ಶಹಾಪುರ: ಸಾಲಬಾಧೆ ತಾಳದೆ ತಾಲೂಕಿನ ಚಾಮನಾಳ ಮಡ್ಡಿ ತಾಂಡಾದ ರೈತ ನೇಣ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ನಡೆದಿದೆ. ಮಲ್ಲಿನಾಥ ಕೇಸು ನಾಯಕ (30) ಆತ್ಮಹತ್ಯೆ ಮಾಡಿಕೊಂಡ ರೈತ. ಈತನಿಗೆ ಎರಡು ಎಕೆರೆ ಜಮೀನು ಹೊಂದಿದ್ದು, 5 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಮಗಳು ಮತ್ತು ಕುಟುಂಬದವರಿದ್ದಾರೆ. ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಬಾಧೆ ರೈತ ಆತ್ಮಹತ್ಯೆ
ಸಾಲಬಾಧೆ ತಾಳದೆ ತಾಲೂಕಿನ ಚಾಮನಾಳ ಮಡ್ಡಿ ತಾಂಡಾದ ರೈತ ನೇಣ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ನಡೆದಿದೆ. ಮಲ್ಲಿನಾಥ ಕೇಸು ನಾಯಕ (30) ಆತ್ಮಹತ್ಯೆ ಮಾಡಿಕೊಂಡ ರೈತ.
ವಿಕ ಸುದ್ದಿಲೋಕ 31 Jan 2017, 5:10 pm