ಸುರಪುರ (ಯಾದಗಿರಿ): ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದ ಬೆಂಗಳೂರನ ರೇಖಾ. ಎಂ. ಎನ್. ಅವರನ್ನು ಬೆಂಗಳೂರಿನಲ್ಲಿ ಬಂಧಿಸಿ ಸುರಪುರಕ್ಕೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ. ಬಿ. ವೇದ ಮೂರ್ತಿ ತಿಳಿಸಿದರು. ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಕುರಿತಂತೆ ವಿವರ ನೀಡಿದರು. ನೌಕರಿ ನೆಪದಲ್ಲಿ ಆರೋಪಿ ರೇಖಾ ಅವರು ಜನರಿಂದ ಹಣ ಪಡೆದು ಶಾಸಕ ರಾಜೂಗೌಡ ಅವರು ನನಗೆ ಪರಿಚಯವಿದ್ದಾರೆಂದು ಮಾತನಾಡಿದ ಆಡಿಯೋ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ರೇಖಾ ಅವರ ವಿರುದ್ಧ ದೂರು ಸಲ್ಲಿಸಿದ್ದರು.
ಪ್ರಕರಣದ ತನಿಖೆ ಮುಂದುವರಿಸಿ ನೌಕರಿ ಸಲುವಾಗಿ ಹಣ ನೀಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಈರಪ್ಪ ಶರಬಣಗೌಡ ರಸ್ತಾಪುರ ಕೋನಾಳ ಹೇಳಿಕೆಯಂತೆ ರೇಖಾಗೆ ಮತ್ತು ಈರಪ್ಪಗೌಡ ಸೂಗೂರು ಇವರಿಗೆ ಹಣ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಾದ ರೇಖಾ ಮತ್ತು ಈರಪ್ಪಗೌಡ ಇವರು ಒಂದು ಟ್ರಸ್ಟ್ ಮಾಡಿ ಅದರ ಮುಖಾಂತರ ಬ್ಯಾಂಕ್ ತೆಗೆದು ಬ್ಯಾಂಕಿನಲ್ಲಿ ನನ್ನ ಇಬ್ಬರು ಮಕ್ಕಳಿಗೆ ನೌಕರಿ ಕೊಡಿಸುವುದಾಗಿ ಆಸೆ ಹಚ್ಚಿ ನನ್ನ ಕಡೆಯಿಂದ 5 ಲಕ್ಷ ಹಣ ಪಡೆದು ಕೊಂಡಿದ್ದಾರೆಂದು ತಿಳಿಸಿರುತ್ತಾರೆ.
ಇದೇ ರೀತಿ ಸೂಗೂರಿನ ಮಲ್ಲನಗೌಡ ಶಂಕ್ರಪ್ಪ ಕಮತಗಿ ಇವರ ಹೇಳಿಕೆ ಪಡೆಯಲಾಗಿ ಆತನೂ ಸಹ ತನ್ನ ಹೆಂಡತಿ ನೌಕರಿ ಸಲುವಾಗಿ 3.65 ಲಕ್ಷ ಹಣವನ್ನು ಈರಪ್ಪ ಗೌಡ ಮುಖಾಂತರ ರೇಖಾಗೆ ನೀಡಿರುತ್ತಾರೆ. ಸಗರ ಗ್ರಾಮದ ವಿಶ್ವನಾಥರೆಡ್ಡಿ, ಸಂಗಾರೆಡ್ಡಿ ಬಿಳವಾರ 15 ಲಕ್ಷ ರೂ. ಹಣವನ್ನು ನೌಕರಿ ಆಸೆಗಾಗಿ ಈರಪ್ಪ ಗೌಡ ಮತ್ತು ರೇಖಾಗೆ ಕೊಟ್ಟಿರುತ್ತಾರೆಂದು ತಿಳಿದು ಬಂದಿದೆ.
ನಂತರ ಸದರಿ ತನಿಖೆಯನ್ನು ಮುಂದುವರೆಸಿ ಆರೋಪಿತರ ಪತ್ತೆಗಾಗಿ ಡಿವೈಎಸ್ಪಿ ವೀರೇಶ ನೇತೃತ್ವದಲ್ಲಿ ಪಿಐಗಳಾದ ಸುನೀಲ್ ಮೂಲಿ ಮನಿ, ಬಾಪುಗೌಡ ಪಾಟೀಲ್ ಸಿಬ್ಬಂದಿ ಬಸವರಾಜ, ಶಿವ ಶರಣಪ್ಪ, ಸವಿತಾ, ಬನ್ನಮ್ಮ, ಲತಾ ಇವರನ್ನೊಳಗೊಂಡ ತಂಡ ರಚಿಸಲಾಗಿತ್ತು. ತಂಡವು ಆರೋಪಿ ರೇಖಾ ಅವರನ್ನು ಪತ್ತೆ ಹಚ್ಚಿ ಬಂಧಿಸಿದೆ ಎಂದರು.
ರೇಖಾಳನ್ನು ವಿಚಾರಣೆ ಮಾಡಲಾಗಿ ಎನ್ಜಿಒ ಟ್ರಸ್ಟ್ ಮಾಡುವುದಾಗಿ ಟ್ರಸ್ಟ್ ಮೂಲಕ ಬ್ಯಾಂಕ್ ತೆಗೆದು ಬ್ಯಾಂಕ್ನಲ್ಲಿ ನೌಕರಿ ಕೊಡಿಸುವುದಾಗಿ ಈರಪ್ಪಗೌಡನ ಮುಖಾಂತರ ಸಾರ್ವಜನಿಕರಿಗೆ ಭೇಟಿ ಮಾಡಿಸಿ ನೌಕರಿ ಆಮಿಷದಲ್ಲಿ ಸುಮಾರು ಜನರಿಂದ ಹಣ ಪಡೆದಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾಳೆ.
ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ 10 - 12 ಜನರ ಬಳಿ ಹಣ ಪಡೆದಿರುತ್ತಾರೆ. ಆರೋಪಿ ರೇಖಾ ಅವರು ಶಾಸಕ ರಾಜೂಗೌಡ ನನಗೆ ಯಾವುದೇ ತರ ಪರಿಚಯವಿರುವುದಿಲ್ಲ ಮತ್ತು ಒಮ್ಮೆಯೂ ಸಹ ನೋಡಿರುವುದಿಲ್ಲ. ಜನರನ್ನು ನಂಬಿಸಲು ಅವರ ಹೆಸರನ್ನು ಬಳಸಿದ್ದು ನಮ್ಮಿಂದ ತಪ್ಪಾಗಿದೆ. ಇದರಲ್ಲಿ ನಮಗೂ ಮತ್ತು ಶಾಸಕರಿಗೆ ಯಾವುದೇ ಸಂಬಂಧವಿರುವುದಿಲ್ಲವೆಂದು ತಿಳಿಸಿದ್ದಾಳೆ ಎಂದು ಹೇಳಿದರು.
ಆರೋಪಿ ರೇಖಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ವಿಚಾರಣೆ ಕೈಗೊಳ್ಳುತ್ತೇವೆ. ಗಣ್ಯ ವ್ಯಕ್ತಿಗಳ ಹೆಸರು ಹೇಳಿ ಉದ್ಯೋಗ ಆಕಾಂಕ್ಷಿಗಳನ್ನು ನಂಬಿಸಿ ಉದ್ಯೋಗ ಕೊಡಿಸುವುದಾಗಿ ಮೋಸ ಮಾಡುತ್ತಾರೆ. ಆದ್ದರಿಂದ ಜನರು ಜಾಗ್ರತೆ ವಹಿಸಬೇಕು. ಇಂತಹ ಮೋಸ ವಂಚನೆಗಳಿಗೆ ಒಳಗಾಗಬಾರದು. ಹಾಗೇನಾದರು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಎಸ್ಪಿ ಅವರು ತಿಳಿಸಿದರು.
ಪ್ರಕರಣದ ತನಿಖೆ ಮುಂದುವರಿಸಿ ನೌಕರಿ ಸಲುವಾಗಿ ಹಣ ನೀಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಈರಪ್ಪ ಶರಬಣಗೌಡ ರಸ್ತಾಪುರ ಕೋನಾಳ ಹೇಳಿಕೆಯಂತೆ ರೇಖಾಗೆ ಮತ್ತು ಈರಪ್ಪಗೌಡ ಸೂಗೂರು ಇವರಿಗೆ ಹಣ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಾದ ರೇಖಾ ಮತ್ತು ಈರಪ್ಪಗೌಡ ಇವರು ಒಂದು ಟ್ರಸ್ಟ್ ಮಾಡಿ ಅದರ ಮುಖಾಂತರ ಬ್ಯಾಂಕ್ ತೆಗೆದು ಬ್ಯಾಂಕಿನಲ್ಲಿ ನನ್ನ ಇಬ್ಬರು ಮಕ್ಕಳಿಗೆ ನೌಕರಿ ಕೊಡಿಸುವುದಾಗಿ ಆಸೆ ಹಚ್ಚಿ ನನ್ನ ಕಡೆಯಿಂದ 5 ಲಕ್ಷ ಹಣ ಪಡೆದು ಕೊಂಡಿದ್ದಾರೆಂದು ತಿಳಿಸಿರುತ್ತಾರೆ.
ಇದೇ ರೀತಿ ಸೂಗೂರಿನ ಮಲ್ಲನಗೌಡ ಶಂಕ್ರಪ್ಪ ಕಮತಗಿ ಇವರ ಹೇಳಿಕೆ ಪಡೆಯಲಾಗಿ ಆತನೂ ಸಹ ತನ್ನ ಹೆಂಡತಿ ನೌಕರಿ ಸಲುವಾಗಿ 3.65 ಲಕ್ಷ ಹಣವನ್ನು ಈರಪ್ಪ ಗೌಡ ಮುಖಾಂತರ ರೇಖಾಗೆ ನೀಡಿರುತ್ತಾರೆ. ಸಗರ ಗ್ರಾಮದ ವಿಶ್ವನಾಥರೆಡ್ಡಿ, ಸಂಗಾರೆಡ್ಡಿ ಬಿಳವಾರ 15 ಲಕ್ಷ ರೂ. ಹಣವನ್ನು ನೌಕರಿ ಆಸೆಗಾಗಿ ಈರಪ್ಪ ಗೌಡ ಮತ್ತು ರೇಖಾಗೆ ಕೊಟ್ಟಿರುತ್ತಾರೆಂದು ತಿಳಿದು ಬಂದಿದೆ.
ನಂತರ ಸದರಿ ತನಿಖೆಯನ್ನು ಮುಂದುವರೆಸಿ ಆರೋಪಿತರ ಪತ್ತೆಗಾಗಿ ಡಿವೈಎಸ್ಪಿ ವೀರೇಶ ನೇತೃತ್ವದಲ್ಲಿ ಪಿಐಗಳಾದ ಸುನೀಲ್ ಮೂಲಿ ಮನಿ, ಬಾಪುಗೌಡ ಪಾಟೀಲ್ ಸಿಬ್ಬಂದಿ ಬಸವರಾಜ, ಶಿವ ಶರಣಪ್ಪ, ಸವಿತಾ, ಬನ್ನಮ್ಮ, ಲತಾ ಇವರನ್ನೊಳಗೊಂಡ ತಂಡ ರಚಿಸಲಾಗಿತ್ತು. ತಂಡವು ಆರೋಪಿ ರೇಖಾ ಅವರನ್ನು ಪತ್ತೆ ಹಚ್ಚಿ ಬಂಧಿಸಿದೆ ಎಂದರು.
ರೇಖಾಳನ್ನು ವಿಚಾರಣೆ ಮಾಡಲಾಗಿ ಎನ್ಜಿಒ ಟ್ರಸ್ಟ್ ಮಾಡುವುದಾಗಿ ಟ್ರಸ್ಟ್ ಮೂಲಕ ಬ್ಯಾಂಕ್ ತೆಗೆದು ಬ್ಯಾಂಕ್ನಲ್ಲಿ ನೌಕರಿ ಕೊಡಿಸುವುದಾಗಿ ಈರಪ್ಪಗೌಡನ ಮುಖಾಂತರ ಸಾರ್ವಜನಿಕರಿಗೆ ಭೇಟಿ ಮಾಡಿಸಿ ನೌಕರಿ ಆಮಿಷದಲ್ಲಿ ಸುಮಾರು ಜನರಿಂದ ಹಣ ಪಡೆದಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾಳೆ.
ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ 10 - 12 ಜನರ ಬಳಿ ಹಣ ಪಡೆದಿರುತ್ತಾರೆ. ಆರೋಪಿ ರೇಖಾ ಅವರು ಶಾಸಕ ರಾಜೂಗೌಡ ನನಗೆ ಯಾವುದೇ ತರ ಪರಿಚಯವಿರುವುದಿಲ್ಲ ಮತ್ತು ಒಮ್ಮೆಯೂ ಸಹ ನೋಡಿರುವುದಿಲ್ಲ. ಜನರನ್ನು ನಂಬಿಸಲು ಅವರ ಹೆಸರನ್ನು ಬಳಸಿದ್ದು ನಮ್ಮಿಂದ ತಪ್ಪಾಗಿದೆ. ಇದರಲ್ಲಿ ನಮಗೂ ಮತ್ತು ಶಾಸಕರಿಗೆ ಯಾವುದೇ ಸಂಬಂಧವಿರುವುದಿಲ್ಲವೆಂದು ತಿಳಿಸಿದ್ದಾಳೆ ಎಂದು ಹೇಳಿದರು.
ಆರೋಪಿ ರೇಖಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ವಿಚಾರಣೆ ಕೈಗೊಳ್ಳುತ್ತೇವೆ. ಗಣ್ಯ ವ್ಯಕ್ತಿಗಳ ಹೆಸರು ಹೇಳಿ ಉದ್ಯೋಗ ಆಕಾಂಕ್ಷಿಗಳನ್ನು ನಂಬಿಸಿ ಉದ್ಯೋಗ ಕೊಡಿಸುವುದಾಗಿ ಮೋಸ ಮಾಡುತ್ತಾರೆ. ಆದ್ದರಿಂದ ಜನರು ಜಾಗ್ರತೆ ವಹಿಸಬೇಕು. ಇಂತಹ ಮೋಸ ವಂಚನೆಗಳಿಗೆ ಒಳಗಾಗಬಾರದು. ಹಾಗೇನಾದರು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಎಸ್ಪಿ ಅವರು ತಿಳಿಸಿದರು.