುರ ರಸ್ತೆಯ ಎಸ್ಪಿ ಕಚೇರಿ ಬಳಿ ನಡೆದಿದೆ.

Vijaya Karnataka Web 24 Jun 2020, 11:27 am
ಯಾದಗಿರಿ: ಹಾಡಹಗಲೆ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಯಾದಗಿರಿ ನಗರದ ಚಿತ್ತಾಪುರ ರಸ್ತೆಯ ಎಸ್ಪಿ ಕಚೇರಿ ಬಳಿ ನಡೆದಿದೆ. ಮರಲಿಂಗಪ್ಪ ಕರ್ನಾಳ್ ಹಲ್ಲೆಗೊಳಗಾದ ಜಿಲ್ಲಾ ಪಂಚಾಯತ್‌ ವಿರೋಧ ಪಕ್ಷದ ನಾಯಕ.
Vijaya Karnataka Web RTbE5clB


ಸುರಪುರ ಬಿಜೆಪಿ ಶಾಸಕ ರಾಜಗೌಡ ಆಪ್ತ ಹಾಗೂ ಬಿಜೆಪಿ ಮುಖಂಡರಾಗಿರುವ ಮರಲಿಂಗಪ್ಪ ಕರ್ನಾಳ್ ಇಂದು ಬೆಳಗ್ಗೆ ತನ್ನ ಸ್ಕೂಟರ್‌ ಮೂಲಕ ಯಾದಗಿರಿ ಪಟ್ಟಣಕ್ಕೆ ಆಗಮಿಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಕರ್ನಾಳ್‌ ಮೇಲೆ ಎರಗಿದ್ದಾರೆ.

ತಲವಾರ್ ಹಾಗೂ ಮಚ್ಚಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್‌ ಆಗಿದ್ದಾರೆ. ಘಟನಾ ಸ್ಥಳದಲ್ಲಿ ಗಾಯಗಳಿಂದ ಬಿದ್ದಿದ್ದ ಮರಲಿಂಗಪ್ಪ ಕರ್ನಾಳ್‌ ಅವರನ್ನ ಕೂಡಲೇ ಜಿಲ್ಲಾ ಆಸ್ಸತ್ರೆಗೆ ಸ್ಥಳೀಯರು ದಾಖಲು ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕರ್ನಾಳ್‌ ಅವರನ್ನ ಗುಲ್ಬರ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಭಾರತದ ಬಳಿಕ ನೇಪಾಳ ಭೂಮಿಗೂ ಕೈ ಹಾಕಿದ ಚೀನಾ, ಹಲವು ಎಕರೆ ಭೂಮಿ ನುಂಗಿದ ಡ್ರ್ಯಾಗನ್‌!

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್‌ಪಿ ರಿಷಿಕೇಶ್‌ ಅವರು, ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು . ಘಟನಾ ಸ್ಥಳವನ್ನ ಪರಿಶೀಲಿಸಿದ್ದೇವೆ. ಮೇಲ್ನೋಟಕ್ಕೆ ದ್ವೇಷದ ಹಿನ್ನೆಲೆ ದಾಳಿ ಮಾಡಿರುವಂತಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಂತರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ