ಆ್ಯಪ್ನಗರ

ನೆರೆ ಸಂತ್ರಸ್ತ ಗರ್ಭಿಣಿ ಚಿಕಿತ್ಸೆಗೆ ಹಣ ವಸೂಲಿ: ಆರೋಪ

ಕೃಷ್ಣಾ ನದಿ ಪ್ರವಾಹದಿಂದ ಹಲವಾರು ಗ್ರಾಮಗಳು ಜಲಾವೃತಗೊಂಡು ಒದ್ದಾಡುತ್ತಿರುವಾಗ ಅನಾರೋಗ್ಯಕ್ಕೀಡಾದ ನೀಲಕಂಠರಾಯನಗಡ್ಡಿಯ ನೆರೆಸಂತ್ರಸ್ತೆ ಗರ್ಭಿಣಿಯೊಬ್ಬರ ಆರೋಗ್ಯ ತಪಾಸಣೆಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4000 ರೂ. ವಸೂಲಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

Vijaya Karnataka 17 Aug 2019, 4:48 pm
ಕಕ್ಕೇರಾ :ಕೃಷ್ಣಾ ನದಿ ಪ್ರವಾಹದಿಂದ ಹಲವಾರು ಗ್ರಾಮಗಳು ಜಲಾವೃತಗೊಂಡು ಒದ್ದಾಡುತ್ತಿರುವಾಗ ಅನಾರೋಗ್ಯಕ್ಕೀಡಾದ ನೀಲಕಂಠರಾಯನಗಡ್ಡಿಯ ನೆರೆಸಂತ್ರಸ್ತೆ ಗರ್ಭಿಣಿಯೊಬ್ಬರ ಆರೋಗ್ಯ ತಪಾಸಣೆಗೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4000 ರೂ. ವಸೂಲಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
Vijaya Karnataka Web money paid for pregnancy treatment accused
ನೆರೆ ಸಂತ್ರಸ್ತ ಗರ್ಭಿಣಿ ಚಿಕಿತ್ಸೆಗೆ ಹಣ ವಸೂಲಿ: ಆರೋಪ


ಇಡೀ ರಾಜ್ಯವೇ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಕಂಡು ಮರುಗುವ ಮೂಲಕ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಆದರೆ, ಸತತ ವಾರದಿಂದ ಪ್ರವಾಹದಿಂದ ನೀಲಕಂಠರಾಯನಗಡ್ಡಿಯನ್ನು ನೀರು ಸುತ್ತುವರಿಯುವ ಮೂಲಕ ದ್ವೀಪದಂತಾಗಿದೆ. ಸೇತುವೆ ಕೊಚ್ಚಿ ಹೋಗುವ ಒಂದು ದಿನ ಮೊದಲು ಲಕ್ಷ ್ಮಣ ಗಡ್ಡಿ ಎಂಬುವವರು ತಮ್ಮ ತಂಗಿ ಸಾಮವ್ವ ಆದಪ್ಪ ಐದು ತಿಂಗಳ ಗರ್ಭಿಣಿಯನ್ನು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ, ವೈದ್ಯರು ನಾಲ್ಕು ಸಾವಿರ ರೂ. ತೆಗೆದುಕೊಂಡು ಚಿಕಿತ್ಸೆ ನೀಡಿದ್ದಾರೆ.

ಹೊಳಿ ಬಂದಿತ್ತು, ತೋರಸಲಾಕ ಒಂದ್‌ ದಿವಸ ಮೊದಲಾ ಸರಕಾರ ದವಾಖಾನಿಗಿ ಬಂದಿದ್ವಿ, ನಾವ್‌ ಬಂದ ಮರದಿವಸ ಬ್ರಿಜ್‌ ಮುಳುಗೆದರಿ. ನಮ್ಮ ತಂಗಿಗೆ ಡಾಕ್ಟರ್‌ ನೋಡ್ಯಾರ. ನಂಬೆಲ್ಲಿ ನಾಕ್‌ ಸಾವಿರ ಬಿಲ್‌ ಆಗ್ಯಾದ ಅಂತ ಇಸಗಂಡರ. ಹೊಳಿ ಬಂದ್‌ ನಾವ್‌ ಬಾಳ್‌ ತ್ರಾಸ್‌ನ್ಯಾಗ ಅದೀವಿ. ತೋರಿಸಿದ ಮ್ಯಾಲ ನಮ ತಂಗಿಗಿ ಆರಾಮ ಆಗ್ಯಾದರಿ. ಹೊಳಿಗಿ ನೀರ್‌ ಕಡಿಮಿಯಾಗಿಲ್ಲ, ಇನ ಒಂದು ಚೂಜಿ ಮಾಡಸದ ಉಳಿದಿತ್ತ ಇಲ್ಲೆ ಸಂಬಂಧಿಕರ ಮನ್ಯಾಗ ಉಳಿದಿವ್ರಿ.

- ನೆರೆ ಸಂತ್ರಸ್ತ ಲಕ್ಷ ್ಮಣ ಗಡ್ಡಿ ರೋಗಿಯ ಅಣ್ಣ.

ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಉಚಿತವಿರುತ್ತದೆ. ರೋಗಿ ಹತ್ತಿರ ಶುಲ್ಕ ವಸೂಲಿ ಮಾಡುವಂತಿಲ್ಲ. ನಮ್ಮಲ್ಲಿ ಸೌಲಭ್ಯಗಳು ಇಲ್ಲದಿದ್ದಲ್ಲಿ ತಾಲೂಕಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡಬೇಕು. ಈ ವಿಷಯ ಗಂಭೀರವಾಗಿ ಪರಿಗಣಿಸಿ ಡಿಎಚ್‌ಒ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.

- ಡಾ.ರಾಜಾವೆಂಕಟಪ್ಪನಾಯಕ ತಾಲೂಕು ವೈದ್ಯಾಧಿಕಾರಿ ಸುರಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ