ಆ್ಯಪ್ನಗರ

ತೊಗರಿ ಚೀಲ ಸಮೇತ ನಿಂತ ಟ್ರ್ಯಾಕ್ಟರ್‌; ರೈತರಿಗೆ ಬಾಡಿಗೆ ಹೊರೆ..!

ಹಮಾಲರಿಗೆ ಕ್ವಿಂಟಾಲ್‌ಗೆ 35 ರೂ. ಕೂಲಿ ಕೊಡುವ ವಿಚಾರದಲ್ಲಿಗೊಂದಲ ಉಂಟಾಗಿರುವ ಪರಿಣಾಮ ಸುರಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಸಂಘವು ಕಳೆದ ಎರಡು ದಿನಗಳಿಂದಲೂ ತೊಗರಿ ಖರೀದಿ ಮಾಡುವುದು ಸ್ಥಗಿತಗೊಳಿಸಿದೆ.

Vijaya Karnataka 22 Feb 2020, 10:41 pm
ಮಲ್ಲಪ್ಪ ಸಂಕೀನ್‌, ಯಾದಗಿರಿ: ಹಮಾಲರಿಗೆ ಕ್ವಿಂಟಾಲ್‌ಗೆ 35 ರೂ. ಕೂಲಿ ಕೊಡುವ ವಿಚಾರದಲ್ಲಿಗೊಂದಲ ಉಂಟಾಗಿರುವ ಪರಿಣಾಮ ಸುರಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಸಂಘವು ಕಳೆದ ಎರಡು ದಿನಗಳಿಂದಲೂ ತೊಗರಿ ಖರೀದಿ ಮಾಡುವುದು ಸ್ಥಗಿತಗೊಳಿಸಿದೆ.
Vijaya Karnataka Web tractor with a tora bag rent burden for farmers
ತೊಗರಿ ಚೀಲ ಸಮೇತ ನಿಂತ ಟ್ರ್ಯಾಕ್ಟರ್‌; ರೈತರಿಗೆ ಬಾಡಿಗೆ ಹೊರೆ..!


ಯಾರು ಖರೀದಿ ಗುತ್ತಿಗೆ ಪಡೆದುಕೊಂಡಿದ್ದಾರೆ ಅವರೇ ಕೊಡಲಿ ಎಂಬುದು ರೈತರ ವಾದವಾಗಿದೆ. ಆದರೆ ಅವರು ನಾವು ಪೂರ್ತಿ ಕೊಡುವುದಿಲ್ಲ, ರೈತರು ಕೂಡ 35 ರೂ.ನಲ್ಲಿಅರ್ಧ ಕೊಡಲಿ ಎಂಬುದು ಸಂಘದ ವಾದವಾಗಿದೆ. ಭಾರಿ ಜಟಾಪಟಿ ನಡೆಯುತ್ತಿದ್ದು, ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎನ್ನುವ ಆತಂಕ ಎದುರಾಗಿದೆ.

ರೈತರು ಟ್ರ್ಯಾಕ್ಟರ್‌ ಮೂಲಕ ತೊಗರಿ ತರುತ್ತಾರೆ. ಅದನ್ನು ಇಳಿಸಬೇಕಿದೆ. ಆ ಮೇಲೆ ತೂಕ ಮಾಡಬೇಕು. ಇದಾದ ಮೇಲೆ ಲಾರಿಯಲ್ಲಿಮತ್ತೊಮ್ಮೆ ಲೋಡ್‌ ಮಾಡಬೇಕಾಗುತ್ತದೆ. ಹೀಗಾಗಿಯೇ ಕ್ವಿಂಟಾಲ್‌ಗೆ 35 ರೂ. ಕೊಡಬೇಕಾಗುತ್ತದೆ. ಇದನ್ನು ಕೊಡುವುದಕ್ಕಾಗಿಯೇ ಆರಂಭದಲ್ಲಿವಿವಾದ ಉಂಟಾಗಿ ಖರೀದಿ ಪ್ರಕ್ರಿಯೆಯನ್ನೇ ಬಂದ್‌ ಮಾಡಿದ್ದು, ಅನ್ನದಾತರು ಕಂಗಾಲು ಆಗುವಂತೆ ಮಾಡಿದೆ.

ದೇವಾಪುರ, ನಾಗಾರಾಳ, ಲಕ್ಷ್ಮಿಪುರ, ಕಕ್ಕೇರಾ, ದೇವರ ಗೋನಾಲ, ಹಂದ್ರಾಳ, ಕೋನಾಳ, ಚಿಗರಾಳ, ಹೇಮನೂರ, ಶೆಳ್ಳಗಿ, ಮುಷ್ಟಳ್ಳಿ , ಹಾವಿನಾಳ, ಕೃಷ್ಣಾಪುರ, ರತ್ತಾಳ, ದೇವಿಕಾರ, ಹಸನಾಪುರ ಗ್ರಾಮದ ಸಾಕಷ್ಟು ಪ್ರಮಾಣದಲ್ಲಿರೈತರು ತೊಗರಿ ಮಾರಾಟ ಮಾಡಲು ಆಗಮಿಸಿದ್ದಾರೆ. ಆದರೆ ಅವರ ತೊಗರಿ ಮಾತ್ರ ಖರೀದಿಯಾಗುತ್ತಿಲ್ಲ. ಟ್ರ್ಯಾಕ್ಟರ್‌ನಲ್ಲಿತೊಗರಿ ಚೀಲಗಳನ್ನು ತುಂಬಿಕೊಂಡು ಬಂದಿರುವ ರೈತರು ಟ್ರ್ಯಾಕ್ಟರ್‌ ಸಮೇತ ತೊಗರಿ ಚೀಲಗಳನ್ನು ಕಾಯುವಂತಹ ಪರಿಸ್ಥಿತಿ ಎದುರಾಗಿದ್ದು, ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕಳೆದ ಎರಡು ದಿನಗಳಿಂದಲೂ ಸಹ ರೈತರು ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ನಿತ್ಯ ನೂರಾರು ರೂಪಾಯಿ ಅನವಶ್ಯಕವಾಗಿ ಖರ್ಚು ಮಾಡುವಂತಾಗಿದೆ. ತೊಗರಿ ಮಾರಾಟ ಮಾಡಿ ವಾಪಸ್‌ ಊರಿಗೆ ಹೋಗಬೇಕೆಂದವರಿಗೆ ತೀವ್ರ ನಿರಾಸೆಯಾಗಿದೆ. ಹೀಗಾಗಿಯೇ ಸುಮಾರು 150ಕ್ಕೂ ಹೆಚ್ಚು ಕ್ವಿಂಟಾಲ್‌ ತೊಗರಿ ಮಾರಾಟವಾಗದೇ ಉಳಿದುಕೊಂಡಿದೆ ಎನ್ನುತ್ತಾರೆ ರೈತರು.

ಮೊದಲೇ ರೈತರು ಸಾಲಗಾರರ ಕಾಟ ತಾಳಲು ಆಗುತ್ತಿಲ್ಲ. ಇತ್ತ ಖರೀದಿ ಕೇಂದ್ರಗಳಲ್ಲಿತೊಗರಿ ಹಾಗೆಯೇ ಉಳಿದುಕೊಂಡಿದೆ ಎಂದು ಅನ್ನದಾತರು ನೋವು ತೋಡಿಕೊಳ್ಳುತ್ತಾರೆ.

ಅನವಶ್ಯಕ ಬಾಡಿಗೆ


ರೈತರು ಬಾಡಿಗೆ ನೀಡಿ ಟ್ರ್ಯಾಕ್ಟರ್‌ನಲ್ಲಿತೊಗರಿ ಚೀಲಗಳನ್ನು ಹಾಕಿಕೊಂಡು ಬಂದಿದ್ದಾರೆ. ತೊಗರಿ ಇಳಿಸಿ ವಾಪಸ್‌ ಊರಿಗೆ ಹೋಗಬೇಕಿತ್ತು. ಆದರೆ ಖರೀದಿ ಮಾಡದ ಪರಿಣಾಮ ಅದನ್ನು ಅಲ್ಲಿಯೇ ಇಟ್ಟಿದ್ದಾರೆ. ಹೀಗಾಗಿ ಕಳೆದ ಎರಡು ದಿನಗಳಿಂದಲೂ ಸಹ ರೈತರು ಟ್ರಾ ್ಯಕ್ಟರ್‌ಗೆ ಬಾಡಿಗೆ ಅನವಶ್ಯವಾಗಿ ಪಾವತಿ ಮಾಡುವಂತಾಗಿದೆ.

ಹಮಾಲರಿಗೆ 35 ರೂ. ಕೂಲಿ ಕೊಡುವ ವಿಚಾರದಲ್ಲಿಗೊಂದಲ ಉಂಟಾಗಿದೆ. ಹೀಗಾಗಿಯೇ ತೊಗರಿ ಖರೀದಿ ಮಾಡುವುದನ್ನು ಬಂದ್‌ ಮಾಡಲಾಗಿದೆ. ಸಂಘದ ವಿರುದ್ಧ ಕೆಲವರು ವಿನಾಃಕಾರಣ ವ್ಯವಸ್ಥಿತವಾಗಿ ಷಡÜ್ಯಂತ್ರ ರೂಪಿಸುತ್ತಿದ್ದಾರೆ.
-ಶಿವರುದ್ರಪ್ಪ, ಸಂಘದ ಕಾರ್ಯದರ್ಶಿ.

ಯಾರು ಟೆಂಡರ್‌ ಪಡೆದುಕೊಂಡಿದ್ದಾರೆ ಅವರು ಹಮಾಲರಿಗೆ ಕೂಲಿ ಕೊಡಬೇಕು. ಅದು ಬಿಟ್ಟು ರೈತರಲ್ಲಿಕೇಳುವುದು ಸರಿಯಲ್ಲ. ಅನವಶ್ಯಕವಾಗಿ ಖರೀದಿ ಮಾಡುವುದನ್ನು ನಿಲ್ಲಿಸಲಾಗಿದೆ. ತಕ್ಷಣವೇ ಕ್ರಮಕೈಗೊಳ್ಳಲು ಮುಂದಾಗಬೇಕು.
-ಶಾಂತಗೌಡ, ರೈತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ