ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಮುಜರಾಯಿ ಇಲಾಖೆಯಿಂದ 20ಕೋಟಿ ರೂ. ನೆರವು: ಸಚಿವ

ನೆರೆ ಸಂತ್ರಸ್ತರಿಗೆ ಮುಜರಾಯಿ ಇಲಾಖೆಯ ವ್ಯಾಪ್ತಿಯ ಆರ್ಥಿಕವಾಗಿ ಸದೃಢವಾಗಿರುವ 81ದೇವಸ್ಥಾನಗಳಿಂದ 12.31ಕೋಟಿ ರೂ. ನೆರವು ನೀಡಲಾಗುವುದು ಎಂದು ಗಣಿ,ಭೂ ವಿಜ್ಞಾನ ಮತ್ತು ಮುಜರಾಯಿ ಸಚಿವ ಸಚಿವ ರಾಜಶೇಖರ ಪಾಟೀಲ್‌ ಹುಮನಾಬಾದ ತಿಳಿಸಿದರು.

Vijaya Karnataka 24 Aug 2018, 4:09 pm
ಶಹಾಪುರ : ನೆರೆ ಸಂತ್ರಸ್ತರಿಗೆ ಮುಜರಾಯಿ ಇಲಾಖೆಯ ವ್ಯಾಪ್ತಿಯ ಆರ್ಥಿಕವಾಗಿ ಸದೃಢವಾಗಿರುವ 81ದೇವಸ್ಥಾನಗಳಿಂದ 12.31ಕೋಟಿ ರೂ. ನೆರವು ನೀಡಲಾಗುವುದು ಎಂದು ಗಣಿ,ಭೂ ವಿಜ್ಞಾನ ಮತ್ತು ಮುಜರಾಯಿ ಸಚಿವ ಸಚಿವ ರಾಜಶೇಖರ ಪಾಟೀಲ್‌ ಹುಮನಾಬಾದ ತಿಳಿಸಿದರು.
Vijaya Karnataka Web rs 20 crore from the muzirai department for neighboring victims
ನೆರೆ ಸಂತ್ರಸ್ತರಿಗೆ ಮುಜರಾಯಿ ಇಲಾಖೆಯಿಂದ 20ಕೋಟಿ ರೂ. ನೆರವು: ಸಚಿವ


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮಿನರಲ್‌ ಲಿಮಿಟೆಡ್‌ನಿಂದ 5 ಕೋಟಿ ರೂ. ಹಟ್ಟಿ ಚಿನ್ನದ ಗಣಿ ಯಿಂದ 2.50 ಕೋಟಿ.ರೂ ಸೇರಿದಂತೆ ಒಟ್ಟು 20 ಕೋಟಿ ರೂ.ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ನೀಡಲು ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು.

ಜನರು ದೇವಸ್ಥಾನಕ್ಕೆ ಹರಕೆ ತೀರಿಸಲು ಹಣ ನೀಡಿರುವುದುನ್ನು ನೆರೆ ಸಂತ್ರಸ್ತರಿಗೂ ಒಳ್ಳೆಯದಾಗಲಿ ಎಂದು ತೀರ್ಮಾನ ಕೈಗೊಂಡು ಮತ್ತು ಇಂತಹ ಸಂದರ್ಭದಲ್ಲಿ ಜನರ ಹಣ ಕಷ್ಟದಲ್ಲಿರುವ ಜನತೆಯು ಉಪಯೋಗಕ್ಕೆ ಬರಲಿ ಎನ್ನುವ ಸದುದ್ದೇಶ ಇದಾಗಿದೆ ಎಂದರು. ರಾಜ್ಯದಲ್ಲಿ ಇಲಾಖೆಯಡಿ 35, 556ದೇವಸ್ಥಾನಗಳಿದ್ದು ಅದನ್ನು ಮೂರು ವಿಭಾಗಗಳನ್ನಾಗಿ ಗುರುತಿಸಿ ಆರ್ಥಿಕವಾಗಿ ಸದೃಢವಾಗಿರುವ ಸುಮಾರು 81 ದೇವಸ್ಥಾನಗಳಿಂದ ಮಾತ್ರ ಹಣ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದ್ದು , ಜಿಲ್ಲಾಧಿಕಾರಿಗಳಿಂದ ಮಳೆ ಪ್ರಮಾಣವನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಶಹಾಪುರದಲ್ಲಿ ಶೇ. 45.9.ಸುರಪುರ ಶೇ 56.6ರಷ್ಟು ಮಳೆ ಕೊರತೆಯಾಗಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ವಿವಿರ ನೀಡಿ ಪರಿಹಾರ ಮತ್ತು ಬರಪೀಡಿತ ಜಿಲ್ಲೆ ಘೋಷಣೆಗೆ ಮನವಿ ಮಾಡಲಾಗುವುದು ಎಂದು ಸಚಿವ ರಾಜಶೇಖರ ಪಾಟೀಲ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ