ಆ್ಯಪ್ನಗರ

ಉತ್ತರಪ್ರದೇಶದಲ್ಲಿ ಗೆಲುವಿಗಾಗಿ ಮೋದಿ, ಯೋಗಿಯಿಂದ ತಪ್ಪು: ಬಿಕೆಸಿ

ಉತ್ತರಪ್ರದೇಶದಲ್ಲಿ ಗೆಲುವಿಗಾಗಿ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.

ವಿಕ ಸುದ್ದಿಲೋಕ 10 Jun 2017, 3:41 pm
ಬೆಂಗಳೂರು: ಉತ್ತರಪ್ರದೇಶದಲ್ಲಿ ಗೆಲುವಿಗಾಗಿ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.
Vijaya Karnataka Web pm modi and yogi decision wrong and yogi decision wrong bkc
ಉತ್ತರಪ್ರದೇಶದಲ್ಲಿ ಗೆಲುವಿಗಾಗಿ ಮೋದಿ, ಯೋಗಿಯಿಂದ ತಪ್ಪು: ಬಿಕೆಸಿ


ರೈತರ ಸಾಲ ಮನ್ನಾ ಮಾಡುವುದು ಮೊದಲು ಇವರ ಬತ್ತಳಿಕೆಯಲ್ಲಿ ಇರಲಿಲ್ಲ. ಎರಡನೇ ಬಾರಿ ಸಮೀಕ್ಷೆ ನಡೆಸಿದಾಗ ರೈತರ ಸಾಲ ಮನ್ನಾ ಅನಿವಾರ್ಯವಾಗಿತ್ತು. ಹೀಗಾಗಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿದ್ದಾರೆ. 36 ಸಾ ವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದು, ಇದನ್ನು ರಾಜ್ಯ ಸರಕಾರ ತೀರಿಸಲು ಸಾಧ್ಯವೇ ಇಲ್ಲ. ಈಗ ಕೇಂದ್ರ ಸರಕಾರ ಉತ್ತರಪ್ರದೇಶಕ್ಕೆ ಸಹಾಯ ಮಾಡಲೇಬೇಕಿದೆ ಎಂದರು.

ಕೇಂದ್ರದ ಕೃಷಿ ಮಂತ್ರಿ ರಾಧ ಮೋಹನ್ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಾರೆ. ರೈತರ ಆತ್ಮಹತ್ಯೆ ನಡೆಯುತ್ತಿದೆ. ಕೇಂದ್ರದ ಕೃಷಿ ಸಚಿವರು ಬಾಬಾ ರಾಮದೇವ್ ಜತೆ ಯೋಗ ಮಾಡುತ್ತಿದ್ದಾರೆ. ಮೋದಿ ಪ್ರಚಾರ ಮಾಡುವಾಗ ರೈತರ ಸಾಲ ಮನ್ನಾ ಅಂದಿದ್ದಕ್ಕೆ ಅಲ್ಲಿನ ಜನ ಮತ ಚಲಾಯಿಸಿದರು. ಮೋದಿ ಈ ತನಕ ರೈತರ ಆತ್ಮಹತ್ಯೆಗೆ ಸಾಂತ್ವನ ಹೇಳಿಲ್ಲ. ರೈತರ ಸಾಲ ಮನ್ನಾ ಎಂದು ಹೇಳಿ ರೈತರ ಜೀವಗಳ ಮೇಲೆ ಆಟ ಆಡಬಾರದು. ಅದರ ಬದಲು ತುರ್ತು ಸಂಸತ್ತಿನ ಅಧಿವೇಶನವನ್ನು ಕರೆಯಬೇಕೆಂದು ಬಿಕೆಸಿ ಒತ್ತಾಯಿಸಿದರು.

ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಸಾಲ ಮನ್ನಾದ ಬಗ್ಗೆ ಮಾತನಾಡಬಾರದು. ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲೇ ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಇಷ್ಟೆಲ್ಲಾ ಇದ್ದ ಮೇಲೂ ಶೆಟ್ಟರ್ ಮತ್ತು ಬಿ.ಎಸ್.ವೈ ಹೇಗೆ ಸಾಲ ಮನ್ನಾದ ಬಗ್ಗೆ ಮಾತು ಆಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ