ಆ್ಯಪ್ನಗರ

ದುಷ್ಕರ್ಮಿಗಳ ಬಂಧನಕ್ಕೆ ವೀರಶೈವ ಸಮಾಜ ಒತ್ತಾಯ

ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಪತ್ನಿ ಮೇಲೆ ನಡೆದಿರುವ ಹಲ್ಲೆ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ತಕ್ಷ ಣ ಬಂಧಿಸಬೇಕು ಎಂದು ಒತ್ತಾಯಿಸಿ ತಾಲೂಕು ವೀರಶೈವ ಸಮಾಜದ ಮುಖಂಡರು ಒತ್ತಾಯಿಸಿದರು.

Vijaya Karnataka 25 Apr 2018, 5:54 pm
ಸುರಪುರ : ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಪತ್ನಿ ಮೇಲೆ ನಡೆದಿರುವ ಹಲ್ಲೆ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ತಕ್ಷ ಣ ಬಂಧಿಸಬೇಕು ಎಂದು ಒತ್ತಾಯಿಸಿ ತಾಲೂಕು ವೀರಶೈವ ಸಮಾಜದ ಮುಖಂಡರು ಒತ್ತಾಯಿಸಿದರು.
Vijaya Karnataka Web veerashaiva society insists on the arrest of the perpetrators
ದುಷ್ಕರ್ಮಿಗಳ ಬಂಧನಕ್ಕೆ ವೀರಶೈವ ಸಮಾಜ ಒತ್ತಾಯ


ಮಾಗನೂರ ಪತ್ನಿ ಮೇಲೆ ನಡೆದ ಘಟನೆಯ ಬಗ್ಗೆ ಇದುವರೆಗೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಮತ್ತು ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ ಎಂದು ಆರೋಪಿಸಿದರು. ನಮ್ಮ ವೀರಶೈವ ಲಿಂಗಾಯತ ಸಮಾಜದ ಜನರ ಮೇಲೆ ಮೇಲಿಂದ ಮೇಲೆ ಅನ್ಯಾಯ, ದೌರ್ಜನ್ಯ ಮತ್ತು ಅತ್ಯಾಚಾರ ಕೃತ್ಯಗಳು ನಡೆಯುತ್ತಿವೆ ಎಂದು ಮುಖಂಡರು ದೂರಿದರು.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಸತ್ಯವನ್ನು ಹೊರತರಬೇಕು. ಇಲ್ಲವಾದಲ್ಲಿ ಶನಿವಾರ ತಾಲೂಕು ವೀರಶೈವ ಲಿಂಗಾಯತ ಸಮಿತಿಯು ಸುರಪುರ ಬಂದ್‌ಗೆ ಕರೆ ಕೊಟ್ಟು, ಉಗ್ರ ಪ್ರತಿಭಟನೆ ಕೈಗೊಂಡು ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.

ಡಿವೈಎಸ್‌ಪಿ ಶೀಲವಂತ ಹೊಸ್ಮನಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಐ ಪಂಡಿತ ಸಗರ, ಮುಖಂಡರಾದ ಬಸಲಿಂಗಪ್ಪ ಪಾಟೀಲ್‌, ಜಿ.ಎಸ್‌.ಪಾಟೀಲ್‌, ವೀರಪ್ಪ ಅವಂಟಿ, ಬಸವರಾಜ ಜಮದ್ರಖಾನಿ, ರಾಜಶೇಖರಗೌಡ ವಜ್ಜಲ್‌,ಎಚ್‌.ಸಿ.ಪಾಟೀಲ್‌, ಎಸ್‌.ಎನ್‌.ಕನಕರಡ್ಡಿ, ಬಸಣ್ಣ ಬೂದೂರು, ಆದಪ್ಪ ದೇಸಾಯಿ, ಸೂರುಗೇಶ ವಾರದ, ರಾಜಶೇಖರ ಪಾಟೀಲ್‌, ಮಲ್ಲಣ್ಣ ಮಧೋಳ, ಸಂಗಣ್ಣ ಎಕ್ಕೆಳ್ಳಿ, ಸೋಮಶೇಖರ ಶಾಬಾದಿ, ಶಾಂತರಾಜ ಬಾರಿ, ವಿರೇಶ ದೇಶಮುಖ, ಡಾ.ಬಸವರಾಜ ಪಾಟೀಲ್‌. ಮಂಜುನಾಥ ಗುಳಗಿ ಸೇರಿದಂತೆ ಇತರರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ