ಆ್ಯಪ್ನಗರ

ಸುರಪುರದಲ್ಲಿ ವರ್ಷಧಾರೆಯ ಮಧ್ಯೆಯೇ ಮಂಗಳಮುಖಿ 'ಸಲ್ಮಾನ್‌ ಖಾನ್‌' ಅಂತ್ಯಸಂಸ್ಕಾರ

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಯಾದಗಿರಿಯ ಸುರಪುರ ತಾಲೂಕಿನ ಕಬಾಡಗೇರಾದ ಮಂಗಳಮುಖಿ ಸಲ್ಮಾನ್‌ ಖಾನ್‌ ಅಂತ್ಯಸಂಸ್ಕಾರವನ್ನು ಧಾರಾಕಾರ ಮಳೆಯಲ್ಲೇ ನೆರವೇರಿಸಲಾಗಿದೆ. 40ಕ್ಕೂ ಹೆಚ್ಚು ಮಂಗಳಮುಖಿಯರಷ್ಟೆ ಅಲ್ಲದೆ ಸುತ್ತಲಿನ ಗ್ರಾಮಸ್ಥರು ಕಣ್ಣೀರಿಟ್ಟಿದ್ದು ವಿಶೇಷ.

Vijaya Karnataka 25 Oct 2019, 8:10 pm
ಸುರಪುರ : ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಇಲ್ಲಿಯ ಕಬಾಡಗೇರಾದ ಮಂಗಳಮುಖಿ ಸಲ್ಮಾನ್‌ ಖಾನ್‌ ಅಂತ್ಯಸಂಸ್ಕಾರ ಗುರುವಾರ ರಾತ್ರಿ 10:30ರ ಸುಮಾರಿಗೆ ನಗರದ ಕಬಾಡಗೇರಾ ಸಮೀಪದ ಜಮೀನಿನಲ್ಲಿ ಜರುಗಿತು.
Vijaya Karnataka Web transgender


ಮಂಗಳಮುಖಿ ಸಲ್ಮಾನ್‌ಖಾನ್‌ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದೇ ತಡ ಸುತ್ತಲಿನ ತಾಲೂಕು ಮತ್ತು ಕಲಬುರಗಿಯಿಂದ 40ಕ್ಕೂ ಹೆಚ್ಚು ಮಂಗಳಮುಖಿಯರು ಅಂತ್ಯಕ್ರಿಯೆಗೆ ಆಗಮಿಸಿದ್ದರು. ಸಾವಿಗೆ ಕಣ್ಣೀರು ಹಾಕಿ ರೋದಿಸಿದರು. ಮಂಗಳಮುಖಿ ಸಂಘದ ರಾಜ್ಯಾಧ್ಯಕ್ಷೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮಂಗಳಮುಖಿಯಾಗಿ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ ಅಕ್ಷಯ್ ಕುಮಾರ್

ಪಾರ್ಥಿವ ಶರೀರ ಗುರುವಾರ ರಾತ್ರಿ 8ಕ್ಕೆ ಕಬಾಡಗೇರಾಕ್ಕೆ ತರಲಾಯಿತು. ಕಳೆಬರಹ ಕಂಡು ಸಹೋದರ ಮತ್ತು ಸಹೋದರಿ ಕಣ್ಣೀರು ಹಾಕಿದರು. ಸಲ್ಮಾನ್‌ ನೋಡಲು ನಗರದ ನಾಗರಿಕರು ಸೇರಿ ಬಡಾವಣೆ ಜನ ಕಿಕ್ಕಿರಿದು ನೆರೆದಿದ್ದರು. ಕುಂಟುಬಂದವರು ಸಲ್ಮಾನ್‌ ಮಂಗಳಮುಖಿಯಾದ ಕಾರಣ ಅಂತ್ಯಕ್ರಿಯೆ ಮಾಡಲು ನಿರಾಕರಿಸಿದರು ಎಂದು ತಿಳಿದುಬಂದಿದೆ. ಆದರೆ, ಜಯ ಕರ್ನಾಟಕ ಸಂಘಟನೆ ತಾಲೂಕು ಸಮಿತಿ ಅಧ್ಯಕ್ಷ ರವಿನಾಯಕ ಬೈರಿಮರಡಿ, ನಗರ ಘಟಕದ ಅಧ್ಯಕ್ಷ ಮಲ್ಲುನಾಯಕ ಕಬಾಡಗೇರಾ ಮಾನವೀಯತೆ ದೃಷ್ಟಿಯಿಂದ ಅಂತ್ಯಕ್ರಿಯೆ ಮಾಡಲು ಮುಂದಾದರು.

ಮಂಗಳಮುಖಿಯಾಗಲಿರುವ ಬಿಗ್ ಬಿ ಅಮಿತಾಬ್ ಬಚ್ಚನ್?

ಜಯ ಕರ್ನಾಟಕ ಸಂಘಟನೆಯವರಿಗೆ ಇತರ ಮಂಗಳ ಮುಖಿಯರು ಸಾಥ್‌ ನೀಡಿದರು. ನಂತರ ವಿಧಿವಿಧಾನಗೊಳಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಸಾರ್ವಜನಿಕರು ಸೇರಿ ನಾಗರಿಕರು ತಮ್ಮ ಕುಟುಂಬದ ಸದಸ್ಯರೊಬ್ಬನನ್ನು ಕಳೆದುಕೊಂಡಂತೆ ಕಣ್ಣೀರು ಹಾಕಿದರು. ಮಂಗಳಮುಖಿಯಾಗಿದ್ದ ಸ್ನೇಹಜೀವಿ ಸಲ್ಮಾನ್‌ ಖಾನ್‌ನ ಉಪಕಾರ ಮತ್ತು ಸಹಾಯ ಮನೋಭಾವದ ಬಗ್ಗೆ ಗುಣಗಾನ ಮಾಡಿದರು.

ಕೇರಳದ ಪ್ರಥಮ ಮಂಗಳಮುಖಿಯರ ಕಲೋತ್ಸವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ