ಆ್ಯಪ್ನಗರ

ಶೇಂಗಾ ಬಿತ್ತನೆ ಬೀಜದ ಅಭಾವ ರೈತರು ಕಂಗಾಲು

ಪಟ್ಟಣದಲ್ಲಿರುವ ರೈತ ಸಂಪರ್ಕ ಕೇಂದ್ರದಿಂದ ಹಿಂಗಾರು ಬಿತ್ತನೆಗಾಗಿ ಶೇಂಗಾ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಸಾಕಷ್ಟು ಪ್ರಮಾಣದಲ್ಲಿಬಿತ್ತನೆಯ ಬೀಜಗಳನ್ನು ತರಿಸದೆ ಇರುವುದರಿಂದ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Vijaya Karnataka 19 Oct 2019, 10:13 pm
ವಡಗೇರಾ:ಪಟ್ಟಣದಲ್ಲಿರುವ ರೈತ ಸಂಪರ್ಕ ಕೇಂದ್ರದಿಂದ ಹಿಂಗಾರು ಬಿತ್ತನೆಗಾಗಿ ಶೇಂಗಾ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಸಾಕಷ್ಟು ಪ್ರಮಾಣದಲ್ಲಿಬಿತ್ತನೆಯ ಬೀಜಗಳನ್ನು ತರಿಸದೆ ಇರುವುದರಿಂದ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Vijaya Karnataka Web peanuts are peanut seed farmers
ಶೇಂಗಾ ಬಿತ್ತನೆ ಬೀಜದ ಅಭಾವ ರೈತರು ಕಂಗಾಲು


ಈ ಭಾಗದ ಬೀರನಕಲ್‌ ತಾಂಡಾ, ಹುಂಡೆಕಲ್‌, ಗುಂಡಗುರ್ತಿ, ತಡಿಬಿಡಿ, ಬೋಳಾರಿ, ವಡಗೇರಾ, ಹಾಲಗೇರಾ, ಉಳ್ಳೆಸೂಗೂರು ಕೊಂಕಲ್‌, ಗೊಂದೆನೂರ, ಬೀರನಕಲ್‌, ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ರೈತರು ಹೆಚ್ಚಾಗಿ ವಾಣಿಜ್ಯ ಬೆಳೆ ಶೇಂಗಾ ಬಿತ್ತನೆಯನ್ನು ಮಾಡುತ್ತಾರೆ.

ತಾಲೂಕಿನಾದ್ಯಂತ ಹಿಂಗಾರು ಮಳೆಯಾಗಿದ್ದು ರೈತರು ಹಿಂಗಾರು ಬೆಳೆಯಾದ ಶೇಂಗಾ ಬಿತ್ತನೆ ಮಾಡಲು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ಖರೀದಿ ಮಾಡಲು ಹೋದರೆ ರೈತ ಸಂಪರ್ಕ ಕೇಂದ್ರದಲ್ಲಿಬೇಡಿಕೆಗೆ ತಕ್ಕಷ್ಟು ಪ್ರಮಾಣದ ಶೇಂಗಾ ಬೀಜಗಳು ಇಲ್ಲ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರಾದ ಬಸವರಾಜ ದೇವದುರ್ಗ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದಲ್ಲಿರುವ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿಸುಮಾರು 30 ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಕೃಷಿ ಅಧಿಕಾರಿಗಳ ಉದಾಸೀನತೆಯಿಂದಾಗಿ ಕೇವಲ 250 ಕ್ವಿಂಟಲ್‌ ಶೇಂಗಾ ಬೀಜಗಳು ಸಂಪರ್ಕ ಕೇಂದ್ರಕ್ಕೆ ಬಂದಿರುವುದರಿಂದ ಅನೇಕ ಗ್ರಾಮಗಳ ರೈತರು ಬಿತ್ತನೆಯ ಬೀಜಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಿಳಿಸಿದರು.

ಕಳೆದ ವರ್ಷ ಇಷ್ಟೊತ್ತಿಗಾಗಲೇ ಸುಮಾರು 700 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾಗಿತ್ತು. ಆದರೆ ಈ ವರ್ಷ ಇಲ್ಲಿಯವರೆಗೆ ಕೇವಲ 250 ಕ್ವಿಂಟಾಲ್‌ ಬೀಜಗಳನ್ನು ಮಾತ್ರ ವಿತರಿಸಲಾಗಿದೆ. ಅಲ್ಲದೇ ಕಳೆದ ವರ್ಷಕ್ಕಿಂತ ಈ ವರ್ಷ ಬೀಜಗಳ ಬೆಲೆಯಲ್ಲಿಸಾಕಷ್ಟು ಏರಿಕೆಯಾಗಿರುವುದರಿಂದ ರೈತರಿಗೆ ಸಂಕಷ್ಟ ತಂದೊಡ್ಡಿದೆ.

ಕಳೆದ ವರ್ಷ ಬಿತ್ತನೆಯ ಬೀಜಗಳ ಬೆಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 5,950 ರೂಗಳು ಮತ್ತು ಸಾಮಾನ್ಯ ವರ್ಗದವರು 6,900 ರೂಗಳು ಕೊಟ್ಟು ಕ್ವೀಂಟಾಲ್‌ ಶೇಂಗಾ ಬೀಜಗಳನ್ನು ಖರೀದಿಸಿದ್ದರು. ಆದರೆ ಈ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 8650 ರೂಗಳು ಮತ್ತು ಸಾಮಾನ್ಯ ವರ್ಗದವರು 9,600 ರೂಗಳು ಕೊಟ್ಟು ಕ್ವೀಂಟಾಲ್‌ ಶೇಂಗಾ ಬೀಜಗಳನ್ನು ಖರೀದಿಸಬೇಕಾಗಿದೆ.

ರೈತರ ಬೇಡಿಕೆಗೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜಗಳು ದೊರಕಬೇಕು ಹಾಗೆಯೇ ಈ ಹಿಂದೆ ಇದ್ದ ಬೆಲೆಯಲ್ಲಿಯೇ ಶೇಂಗಾ ಬೀಜಗಳನ್ನು ರೈತರಿಗೆ ಕೊಡಬೇಕು ಇಲ್ಲದಿದ್ದರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

ಈ ಸಲ ಪ್ರವಾಹಕ್ಕೆ ಒಳಗಾಗಿ ಜಮೀನುಗಳಲ್ಲಿದ್ದ ಬೆಳೆ ನಾಶವಾಗಿ ರೈತರ ಜಮೀನುಗಳು ಖಾಲಿ ಉಳಿದಿರುವುದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ಶೇಂಗಾ ಬಿತ್ತನೆ ಹೆಚ್ಚಿಗೆ ಆಗುತ್ತದೆ. ಆದರೆ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸದ ಕಾರಣ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪಂಪಣ್ಣ ಜಡಿ ರೈತ


ಕಳೆದ ವರ್ಷದಲ್ಲಿಸುಮಾರು 1,544 ಹೆಕ್ಟರ್‌ನಲ್ಲಿಶೇಂಗಾ ಬಿತ್ತನೆಯಾಗಿತ್ತು ಅದಕ್ಕೆ 1250 ಕ್ವಿಂಟಾಲ್‌ ಬೀಜಗಳ ವಿತರಣೆ ಮಾಡಲಾಗಿತ್ತು. ಆದರೆ ಈ ಸಲ ಸುಮಾರು 1750 ಹೆಕ್ಟರ್‌ನಲ್ಲಿಶೇಂಗಾ ಬಿತ್ತನೆ ನಿರೀಕ್ಷೆ ಇದೆ. ಅದಕ್ಕೆ ಸುಮಾರು 2,000 ಕ್ವಿಂಟಾಲ್‌ ಬಿತ್ತನೆ ಬೀಜದ ಬೇಡಿಕೆಯಿದ್ದು, ಈಗಾಗಲೇ 250 ಕ್ವಿಂಟಾಲ್‌ ಶೇಂಗಾ ಬೀಜ ವಿತರಣೆ ಮಾಡಲಾಗಿದ್ದು ಇನ್ನುಳಿದಂತೆ ಬೀಜಗಳ ದಾಸ್ತಾನು ಮಾಡಿಕೊಂಡು ರೈತರಿಗೆ ವಿತರಣೆ ಮಾಡಲಾಗುತ್ತದೆ.

-ಡಾ. ಜಗದೀಶ ರೈತ ಸಂಪರ್ಕ ಕೇಂದ್ರದ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ