ಯಾದಗಿರಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೋಮುವಾದ ತರಲು ಬಿಜೆಪಿ ಮತ್ತು ಅವರ ಬೆಂಬಲಿತ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿ, ಸಿಪಿಐ (ಎಂ), ಎಸ್ಯುಸಿಐ ಮತ್ತು ಸಿಪಿಐ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಮತ್ತು ದೇಶದ ವಿಚಾರವಾದಿ ಹಾಗೂ ಪ್ರಗತಿಪರರ ಮೇಲೆ ಬಲವಂತ ಪ್ರಯೋಗ ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಯುತ್ತದೆ. ಹೀಗಾಗಿ ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಪಾದಿಸಿದರು. ದೆಹಲಿಯ ಜೆಎನ್ಯು ನಲ್ಲಿನ ಪ್ರಜಾತಾಂತ್ರಿಕ ವಾತಾವರಣದ ಬಗ್ಗೆ ವಿವಾದವನ್ನು ಸೃಷ್ಟಿಸುತ್ತಿದೆ ಆ ಮೂಲಕ ಅಲ್ಲಿರುವ ವಿದ್ಯಾರ್ಥಿ ಸಂಘವನ್ನು ಧಮನಮಾಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಇದಕ್ಕೂ ಮುಂಚೆಯೂ ಪುಣೆಯ ಎಫ್ಟಿಐಐ ನ ಮೇಲಿನ ದಾಳಿ, ಹೈದ್ರಾಬಾದ್ನ ಕೇಂದ್ರೀಯ ವಿವಿ ಯ ರೋಹಿತ್ ವೇಮುಲು ದುರಂತ ಆತ್ಮಹತ್ಯೆ ಪ್ರಕರಣ ಮತ್ತು ಚೆನ್ನೈಐಐಟಿ ಯಲ್ಲಿ ಹಾಗೂ ಜಾಧವಪುರ ವಿವಿ ಮೇಲಿನ ಪ್ರಕರಣಗಳು ಸ್ಪಷ್ಟಪಡಿಸುತ್ತಿವೆ ಎಂದು ಹೇಳಿದರು.
ಜೆಎನ್ಯು ವಿದ್ಯಾರ್ಥಿ ಸಂಘದ ಅದ್ಯಕ್ಷರನ್ನು ತರಾತುರಿಯಲ್ಲಿ ಬಂಧನ ಮಾಡಲಾಗಿದೆ. ಇದಲ್ಲದೇ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ರಾಷ್ಟ್ರ-ವಿರೋಧಿ ಹಣೆಪಟ್ಟಿಯನ್ನು ಅಂಟಿಸಿರುವುದು ನಾಚಿಗೇಡು ಸಂಗತಿಯಾಗಿದೆ ಎಂದರು. ಬಿಜೆಪಿ ವಕೀಲರು ಪಟಿಯಾಲ ಕೋರ್ಟ್ ಹೊರಗಡೆ ಮತ್ತು ಒಳಗಡೆ ಮಾಧ್ಯಮ ಮತ್ತು ವಿದ್ಯಾರ್ಥಿ ನಾಯಕರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು ,ಮಾರಕವಾದ ಬೆಳವಣಿಗೆಯಾಗಿದೆ ಎಂದರು.
ಬಿಜೆಪಿ ಮತ್ತು ಅವರ ಬೆಂಬಲಿತ ಪಕ್ಷಗಳು ಮಾಡುತ್ತಿರುವ ಸಂಚು ಇದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯವಾದವರು ಹೋರಾಟ ಮಾಡುವ ಹಕ್ಕು ಇದೆ. ಆದರೆ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಸಂಪೂರ್ಣವಾಗಿ ಕಸಿದುಕೊಂಡಿದೆ ಎಂದು ದೂರಿದರು.
ನಮ್ಮ ದೇಶದ ಮತ್ತು ವಿದೇಶದ ಚಿಂತನಾಶೀಲ, ಪ್ರಜಾತಾಂತ್ರಿಕ ಮನೋಭಾವದ ಜನತೆ ಸಂಘಪರಿವಾರದ ಈ ನಿಂದನೀಯ ಪಿತೂರಿಯ ವಿರುದ್ಧ ಗಟ್ಟಿ ದ್ವನಿ ಎತ್ತಿ ವಿದ್ಯಾರ್ಥಿಗಳ ಪರವಾಗಿ ಹಲವು ಸಂಘಟನೆಗಳು ನಿಂತಿವೆ ಎಂದರು. ನಮ್ಮ ಬೇಡಿಕೆಗಳನ್ನು ಈಡೇರಿಸಲು ನಿಷ್ಕಾಳಜಿತನ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.ನಂತರ ಬೇಡಿಕೆ ಕುರಿತು ಬರೆದ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ. ಸೋಮಶೇಖರ್, ಮಲ್ಲಿಕಾರ್ಜುನ ಸತ್ಯಂಪೇಟ, ಎಸ್.ಎಂ. ಸಾಗರ, ರಮೇಶಗೌಡ ನಡಹಳ್ಳಿ, ಡಿ. ಉಮಾದೇವಿ, ರಾಮಲಿಂಗಪ್ಪ ಸೇರಿದಂತೆ ಇನ್ನಿತರರಿದ್ದರು.
ವಿದ್ಯಾರ್ಥಿ ಮತ್ತು ದೇಶದ ವಿಚಾರವಾದಿ ಹಾಗೂ ಪ್ರಗತಿಪರರ ಮೇಲೆ ಬಲವಂತ ಪ್ರಯೋಗ ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಯುತ್ತದೆ. ಹೀಗಾಗಿ ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಪಾದಿಸಿದರು. ದೆಹಲಿಯ ಜೆಎನ್ಯು ನಲ್ಲಿನ ಪ್ರಜಾತಾಂತ್ರಿಕ ವಾತಾವರಣದ ಬಗ್ಗೆ ವಿವಾದವನ್ನು ಸೃಷ್ಟಿಸುತ್ತಿದೆ ಆ ಮೂಲಕ ಅಲ್ಲಿರುವ ವಿದ್ಯಾರ್ಥಿ ಸಂಘವನ್ನು ಧಮನಮಾಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಇದಕ್ಕೂ ಮುಂಚೆಯೂ ಪುಣೆಯ ಎಫ್ಟಿಐಐ ನ ಮೇಲಿನ ದಾಳಿ, ಹೈದ್ರಾಬಾದ್ನ ಕೇಂದ್ರೀಯ ವಿವಿ ಯ ರೋಹಿತ್ ವೇಮುಲು ದುರಂತ ಆತ್ಮಹತ್ಯೆ ಪ್ರಕರಣ ಮತ್ತು ಚೆನ್ನೈಐಐಟಿ ಯಲ್ಲಿ ಹಾಗೂ ಜಾಧವಪುರ ವಿವಿ ಮೇಲಿನ ಪ್ರಕರಣಗಳು ಸ್ಪಷ್ಟಪಡಿಸುತ್ತಿವೆ ಎಂದು ಹೇಳಿದರು.
ಜೆಎನ್ಯು ವಿದ್ಯಾರ್ಥಿ ಸಂಘದ ಅದ್ಯಕ್ಷರನ್ನು ತರಾತುರಿಯಲ್ಲಿ ಬಂಧನ ಮಾಡಲಾಗಿದೆ. ಇದಲ್ಲದೇ ದೇಶದ್ರೋಹದ ಪ್ರಕರಣ ದಾಖಲಿಸಿ ಅವರನ್ನು ರಾಷ್ಟ್ರ-ವಿರೋಧಿ ಹಣೆಪಟ್ಟಿಯನ್ನು ಅಂಟಿಸಿರುವುದು ನಾಚಿಗೇಡು ಸಂಗತಿಯಾಗಿದೆ ಎಂದರು. ಬಿಜೆಪಿ ವಕೀಲರು ಪಟಿಯಾಲ ಕೋರ್ಟ್ ಹೊರಗಡೆ ಮತ್ತು ಒಳಗಡೆ ಮಾಧ್ಯಮ ಮತ್ತು ವಿದ್ಯಾರ್ಥಿ ನಾಯಕರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು ,ಮಾರಕವಾದ ಬೆಳವಣಿಗೆಯಾಗಿದೆ ಎಂದರು.
ಬಿಜೆಪಿ ಮತ್ತು ಅವರ ಬೆಂಬಲಿತ ಪಕ್ಷಗಳು ಮಾಡುತ್ತಿರುವ ಸಂಚು ಇದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯವಾದವರು ಹೋರಾಟ ಮಾಡುವ ಹಕ್ಕು ಇದೆ. ಆದರೆ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಸಂಪೂರ್ಣವಾಗಿ ಕಸಿದುಕೊಂಡಿದೆ ಎಂದು ದೂರಿದರು.
ನಮ್ಮ ದೇಶದ ಮತ್ತು ವಿದೇಶದ ಚಿಂತನಾಶೀಲ, ಪ್ರಜಾತಾಂತ್ರಿಕ ಮನೋಭಾವದ ಜನತೆ ಸಂಘಪರಿವಾರದ ಈ ನಿಂದನೀಯ ಪಿತೂರಿಯ ವಿರುದ್ಧ ಗಟ್ಟಿ ದ್ವನಿ ಎತ್ತಿ ವಿದ್ಯಾರ್ಥಿಗಳ ಪರವಾಗಿ ಹಲವು ಸಂಘಟನೆಗಳು ನಿಂತಿವೆ ಎಂದರು. ನಮ್ಮ ಬೇಡಿಕೆಗಳನ್ನು ಈಡೇರಿಸಲು ನಿಷ್ಕಾಳಜಿತನ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.ನಂತರ ಬೇಡಿಕೆ ಕುರಿತು ಬರೆದ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ. ಸೋಮಶೇಖರ್, ಮಲ್ಲಿಕಾರ್ಜುನ ಸತ್ಯಂಪೇಟ, ಎಸ್.ಎಂ. ಸಾಗರ, ರಮೇಶಗೌಡ ನಡಹಳ್ಳಿ, ಡಿ. ಉಮಾದೇವಿ, ರಾಮಲಿಂಗಪ್ಪ ಸೇರಿದಂತೆ ಇನ್ನಿತರರಿದ್ದರು.