ಆ್ಯಪ್ನಗರ

ಏಕೈಕ ಪುತ್ರನ ಒಳಿತಿಗೆ ಎಕ್ಕದಗಿಡಕ್ಕೆ ಜೋಡುಗಾಯಿ

ಏಕೈಕ ಪುತ್ರ ಇರುವ ತಾಯಂದಿರು ಬಿಳಿ ಎಕ್ಕಿ ಗಿಡಕ್ಕೆ ಪೂಜೆ ಸಲ್ಲಿಸಬೇಕು ಎಂಬ ವದಂತಿ ಜಿಲ್ಲೆಯಲ್ಲಿಕಾಡ್ಗಿಚ್ಚಿನಂತೆ ಹರಡಿದ್ದರಿಂದ, ಗುರುವಾರ ಎಕ್ಕಿದ ಗಿಡಗಳನ್ನು ಹುಡುಕಿಕೊಂಡು ಹೋಗಿ ಮಹಿಳೆಯರು ಪೂಜೆ ಸಲ್ಲಿಸಿದ ಪ್ರಸಂಗ ಎಲ್ಲೆಡೆ ಕಂಡು ಬಂತು.

Vijaya Karnataka 27 Dec 2019, 5:00 am
ಮಲ್ಲಪ್ಪ ಸಂಕೀನ್‌, ಯಾದಗಿರಿ:ಏಕೈಕ ಪುತ್ರ ಇರುವ ತಾಯಂದಿರು ಬಿಳಿ ಎಕ್ಕಿ ಗಿಡಕ್ಕೆ ಪೂಜೆ ಸಲ್ಲಿಸಬೇಕು ಎಂಬ ವದಂತಿ ಜಿಲ್ಲೆಯಲ್ಲಿಕಾಡ್ಗಿಚ್ಚಿನಂತೆ ಹರಡಿದ್ದರಿಂದ, ಗುರುವಾರ ಎಕ್ಕಿದ ಗಿಡಗಳನ್ನು ಹುಡುಕಿಕೊಂಡು ಹೋಗಿ ಮಹಿಳೆಯರು ಪೂಜೆ ಸಲ್ಲಿಸಿದ ಪ್ರಸಂಗ ಎಲ್ಲೆಡೆ ಕಂಡು ಬಂತು.
Vijaya Karnataka Web to the lordship of the only son
ಏಕೈಕ ಪುತ್ರನ ಒಳಿತಿಗೆ ಎಕ್ಕದಗಿಡಕ್ಕೆ ಜೋಡುಗಾಯಿ

ವಡಗೇರಾ ತಾಲೂಕಿನ ನಾಯ್ಕಲ್‌ದಲ್ಲಿಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿಏಕೈಕ ಪುತ್ರನಿರುವ ತಾಯಂದಿರು ಬಿಳಿ ಎಕ್ಕಿದಗಿಡಕ್ಕೆ ಗ್ರಹಣ ಮುಗಿದ ಬಳಿಕ ಪೂಜೆ ಸಲ್ಲಿಸಿರುವುದು.


ಒಬ್ಬ ಮಗ ಇರುವವರಿಗೆ ಕಂಕಣ ಸೂರ್ಯಗ್ರಹಣದಿಂದ ದೋಷ ತಗಲುತ್ತದೆ ಎಂಬ ವದಂತಿಯಿಂದಾಗಿ, ಅಂಥವರು ದೋಷ ನಿವಾರಣೆಗಾಗಿ ಗ್ರಹಣ ಮುಗಿದ ಬಳಿಕ ಬಿಳಿ ಎಕ್ಕಿಯ ಗಿÜಡಕ್ಕೆ ಪೂಜೆ ಸಲ್ಲಿಸಬೇಕು ಎಂದು ಸುದ್ದಿ ಹರಡಿದ್ದರಿಂದ ಬಹುತೇಕ ಮಹಿಳೆಯರು ಗಿಡಕ್ಕೆ ಮೊರೆ ಹೋಗಿದ್ದಾರೆ. ಗ್ರಹಣ ಮುಗಿದ ತಕ್ಷಣ ಜೋಡು ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ, ಏಕೈಕ ಸಂತಾನ ಚೆನ್ನಾಗಿರಲಿ ಎಂದು ಪ್ರಾರ್ಥಿಸಿದ್ದಾರೆ.

ಎಕ್ಕಿ ಗಿಡ ಹುಡುಕಾಟ:
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿಇಂಥ ದೃಶ್ಯ ಗುರುವಾರ ಮಧ್ಯಾಹ್ನ ಕಂಡು ಬಂದಿತು. ಗಿಡಗಳು ಸಿಗದೆ ಕೆಲ ಮಹಿಳೆಯರು ಪರದಾಡಿದ್ದಾರೆ. ಮತ್ತೆ ಕೆಲವರು, ಹುಡುಕಿ ಹೋಗಿ ಪೂಜೆ ಮಾಡಿದ್ದಾರೆ. ಗ್ರಹಣ ಎಂದಾಕ್ಷಣ ಹೆದರುವ ಬಹುತೇಕ ಜನರು, ಇಂಥ ಆಚರಣೆಗಳಿಗೆ ಬೇಗ ಕಿವಿಗೊಡುತ್ತಾರೆ. ಹೀಗಾಗಿ ಹೆದರಿ ಬಹುತೇಕ ಎಲ್ಲತಾಯಂದಿರು ಪೂಜೆ ಮಾಡಿದ್ದಾರೆ. ಕೆಲವರು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದರೂ ಕೂಡ ಅದಕ್ಕೆ ಸೊಪ್ಪು ಹಾಕಿಲ್ಲ. ಇನ್ನು ಕೆಲವರು, ಎಲ್ಲರೂ ಮಾಡುತ್ತಾರೆ ತಾವೂ ಮಾಡಿದರಾಯಿತು ಎಂದು, ವಿಷಯ ತಿಳಿದುಕೊಳ್ಳುವ ಗೋಜಿಗೆ ಹೋಗದೆ ಮೂಢ ಆಚರಣೆಗೆ ಮೊರೆ ಹೋಗಿದ್ದಾರೆ.

ಏನೇನು ಪೂಜೆ:
ತಾಯಂದಿರು ಎರಡು ತೆಂಗಿನಕಾಯಿ, ಕುಂಕುಮ, ಸಕ್ಕರೆ, ಊದಿನ ಕಡ್ಡಿ ತೆಗೆದುಕೊಂಡು ಹೋಗಿ ಗಿಡಕ್ಕೆ ಪೂಜೆ ಸಲ್ಲಿಸಿದ್ದಾರೆ. ಕೆಲ ಮಹಿಳೆಯರು ತಮ್ಮ ಏಕೈಕ ಸುಪುತ್ರರನ್ನೂ ಕರೆದುಕೊಂಡು ಹೋಗಿ ಅವರಿಂದಲೂ ಪೂಜೆ ಮಾಡಿಸಿದ್ದಾರೆ. ತಮ್ಮ ಮಗನಿಗೆ ಯಾವುದೇ ದೋಷ ಬಾರದಿರಲಿ ಎಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಗಿಡ-ಮರಗಳನ್ನು ಸುತ್ತಿದರೆ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಮೂಢ ಆಚರಣೆ ವದಂತಿಗಳಿಗೆ ಇಂದಿಗೂ ಮುಗ್ದ ಜನರು ಮಾರುಹೋಗುತ್ತಿದ್ದಾರೆ ಎನ್ನಲು ಗ್ರಹಣದಿನ ನಡೆಯುವ ಕೆಲವು ಕಂದಾಚಾರವೇ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವದಂತಿಯೇ ನಂಬಿ ನಗರ ಹಾಗೂ ವಡಗೇರಾ, ನಾಯ್ಕಲ್‌ ಮುಂತಾದ ಗ್ರಾಮಗಳಲ್ಲಿಮಹಿಳೆಯರು ಎಕ್ಕಿದ ಗಿಡಕ್ಕೆ ಪೂಜೆ ಸಲ್ಲಿಸಿದರು. ವೈಜ್ಞಾನಿಕವಾಗಿ ಎಷ್ಟೇ ನಾವು ನಾಗಾಲೋಟದತ್ತ ಮುನ್ನುಗ್ಗಿದ್ದರೂ ಸಹ ಕೆಲವೊಂದು ಸಾಂಪ್ರದಾಯಿಕ ಆಚರಣೆಗಳು ಬಿಡಲು ಮನಸ್ಸು ಒಪ್ಪುತ್ತಿಲ್ಲಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಹೀಗಾಗಿ ಜನರು ಇನ್ನೂ ಸಹ ಮೌಢ್ಯತೆ ಒಳಗೆ ಸಿಲುಕಿದ್ದಾರೆ ಎನ್ನಬಹುದು.

ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿಒಬ್ಬನೇ ಪುತ್ರ ಇದ್ದರೇ ಆತನಿಗೆ ದೋಷ ಬರಬಾರದು ಎಂದರೆ ಬಿಳಿ ಎಕ್ಕಿಗಿಡಕ್ಕೆ ಪೂಜೆ ಸಲ್ಲಿಸಬೇಕು ಎಂಬ ಸುದ್ದಿ ನಮ್ಮೂರಿನಲ್ಲಿಭಾರಿ ಪ್ರಮಾಣದಲ್ಲಿಹರಡಿತ್ತು. ಹೀಗಾಗಿ ಪ್ರತಿಯೊಬ್ಬ ತಾಯಂದಿರು ಗ್ರಹಣ ಮುಕ್ತಿ ಬಳಿಕ ನಮ್ಮಂತೆ ಪೂಜೆ ಸಲ್ಲಿಸಿದ್ದಾರೆ.

-ಲಕ್ಷ್ಮಿಬಾಯಿ ಕುಂಬಾರ, ನಾಯ್ಕಲ್‌ ಗ್ರಾಮದ ನಿವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ