ಆ್ಯಪ್ನಗರ

ಗ್ರಾನೆಟ್‌ ಎರಡು ಲಾರಿ ಪೊಲೀಸ್‌ ವಶಕ್ಕೆ

ಅಕ್ರಮವಾಗಿ ಗ್ರಾನೈಟ್‌ ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಭಾನುವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Vijaya Karnataka 14 Oct 2019, 5:00 am
ಕೆಂಭಾವಿ:ಅಕ್ರಮವಾಗಿ ಗ್ರಾನೈಟ್‌ ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಭಾನುವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Vijaya Karnataka Web two garnet lorry police arrested
ಗ್ರಾನೆಟ್‌ ಎರಡು ಲಾರಿ ಪೊಲೀಸ್‌ ವಶಕ್ಕೆ


ಪಟ್ಟಣ ಸಮೀಪದ ಹೊಸಕೇರಾ ಗ್ರಾಮದ ಗುಡ್ಡದಿಂದ ಇಲಕಲ್‌ ಕಡೆಗೆ ಎರಡು ಲಾರಿಗಳಲ್ಲಿನಾಲ್ಕು ದೊಡ್ಡ ಗ್ರಾನೈಟ್‌ ಕಲ್ಲುಗಳನ್ನು ತುಂಬಿಕೊಂಡು ಬೆಳಗಿನ ಜಾವ ಇಲಕಲ್‌ ಕಡೆಗೆ ಹೋಗುವಾಗ ರೈತ ಸಂಘಟನೆ ಪದಾಧಿಕಾರಿಗಳು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಲಕಲ್‌ನ ಇಸೂಫ್‌ ಭಾಗವಾನ ಸೂಚನೆ ಮೇರೆಗೆ ತುಂಬಿಕೊಂಡು ಹೋಗುತ್ತಿರುವದಾಗಿ ಲಾರಿ ಚಾಲಕರಾದ ಶಿವಪ್ಪ ಹಣಮಂತಪ್ಪ ಮತ್ತು ಲಕ್ಷತ್ರ್ಮಣ ಹಣಮಪ್ಪ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸುಮಾರು 5 ಲಕ್ಷ ಮೌಲ್ಯದ ಕಲ್ಲುಗಳು ಇವಾಗಿವೆ. ಈ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ ಎಂದು ಡಿವೈಎಸ್‌ಪಿ ಶಿವನಗೌಡ ಪಾಟೀಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ