ಶಹಾಪುರ: ಸಾಲದ ಬಾಧೆ ಸಹಿಸಿಕೊಳ್ಳಲಾಗದೆ ಇಲ್ಲಿನ ಹಳಿಸಗರ ಬಡಾವಣೆಯ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಬಣ್ಣ ಮಲ್ಲಪ್ಪ ನರಿ(52) ಆತ್ಮಹತ್ಯೆಗೆ ಶರಣಾದ ರೈತ. ಪತ್ನಿ, ನಾಲ್ವರು ಪುತ್ರಿಯರು ಹಾಗೂ ಪುತ್ರ ಇದ್ದಾನೆ.
ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ. ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಎರಡುವರೆ ಎಕರೆ ಭೂಮಿಯಿದೆ. ಬೆಳೆ ಸಾಲ ರೂ.20ಸಾವಿರ ಸೇರಿದಂತೆ 4.50 ಲಕ್ಷ ರೂ.ಸಾಲವಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.