ಆ್ಯಪ್ನಗರ

ಹೆಬ್ಬಾಳದಲ್ಲಿಗಿರಿಜನ ಉತ್ಸವದ ಸಂಭ್ರಮ

ಆಧುನಿಕ ಜೀವನ ಶೈಲಿಯ ಬದಲಾವಣೆಯ ಗಾಳಿಯಿಂದಾಗಿ ಇಂದು ನಮ್ಮ ಗ್ರಾಮೀಣ ಜಾನಪದ ಸತ್ವ ಸೊರಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಿಜನೋತ್ಸವ ಮೂಲಕ ಹಳ್ಳಿ ಹಳ್ಳಿಗಳಲ್ಲಿನ ಯುವಕರಲ್ಲಿಯ ಕಲೆಯನ್ನು ಗುರುತಿಸಿ ಪೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಯಾದಗಿರಿ ಜಿ.ಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌ ಮಾತನಾಡಿದರು.

Vijaya Karnataka 19 Oct 2019, 9:36 pm
ಹುಣಸಗಿ:ಆಧುನಿಕ ಜೀವನ ಶೈಲಿಯ ಬದಲಾವಣೆಯ ಗಾಳಿಯಿಂದಾಗಿ ಇಂದು ನಮ್ಮ ಗ್ರಾಮೀಣ ಜಾನಪದ ಸತ್ವ ಸೊರಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಿಜನೋತ್ಸವ ಮೂಲಕ ಹಳ್ಳಿ ಹಳ್ಳಿಗಳಲ್ಲಿನ ಯುವಕರಲ್ಲಿಯ ಕಲೆಯನ್ನು ಗುರುತಿಸಿ ಪೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಯಾದಗಿರಿ ಜಿ.ಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌ ಮಾತನಾಡಿದರು.
Vijaya Karnataka Web the festival of tribal festival
ಹೆಬ್ಬಾಳದಲ್ಲಿಗಿರಿಜನ ಉತ್ಸವದ ಸಂಭ್ರಮ


ಶನಿವಾರ ತಾಲೂಕಿನ ಹೆಬ್ಬಾಳ(ಬಿ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಸಂಜೆ ನಡೆದ ಗಿರಿಜನ ಉತ್ಸವ-2019 ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಮೊದಲು ಗ್ರಾಮಗಳಲ್ಲಿನಡೆಯುತ್ತಿದ್ದ ಕೃಷಿಕರ ಹಬ್ಬ ಹಾಗೂ ಜಾತ್ರೆಯ ಸಮಯದಲ್ಲಿಭಾರ ಎತ್ತುವುದು, ಗುಂಡು ಎಸೆಯುವುದು, ಕಬಡ್ಡಿ, ಕುಸ್ತಿ, ಜಾನಪದ ಕಲೆಗಳ, ಗಿಗೀ ಪದ, ಹಂತಿ ಹಾಡು, ಡೊಳ್ಳು ಕುಣಿತ, ಬಯಲಾಟ ಪ್ರದರ್ಶನ ಇವುಗಳೆಲ್ಲನಮ್ಮ ಜನಪದರ ಜೀವ ಜೀವಾಳವಾಗಿದ್ದವು. ಇವು ಪೀಳಿಗೆಯಿಂದ ಪೀಳಿಗೆಗೆ ಕಲೆ ಕರಗತವಾಗಿ ಹರಿದು ಬರುತ್ತಲಿತ್ತು. ಆದರೆ ಇದೀಗ ನಾವು ಸುಧಾರಣೆ, ಬದಲಾವಣೆಯ ಧಿಮಾಕು ಹಾಗೂ ಸೋಗಿನಲ್ಲಿಮರೆಯಬಾರದು ಎಂದರು.

ಯಾದಗಿರಿ ಜಿಲ್ಲಾಕನ್ನಡ ಸಂಸ್ಕೃತಿ ಇಲಾಖೆಯ, ಸಹಾಯಕ ನಿರ್ದೇಶಕ, ದತ್ತಪ್ಪ ಸಾಗನೂರು ಮಾತನಾಡಿ ನಮ್ಮ ಇಲಾಖೆಯು ಜಿಲ್ಲೆಯ ವಿವಿಧೆಡೆ, ಸಂಗೀತ, ಕಲೆ, ಕುಣಿತ, ಹಾಡುಗಾರರು ಹೊಂದಿರುವ ಕಲೆಯುಳ್ಳ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುವ ಮೂಲಕ ಕಲೆ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸಲಾಗುತ್ತಿದೆ. ಕಲೆಯನ್ನು ಪೋಷಿಸುವ ನಿರಂತರ ಪ್ರಯತ್ನ ಇಲಾಖೆ ಮಾಡುತ್ತಿದೆ. ಅಂತವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಕರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇಂದು ಗಿರಿಜನೋತ್ಸವದಲ್ಲಿಹುಣಸಗಿ ತಾಲೂಕಿನ ನಾನಾ ಕಡೆಗಳ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ಕಲೆಗೆ ಯಾವತ್ತು ಬೆಲೆ ಇದೆ, ಎಂ¸ುದನ್ನು ಮರೆಯಬೇಡಿ ಎಂದರು. ಕಲೆಗಳ ಉಳಿಸೋಣ ಅದಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಹೆಬ್ಬಾಳ(ಬಿ) ತಾ.ಪಂ.ಸದಸ್ಯ ರವಿಕುಮಾರ ರಾಠೋಡ್‌, ತಾ.ಪಂ. ಮಾಜಿ ಸದಸ್ಯ ವೆಂಕನಗೌಡ ಪಾಟೀಲ್‌, ಗುರುನಾಥರೆಡ್ಡಿ ಪಾಟೀಲ, ಮಲ್ಲಯ್ಯ ಗುತ್ತೆದಾರ,ಯಲ್ಲಯ್ಯ ಗುತ್ತೆದಾರ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದನಗೌಡ ಸಿರಗುಂಡ, ಶರಣಗೌಡ ಪಾಟೀಲ ಹಾಗೂ ಗ್ರಾ.ಪಂ. ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರು, ಮುಖಂಡರು, ಇತರರು ಇದ್ದರು.

ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ