ಆ್ಯಪ್ನಗರ

ಬೇಸಿಗೆ ಶಿಬಿರದಿಂದ ಮಕ್ಕಳ ಆಂತರಿಕ ಜ್ಞಾನ ವಿಕಾಸ

ಶೈಕ್ಷ ಣಿಕ ಅವಧಿ ಮುಗಿದ ನಂತರ ರಜಾ ದಿನಗಳಲ್ಲಿ ಚಿಣ್ಣರಿಗಾಗಿ ಆಯೋಜಿಸುವ ಬೇಸಿಗೆ ಶಿಬಿರಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರಹಾಕಿ ಅವರ ಅಂತರಿಕ ಜ್ಞಾನವನ್ನು ವಿಕಾಸ ಗೊಳಿಸುತ್ತದೆ ಎಂದು ಬಾಲ ವಿಕಾಸ ಯೋಜನಾಧಿಕಾರಿ ಲಾಲ್‌ಸಾಬ್‌ ಪೀರಾಪುರ್‌ ತಿಳಿಸಿದರು.

Vijaya Karnataka 24 May 2019, 4:13 pm
ಸುರಪುರ :ಶೈಕ್ಷ ಣಿಕ ಅವಧಿ ಮುಗಿದ ನಂತರ ರಜಾ ದಿನಗಳಲ್ಲಿ ಚಿಣ್ಣರಿಗಾಗಿ ಆಯೋಜಿಸುವ ಬೇಸಿಗೆ ಶಿಬಿರಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರಹಾಕಿ ಅವರ ಅಂತರಿಕ ಜ್ಞಾನವನ್ನು ವಿಕಾಸ ಗೊಳಿಸುತ್ತದೆ ಎಂದು ಬಾಲ ವಿಕಾಸ ಯೋಜನಾಧಿಕಾರಿ ಲಾಲ್‌ಸಾಬ್‌ ಪೀರಾಪುರ್‌ ತಿಳಿಸಿದರು.
Vijaya Karnataka Web the development of childrens inner knowledge from the summer camp
ಬೇಸಿಗೆ ಶಿಬಿರದಿಂದ ಮಕ್ಕಳ ಆಂತರಿಕ ಜ್ಞಾನ ವಿಕಾಸ


ಸಮೀಪದ ನರಸಿಂಗಪೇಟೆಯ ಶ್ರೀಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷ ಣ ಇಲಾಖೆ, ಸಿಡಿಪಿಒ ಮತ್ತು ಶ್ರೀಪುಟ್ಟರಾಜ ಜನ ಕಲ್ಯಾಣ ಸೇವಾ ಸಮಿತಿಯ ಸಹಯೋಗದಲ್ಲಿ ನಡೆದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗೂ ಕಲಿಕೆ ಮತ್ತು ಶಾಲಾ ಪಠ್ಯಗಳನ್ನು ಓದುವುದರ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಪ್ರತಿಯೊಂದರಲ್ಲಿಯೂ ಕಲಿಕೆ ಬಗ್ಗೆ ಆಸಕ್ತಿ ಹಾಗೂ ಅಭಿರುಚಿ ಮೂಡಿ ಬರುತ್ತದೆ. ಮಕ್ಕಳ ಅಭಿರುಚಿಗಳಿಗೆ ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಶ್ರೀಪುಟ್ಟರಾಜ ಜನ ಕಲ್ಯಾಣ ಸೇವಾ ಸಮಿತಿ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಮಾತನಾಡಿ, ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯ‌ ಹೆಚ್ಚಿಸಿ ಸ್ಪರ್ಧಾತ್ಮಕ ಜಗತ್ತಿಗೆ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಮಾಡಿ ಕೊಡಲಿದೆ ಬೇಸಿಗೆ ಶಿಬಿರ . ಮಕ್ಕಳು ಈ ಬೇಸಿಗೆ ಶಿಬಿರದಲ್ಲಿ ಕಲಿತ ಚಟುವಟಿಕೆಗಳು ಮುಂದುವರೆಸಿಕೊಂಡು ಹೋಗಬೇಕು ಎಂದು ನುಡಿದರು. ಶಾಲೆಯ ಮುಖ್ಯ ಗುರು ವಿರೇಶ ಬಿರಾದಾರ್‌ ಪಾಟೀಲ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಹಂಪಯ್ಯ ಹಿರೇಮಠ ಸ್ವಾಗತಿಸಿದರು. ನಿಂಗಪ್ಪ ಕುಂಬಾರ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ