ಆ್ಯಪ್ನಗರ

ಮರಕಲ್‌ ಮಾರಾಮಾರಿ ನಾಲ್ವರಿಗೆ ಗಾಯ

ಚಿತ್ರ ಸುದ್ದಿ1007ಎಸ್‌ಹೆಚ್‌ಪಿ 5 ಶಹಾಪುರ ತಾಲೂಕಿನ ಮರಕಲ್‌ ಗ್ರಾಮದ ಬಳಿ ನಡೆದ ಜಗಳದಲ್ಲಿ ನಾಲ್ವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದು...

Vijaya Karnataka 11 Jul 2019, 5:00 am
ಶಹಾಪುರ :ತಾಲೂಕಿನ ಮರಕಲ್‌ ಗ್ರಾಮದಲ್ಲಿ ಹಲವು ದಿನಗಳ ಹಿಂದೆ ನಡೆದ ಅಂಬೇಡ್ಕರ್‌ ಕಟ್ಟೆ ವಿವಾದಕ್ಕೆ ಸಂಬಂದಿಸಿದಂತೆ ಯುವಕರ ಗುಂಪೊಂದು ಒಂದು ಸಮುದಾಯದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ನಾಲ್ವರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
Vijaya Karnataka Web quarrelfour injured
ಮರಕಲ್‌ ಮಾರಾಮಾರಿ ನಾಲ್ವರಿಗೆ ಗಾಯ


ಮದುವೆಯ ಸಾಮಾನುಗಳನ್ನು ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಮರಕಲ್‌ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ತಡೆದು ಒಂದು ಸಮುದಾಯದ ಯುವಕರ ತಂಡ ಹಲ್ಲೆ ಮಾಡಿದೆ. ಈ ವೇಳೆ ಒಂದು ಕೋಮಿಗೆ ಸೇರಿದ ಮಲ್ಲಪ್ಪ ತಂದೆ ಮಲ್ಲಪ್ಪ(23), ಶರಣಪ್ಪ ತಂದೆ ಸಂಗಪ್ಪ(25), ದೇವಪ್ಪ ತಂದೆ ಜಟ್ಟೆಪ್ಪ(23) ಮತ್ತು ಮಲ್ಲಪ್ಪ ತಂದೆ ಅಂಬ್ಲಪ್ಪ (24) ಗಾಯಗೊಂಡಿದ್ದಾರೆ. ಇವರನ್ನು ಕಲ್ಲು, ಬಡಿಗೆಗಳಿಂದ ಹೊಡೆದು ಗಾಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಯಾದಗಿರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ವ್ಯಕ್ತಿಗಳಿಗಾಗಿ ಹುಡುಕಾಟ ನಡೆದಿದೆ.

ಶಾಂತಿ ಕಾಪಾಡಿ

ಈ ಘಟನೆಯ ಬಳಿಕ ಮರಕಲ್‌ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ದಲಿತ ಸಮುದಾಯದವರು ಗ್ರಾಮದಿಂದ ಹೊರಗಿದ್ದಾರೆ. ಕೂಡಲೇ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಬೇಕು ಎಂದು ಯುವ ಮುಖಂಡ ಶರಣರಡ್ಡಿ ಹತ್ತಿಗೂಡೂರ, ದೇವೀಂದ್ರ ಗೌಡೂರ, ಶರಣಪ್ಪ ಭೂತಾಳೆ, ರಾಯಪ್ಪ ಸಾಲಿಮನಿ, ಬಸವರಾಜ ಮರಕಲ್‌, ಹೊನ್ನರಾಜ ಹಾಗೂ ಹಣಮಂತ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ