ಆ್ಯಪ್ನಗರ

ನೀರಿನ ಟ್ಯಾಂಕ್‌ ತೆರವಿಗೆ ಆಗ್ರಹ

ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಇರುವ ಹಳೆಯ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಿರುವ ನೀರಿನ ಟ್ಯಾಂಕ್‌ ಶಿಥಿಲಗೊಂಡು ಆಗಲೋ ಈಗಲೋ ಬೀಳುವ ಹಂತ ತಲುಪಿದ್ದು, ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದೆ.

Vijaya Karnataka 19 Jun 2019, 3:49 pm
ವಡಗೇರಾ :ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಇರುವ ಹಳೆಯ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಿರುವ ನೀರಿನ ಟ್ಯಾಂಕ್‌ ಶಿಥಿಲಗೊಂಡು ಆಗಲೋ ಈಗಲೋ ಬೀಳುವ ಹಂತ ತಲುಪಿದ್ದು, ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದೆ.
Vijaya Karnataka Web request water tank clearance
ನೀರಿನ ಟ್ಯಾಂಕ್‌ ತೆರವಿಗೆ ಆಗ್ರಹ


ಗ್ರಾಮಕ್ಕೆ ನೀರು ಸರಬರಾಜು ಮಾಡಲು ಸುಮಾರು ವರ್ಷಗಳ ಹಿಂದೆ ಖಾಸಗಿ ವ್ಯಕ್ತಿಯ ಭೂಮಿಯಲ್ಲಿ ಈ ಟ್ಯಾಂಕ್‌ನ್ನು ನಿರ್ಮಿಸಲಾಗಿತ್ತು. ಇದೀಗ ಈ ನೀರಿನ ಟ್ಯಾಂಕ್‌ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಸಿಮೆಂಟ್‌ ಉದುರುತ್ತಿದ್ದು,ಕಬ್ಬಿಣದ ಸಲಾಕೆæಗಳು ತೇಲಿಕೊಂಡಿವೆ.

ಶಿಥಿಲಾವಸ್ಥೆಯಲ್ಲಿರುವ ಈ ನೀರಿನ ಟ್ಯಾಂಕ್‌ ಯಾವಾಗ ಬೇಕಾದರೂ ಕುಸಿದು ಬೀಳಬಹುದು. ಒಂದು ವೇಳೆ ಕುಸಿದು ಬಿದ್ದರೆ ಅಪಾರ ಪ್ರಮಾಣದ ಜೀವ ಹಾನಿಯಾಗುವದು ಖಂಡಿತ ಎಂದು ಗ್ರಾಮಸ್ಥರು ಹೇಳುತ್ತಾರೆ.

ಟ್ಯಾಂಕಿನ ಸುತ್ತಮುತ್ತ ಖಾಸಗಿ ವ್ಯಕ್ತಿಗಳ ಜಮೀನುಗಳು ಇರುವುದರಿಂದ ಮಕ್ಕಳು ಸಮೇತ ಜಮೀನಿಗೆ ಬರುತ್ತಾರೆ. ಮಕ್ಕಳು ಆಟ ಆಡುತ್ತಾ ಟ್ಯಾಂಕಿನ ಕಡೆ ಹೋದ ಸಮಯದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅಪಾರ ಸಾವು ನೋವುಗಳು ಜರುಗುತ್ತವೆ.

ಟ್ಯಾಂಕ್‌ನ್ನು ತೆರವುಗೊಳಿಸುವಂತೆ ಅನೇಕ ವೇಳೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆದಷ್ಟು ಬೇಗ ಈ ಶಿಥಿಲಗೊಂಡ ನೀರಿನ ಟ್ಯಾಂಕ್‌ನ್ನು ತೆರವುಗೊಳಿಸಿ ನೂತನ ನೀರಿನ ಟ್ಯಾಂಕ್‌ನ್ನು ನಿರ್ಮಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಜರುಗಿದರೆ ಅದಕ್ಕೇ ಅಧಿಕಾರಿಗಳೆ ನೇರ ಹೊಣೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ