ಯಾದಗಿರಿ:ಗ್ರಾಮ ವಾಸ್ತವ್ಯ ಕಾರ್ಯಕ್ರಮ ನನ್ನ ಅತ್ಯಂತ ಪ್ರೀತಿಯ ಕಾರ್ಯಕ್ರಮವಾಗಿದೆ. ಇದನ್ನು ವಾರದಲ್ಲಿ ಒಂದು ದಿನವಾದರೂ ಮುಂದುವರಿಸಸಬೇಕು ಎಂಬ ಮಹಾದಾಸೆ ಹೊಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲು ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಬೆಳಗಿನ ಜಾವ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾಡಿನ ಜನತೆಯನ್ನು ಹತ್ತಿರದಿಂದ ನೋಡುವ ಮೂಲಕ ಅವರ ಸಮಸ್ಯೆ ಆಲಿಸುವುದಕ್ಕಾಗಿಯೇ ಗ್ರಾಮ ವಾಸ್ತವ್ಯ ನಡೆಸಲಾಗುತ್ತಿದೆ. ಇದರಿಂದಾಗಿ ಹಳ್ಳಿಗಳ ಚಿತ್ರಣವೇ ಬದಲಾಗುವುದರಲ್ಲಿ ಅನುಮಾನವೇ ಇಲ್ಲವೆಂದು ತಿಳಿಸಿದರು.
ಈ ಹಿಂದೆ ನಾನು ಸಿಎಂ ಆಗಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ನಮ್ಮ ರಾಜ್ಯ ಅಷ್ಟೊಂದು ಆರ್ಥಿಕವಾಗಿ ಸಬಲತೆ ಹೊಂದಿರಲಿಲ್ಲ. ಆದರೆ ಇಂದು ನಾವು 2.5 ಲಕ್ಷ ಕೋಟಿ ಗಾತ್ರೆ ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿದರು.
ರೈತರ ಆರ್ಥಿಕ ಸಲಬಲೀಕರ ಆಗುವುದು ಅಗತ್ಯವಿದೆ. ರೈತರು ಮಹಾರಾಷ್ಟ್ರದ ಮರಾಠವಾಡಾ ಮಾದರಿಯಲ್ಲಿ ಕೃಷಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ. ಈ ಮಾದರಿ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಸರಕಾರದಿಂದ ತಿಳಿವಳಿಕೆ ಮೂಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಹೇಳಿದರು.
ನಾನು ವಸತಿ ಮಾಡುವ ಶಾಲೆ ಅಭಿವೃದ್ಧಿ ಆಗುವ ಜತೆಗೆ ಬೇರೆ ಶಾಲೆಗಳ ಚಿತ್ರಣ ಸಹ ಬದಲಾವಣೆ ಆಗಲಿದೆ. ಅಕ್ಕಪಕ್ಕದ ಶಾಲೆಗಳಲ್ಲಿ ಅಭಿವೃದ್ಧಿ ಆಗುವುದರಿಂದಾಗಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಗ್ರಾಮ ವಾಸ್ತವ್ಯ ಮಾಡುವುದರಿಂದಾಗಿ ಹಳ್ಳಿಗಳ ಚಿತ್ರಣ ಬದಲಾಗಲಿದೆ. ಇದರಿಂದಾಗಿ ನಾವು ಗ್ರಾಮೀಣ ಜನರಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಸಹ ಸಾಧ್ಯವಾಗುತ್ತದೆ. ಅವರು ಸಹ ಖುಷಿಯಾಗಿ ಜೀವನ ನಡೆಸಬಹುದು ಎಂದು ತಿಳಿಸಿದರು.
ಈ ಸಮ್ಮಿಶ್ರ ಸರಕಾರ ಜನರ ಸಮೀಪವೇ ಆಡಳಿತ ನಡೆಸುತ್ತಿದೆ. ಬರೀ ನಗರ ಕೇಂದ್ರವನ್ನೇ ಮಾನದಂಡವಾಗಿ ಇಟ್ಟುಕೊಂಡಿಲ್ಲ. ಇದೊಂದು ಹಳ್ಳಿ ಮತ್ತು ರೈತರ ಪರವಾದ ಸರಕಾರವಾಗಿದೆ. ಮುಂದಿನ ದಿನಗಳಲ್ಲಿ ಆಡಳಿತವನ್ನು ಇನ್ನಷ್ಟು ಚುರುಕಿನಿಂದ ನಡೆಸಲಾಗುವುದು. ಗ್ರಾಮ ವಾಸ್ತವ್ಯ ಇದಕ್ಕೆ ಪೂರಕವಾಗಲಿದೆ ಎಂದು ಹೇಳಿದರು.
ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲು ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಬೆಳಗಿನ ಜಾವ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾಡಿನ ಜನತೆಯನ್ನು ಹತ್ತಿರದಿಂದ ನೋಡುವ ಮೂಲಕ ಅವರ ಸಮಸ್ಯೆ ಆಲಿಸುವುದಕ್ಕಾಗಿಯೇ ಗ್ರಾಮ ವಾಸ್ತವ್ಯ ನಡೆಸಲಾಗುತ್ತಿದೆ. ಇದರಿಂದಾಗಿ ಹಳ್ಳಿಗಳ ಚಿತ್ರಣವೇ ಬದಲಾಗುವುದರಲ್ಲಿ ಅನುಮಾನವೇ ಇಲ್ಲವೆಂದು ತಿಳಿಸಿದರು.
ಈ ಹಿಂದೆ ನಾನು ಸಿಎಂ ಆಗಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ನಮ್ಮ ರಾಜ್ಯ ಅಷ್ಟೊಂದು ಆರ್ಥಿಕವಾಗಿ ಸಬಲತೆ ಹೊಂದಿರಲಿಲ್ಲ. ಆದರೆ ಇಂದು ನಾವು 2.5 ಲಕ್ಷ ಕೋಟಿ ಗಾತ್ರೆ ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿದರು.
ರೈತರ ಆರ್ಥಿಕ ಸಲಬಲೀಕರ ಆಗುವುದು ಅಗತ್ಯವಿದೆ. ರೈತರು ಮಹಾರಾಷ್ಟ್ರದ ಮರಾಠವಾಡಾ ಮಾದರಿಯಲ್ಲಿ ಕೃಷಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ. ಈ ಮಾದರಿ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಸರಕಾರದಿಂದ ತಿಳಿವಳಿಕೆ ಮೂಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಹೇಳಿದರು.
ನಾನು ವಸತಿ ಮಾಡುವ ಶಾಲೆ ಅಭಿವೃದ್ಧಿ ಆಗುವ ಜತೆಗೆ ಬೇರೆ ಶಾಲೆಗಳ ಚಿತ್ರಣ ಸಹ ಬದಲಾವಣೆ ಆಗಲಿದೆ. ಅಕ್ಕಪಕ್ಕದ ಶಾಲೆಗಳಲ್ಲಿ ಅಭಿವೃದ್ಧಿ ಆಗುವುದರಿಂದಾಗಿ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಗ್ರಾಮ ವಾಸ್ತವ್ಯ ಮಾಡುವುದರಿಂದಾಗಿ ಹಳ್ಳಿಗಳ ಚಿತ್ರಣ ಬದಲಾಗಲಿದೆ. ಇದರಿಂದಾಗಿ ನಾವು ಗ್ರಾಮೀಣ ಜನರಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಸಹ ಸಾಧ್ಯವಾಗುತ್ತದೆ. ಅವರು ಸಹ ಖುಷಿಯಾಗಿ ಜೀವನ ನಡೆಸಬಹುದು ಎಂದು ತಿಳಿಸಿದರು.
ಈ ಸಮ್ಮಿಶ್ರ ಸರಕಾರ ಜನರ ಸಮೀಪವೇ ಆಡಳಿತ ನಡೆಸುತ್ತಿದೆ. ಬರೀ ನಗರ ಕೇಂದ್ರವನ್ನೇ ಮಾನದಂಡವಾಗಿ ಇಟ್ಟುಕೊಂಡಿಲ್ಲ. ಇದೊಂದು ಹಳ್ಳಿ ಮತ್ತು ರೈತರ ಪರವಾದ ಸರಕಾರವಾಗಿದೆ. ಮುಂದಿನ ದಿನಗಳಲ್ಲಿ ಆಡಳಿತವನ್ನು ಇನ್ನಷ್ಟು ಚುರುಕಿನಿಂದ ನಡೆಸಲಾಗುವುದು. ಗ್ರಾಮ ವಾಸ್ತವ್ಯ ಇದಕ್ಕೆ ಪೂರಕವಾಗಲಿದೆ ಎಂದು ಹೇಳಿದರು.