ಆ್ಯಪ್ನಗರ

ನೀರು ಕುಡಿಯಲು ಹೋಗಿ ಮೂವರು ಮಕ್ಕಳು ಸಾವು

ಬಾವಿಯಲ್ಲಿ ನೀರು ಕುಡಿಯಲು ಹೋಗಿ ಮೂವರು ಮಕ್ಕಳು ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದ ಐಬಿ ತಾಂಡಾದಲ್ಲಿ ನಡೆದಿದೆ.

ವಿಕ ಸುದ್ದಿಲೋಕ 12 Apr 2017, 5:25 pm
ಯಾದಗಿರಿ: ಬಾವಿಯಲ್ಲಿ ನೀರು ಕುಡಿಯಲು ಹೋಗಿ ಮೂವರು ಮಕ್ಕಳು ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದ ಐಬಿ ತಾಂಡಾದಲ್ಲಿ ನಡೆದಿದೆ.
Vijaya Karnataka Web tjree children drown to well in yadgiri
ನೀರು ಕುಡಿಯಲು ಹೋಗಿ ಮೂವರು ಮಕ್ಕಳು ಸಾವು


ಗಶೇಶ್ (13), ಅಜಯ್ (12), ವಿಜಯ್ (11) ಜಮೀನಿನಲ್ಲಿ ಇರುವ ಭಾವಿಯಲ್ಲಿ ಮಕ್ಕಳು ನೀರು ಕುಡಿಯಲು ಹೋಗಿದ್ದಾರೆ. ಈ ವೇಳೆ ಒಬ್ಬ ಬಾಲಕನು ಆಯತಪ್ಪಿ ಬಿದ್ದಿದ್ದಾನೆ ಆತನನ್ನು ರಕ್ಷಣೆ ಮಾಡಲು ಇಬ್ಬರು ಬಾಲಕರು ಪ್ರಯತ್ನಿಸಿದ್ದಾರೆ. ಆದರೆ ಅವರು ಕೂಡ ಬಾವಿಯೊಳಗೆ ಬಿದ್ದ ಹಿನ್ನೆಲೆ ಮೂವರು ಅಸುನೀಗಿದ್ದಾರೆ.

ಮೂವರು ಮಕ್ಕಳನ್ನು ಕಳೆದುಕೊಂಡಿರು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ತಾಂಡಾದಲ್ಲಿ ಕಾರ್ಮೋಡ ಕವಿದಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ