ಆ್ಯಪ್ನಗರ

ಸವರ್ಣಿಯರಿಂದ ಬಹಿಷ್ಕಾರ, ದಲಿತರು ಪ್ರತಿಭಟನೆ

ತಾಲೂಕಿನ ಹೊನಿಗೇರಾ ಸವರ್ಣಿಯರು ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಮಾದಿಗ ಸಮುದಾಯದವರು ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿ ಎದುರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.

Vijaya Karnataka 19 Sep 2019, 9:59 pm
ಯಾದಗಿರಿ:ತಾಲೂಕಿನ ಹೊನಿಗೇರಾ ಸವರ್ಣಿಯರು ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಮಾದಿಗ ಸಮುದಾಯದವರು ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿ ಎದುರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.
Vijaya Karnataka Web the boycott of savarni protests by dalits
ಸವರ್ಣಿಯರಿಂದ ಬಹಿಷ್ಕಾರ, ದಲಿತರು ಪ್ರತಿಭಟನೆ


ಮೊಹರಂ ಹಬ್ಬದ ಸಮಯದಲ್ಲಿಸವರ್ಣಿಯರು ಮಾದಿಗ ಸಮುದಾಯದವರ ಮೇಲೆ ಮನಬಂದಂತೆ ಹಲ್ಲೆಮಾಡಿದ್ದಾರೆ. ಊರಿನ ಹಿರಿಯರೊಂದಿಗೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ ಎಂದು ದೂರಿದರು. ಕುಡಿಯಲು ನೀರು ಕೊಡುತ್ತಿಲ್ಲ. ಇದಲ್ಲದೆ ಅಂಗಡಿ ಮುಂಗಟ್ಟುಗಳಲ್ಲಿವಸ್ತುಗಳನ್ನು ಖರೀದಿಸಲು ಅವಕಾಶ ಕೊಡುತ್ತಿಲ್ಲವೆಂದು ಗಂಭೀರ ಆರೋಪ ಮಾಡಿದರು. ಸವರ್ಣಿಯರ ಆಟೋಗಳಲ್ಲಿಕುಳಿತುಕೊಳ್ಳುವಂತಿಲ್ಲ. ಹಿಟ್ಟಿನ ಗಿರಿಣಿಗೆ ಹೋದರೂ ಅಲ್ಲಿಯೂ ಅವಕಾಶ ನೀಡುತ್ತಿಲ್ಲ. ತಮಗೆ ಸಂಪೂರ್ಣವಾಗಿ ಬಹಿಷ್ಕರಿಸಿದ್ದಾರೆ ಎಂದು ದೂರಿದರು. ಸಮುದಾಯದ ಹೆಣ್ಣು ಮಕ್ಕಳ ಮೇಲೆಯೂ ಮನಸ್ಸಿಗೆ ಬಂದಂತೆ ಹಲ್ಲೆಮಾಡಿದ್ದಾರೆ. ಜೀವನ ನಡೆಸಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕ ನಲ್ಲಿಗಳಿಗೆ ನೀರು ತರಲು ಹೋದರೂ ಮಹಿಳೆಯರಿಗೆ ಅವಮಾನ ಮಾಡಿ ಕಳುಹಿಸುತ್ತಿದ್ದಾರೆ. ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ಒದಗಿ ಬಂದಿದೆ ಎಂದು ದೂರಿದರು. ಇದೊಂದು ನಾಗರಿಕ ಸಮಾಜ ತಲೆತಗ್ಗಿಸುವಂಥ ಕಾರ್ಯವಾಗಿದೆ. ಇದು ನಿಜಕ್ಕೂ ನಮ್ಮ ಪಾಲಿಗೆ ಆಘಾತಕಾರಿ ಸಂಗತಿಯಾಗಿದೆ ಎಂದು ಹೇಳಿದರು.

ನೆಮ್ಮದಿಯಿಂದ ಜೀವನ ನಡೆಸಲಾಗುತ್ತಿಲ್ಲ. ನಿತ್ಯ ಜೀವ ಭಯ ಕಾಡುತ್ತಿದೆ. ಹೀಗಾಗಿ ಸೂಕ್ತ ರಕ್ಷಣೆ ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿಗಳಲ್ಲಾದ ಘಟನೆಗಳಿಗೆ ಜಿಲ್ಲಾಡಳಿತವೇ ಜವಾಬ್ದಾರಿಯಾಗುತ್ತದೆ ಎಂದು ಮನವಿಯಲ್ಲಿತಿಳಿಸಲಾಗಿದೆ.

ನಾಗರಾಜ ಬೀರನೂರ, ಶಿವಪ್ಪ ಕೊಳ್ಳಿ, ನಾಗಪ್ಪ ಹೊಸಮನಿ, ರಾಜು ಕೊಳ್ಳಿ, ಹಣಮಂತ ಹೊಸಮನಿ, ಅಂಬಲಪ್ಪ, ಸಿದ್ದಪ್ಪ, ಹಣಮಂತ, ಮರೆಪ್ಪ, ರಾಜು ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ