ಆ್ಯಪ್ನಗರ

ನೀರಿನ ದಡ ಪ್ರದೇಶದ ಭೂಮಿಯನ್ನು ಖರೀದಿಸುವ ಮೊದಲು ಇರಲಿ ಎಚ್ಚರ!

ಕರೆಗಳ ಸುತ್ತಮುತ್ತ ಭೂಮಿ, ಫ್ಲಾಟ್‌, ಮನೆ ಖರೀದಿ ವೇಳೆ ಅತಿಯಾದ ಎಚ್ಚರಿಕೆ ಅಗತ್ಯ. ಸುಂದರ ವಾತಾವರಣಕ್ಕೆ ಮಾರು ಹೋಗುವ ಮುನ್ನ, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವುದು ಮುಖ್ಯವಾಗುತ್ತದೆ. ಯಾವೆಲ್ಲ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕೆಂಬ ಮಾಹಿತಿ ಇಲ್ಲಿದೆ ನೋಡಿ!

Magicbricks 17 Dec 2019, 2:05 pm
ಕೆರೆಯ ಆವೃತ್ತದ ಪ್ರದೇಶದಲ್ಲಿ ಆಸ್ತಿಯನ್ನು ಖರೀದಿಸುವುದು, ಅಲ್ಲಿ ವಿಶೇಷ ನಿವೇಶನ ಅಥವಾ ಕಟ್ಟಡಗಳನ್ನು ನಿರ್ಮಿಸುವುದು ಒಂದು ಫ್ಯಾಷನ್ ಎಂದು ಕೆಲವರು ಪರಿಗಣಿಸುತ್ತಾರೆ. ಆದರೆ ಕೆರೆ ಅಥವಾ ಇನ್ಯಾವುದೇ ಜಲಾವೃತ ಪ್ರದೇಶದ ಸುತ್ತಲಿನ ಪ್ರದೇಶ ಸಾಮಾನ್ಯವಾಗಿ ಸರ್ಕಾರಿ ಭೂಮಿಯಾಗಿರುತ್ತವೆ. ಹಾಗಾಗಿ ಅಂತಹ ಸ್ಥಳದಲ್ಲಿ ಜಾಗವನ್ನು ಖರೀದಿಸುವಾಗ ಸಾಕಷ್ಟು ತನಿಖೆ ಹಾಗೂ ಪರಿಶೀಲನೆ ಮಾಡಬೇಕು. ಜೊತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು. ಹಾಗಾದರೆ ಅವು ಯಾವವು? ಎನ್ನುವುದನ್ನು ಪರಿಶೀಲಿಸೋಣ ಬನ್ನಿ...
Vijaya Karnataka Web Magic bricks


ಮೊದಲನೆಯದಾಗಿ, ಭೂಮಿಯನ್ನು ಖರೀದಿಸುವಾಗ ಆಸಕ್ತಿಯ ಜಾಗವು ಕೆರೆ, ಹೊಳೆ ಅಥವಾ ಇನ್ಯಾವುದೇ ಜಲಾವೃತ ಪ್ರದೇಶಗಳ ದಡ ಪ್ರದೇಶಗಳಿಂದ ಕೂಡಿದೆಯೇ? ಎನ್ನುವುದನ್ನು ಪರಿಶೀಲಿಸಬೇಕು. ಅಂತಹ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸುವುದು ನಿಷೇಧಿಸಲಾಗಿರುತ್ತದೆ. ಬಫರ್ ವಲಯ ಎಂದರೆ ಕೆರೆ, ಹೊಳೆ, ರಾಜಕಾಲುವೆ ಸರೋವರ, ನದಿ ಸೇರಿದಂತೆ ಇನ್ನಿತರ ಸಂಗತಿಯಲ್ಲಿ ಇರುವ ದಡ ಪ್ರದೇಶ. ನೀರಿನ ದಡ ಪ್ರದೇಶಗಳು ಸಾಮಾನ್ಯವಾಗಿ ಪರಿಸರ ಸಂರಕ್ಷಣೆಗಾಗಿ ಗೊತ್ತುಪಡಿಸಿದ ಸ್ಥಳಗಳಾಗಿರುತ್ತವೆ. ಅಂತಹ ಸ್ಥಳದಲ್ಲಿ ಕಟ್ಟಡಗಳ ನಿರ್ಮಾಣವನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗುವುದು.

ಬೆಂಗಳೂರಿನಲ್ಲಿ ಸರೋವರ ಅಥವಾ ಕೆರೆಯ ಆವೃತ್ತಿಯಲ್ಲಿ ಬರುವ ದಡ ಪ್ರದೇಶವು ನೀರಿನ ಪ್ರದೇಶದಿಂದ ಆಚೆಗೆ 30 ಮೀಟರ್ ದೂರದ ಪ್ರದೇಶಗಳನ್ನು ಬಫರ್ ಪ್ರದೇಶ ಅಥವಾ ದಡ ಪ್ರದೇಶ ಎಂದು ಪರಿಗಣಿಸಲಾಗುವುದು. ಹಾಗಾಗಿ ನಾವು ಖರೀದಿಸುವ ಆಸ್ತಿ ಅಥವಾ ಭೂಮಿಯು ನೀರಿನ ದಡ ಅಥವಾ ಬಫರ್ ಪ್ರದೇಶದ ವ್ಯಾಪ್ತಿಯಲ್ಲಿ ಬರದಂತೆ ಕಾಳಜಿ ವಹಿಸಬೇಕು.

ಎರಡನೆಯದಾಗಿ, ನೀವು ಖರೀದಿಸಲು ಯೋಜಿಸುತ್ತಿರುವ ಆಸ್ತಿಯು ರಾಜ ಕಾಲುವೆಯ ಸುತ್ತ 25 ಮೀಟರ್ ದೂರದಲ್ಲಿ ಇದೆಯೇ ಎನ್ನುವುದನ್ನು ತನಿಖೆ ಮಾಡಬೇಕು. ಜೊತೆಗೆ ಚಂಡಮಾರುತದ ಒಳಚರಂಡಿಗಳು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ರಾಜ ಕಾಲುವೆಯು ಹೆಚ್ಚಿನ ನೀರನ್ನು ನೀರಿನ ಪ್ರದೇಶಗಳಿಗೆ ವರ್ಗಾಯಿಸಲು ಬಳಸುವ ಮಾರ್ಗವಾಗಿರುತ್ತದೆ. ವಿಶೇಷವಾಗಿ ಮಳೆಯ ಸಂದರ್ಭದಲ್ಲಿ ಬರುವ ನೀರು ಮತ್ತು ಚಂಡಮಾರುತದಂತಹ ಸ್ಥಿತಿಯಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರನ್ನು ಯಾವುದೇ ಅಡಚಣೆ ಉಂಟಾಗಬಾರದು ಎಂದು ಒಳಚರಂಡಿ ವ್ಯವಸ್ಥೆಯಲ್ಲಿ ಬಿಡಲಾಗುವುದು. ರಾಜಕಾಲುವೆಯಿಂದ 25 ಮೀಟರ್ ಅಂತರದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ನಿಷೇಧಿಸಲಾಗಿದೆ. ನೀವು ಖರೀದಿಸಲು ಆಸಕ್ತಿ ತೋರುವ ಆಸ್ತಿಯು ಈ ವ್ಯಾಪ್ತಿಯಲ್ಲಿ ಇಲ್ಲ ಎನ್ನುವುದನ್ನು ಮೊದಲು ಖಚಿತಪಡಿಸಿಕೊಂಡು ಮುಂದುವರಿಯಿರಿ.

ಅದಕ್ಕಾಗಿ, ಕರ್ನಾಟಕ ಸಮೀಕ್ಷಾ ಇಲಾಖೆಗಳ ವೆಬ್‍ಸೈಟ್‍ಗೆ ಲಾಗಿನ್ ಆಗಿ. ನಂತರ ಆದಾಯದ ನಕ್ಷೆ ಪೋರ್ಟಲ್ ಅನ್ನು ಪರಿಶೀಲಿಸಿ. ನಿಮ್ಮ ಆಸ್ತಿ ಅಥವಾ ಆಸಕ್ತಿಯ ಆಸ್ತಿಯು ಯಾವುದೇ ಬಫರ್ ವಲಯ, ಜಲಮೂಲ, ಒತ್ತುವರಿ ಜಾಗ ಅಥವಾ ಒಳಚರಂಡಿಯ ಸುತ್ತ ಅತಿಕ್ರಮಣದ ಜಾಗ ಅಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಈ ಸಂಗತಿಗಳ ಬಗ್ಗೆ ಸಹಾಯ ಪಡೆಯಲು ದಿಶಾಂಕ್ ಅಪ್ಲಿಕೇಶನ್ ಅನ್ನು ಸಹ ಡೌನ್‍ಲೋಡ್ ಮಾಡಿ ನೋಡಬಹುದು.

ಮೂರನೇಯದಾಗಿ, ನಿಮ್ಮ ಸಮೀಕ್ಷೆಯ ಆಸ್ತಿಯ ಪಕ್ಕದಲ್ಲಿ ಅಥವಾ ನಿಮ್ಮ ಆಸ್ತಿಯೊಳಗೆ ಯಾವುದಾದರೂ ನೀರಿನ ಯೋಜನೆ ಅಥವಾ ನೀರಿನ ಕೋರ್ಸ್ ಅನ್ನು ಗುರುತಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ನಿಮ್ಮ ಆಸ್ತಿಯ ಪಕ್ಕದಲ್ಲಿ ಅಥವಾ ನಿಮ್ಮ ಆಸ್ತಿಯು ನೀರಿನ ಯೋಜನೆಗಳಿಗೆ ಒಳಪಟ್ಟ ಜಾಗವಾಗಿದ್ದರೆ ತೀವ್ರವಾದ ತೊಂದರೆಗೆ ಒಳಗಾಗಬೇಕಾಗುವುದು. ಅಂತಹ ಯೋಜನೆ ಅಥವಾ ಕೋರ್ಸ್‍ಗಳ ಅಂಚಿನಿಂದ 25 ಮೀಟರ್ ದೂರದ ವಲಯವನ್ನು ಬಫರ್ ವಲಯ ಎಂದು ಬಿಡಲಾಗುವುದು. ಆಗ ನಿಮ್ಮ ಆಸ್ತಿಯು ಬಫರ್ ವಲಯದಲ್ಲಿ ಅಥವಾ ಅರ್ಧ ಭಾಗವು ಬಫರ್ ವಲಯಕ್ಕೆ ಒಳಗಾಗುವುದು.

ನೀವು ಖರೀದಿಸುವ ಭೂಮಿಯು ಸರ್ಕಾರಿ ಅಥವಾ ಖಾಸಗಿಯ ಜಮೀನೇ? ಎನ್ನುವುದನ್ನು ಮೊದಲು ತಿಳಿಯಬೇಕು. ಏಕೆಂದರೆ ಎರಡು ಸಹ ವಿಭಿನ್ನ ನಿಯಮಗಳನ್ನು ಮತ್ತು ತೊಡಕುಗಳನ್ನು ಒಳಗೊಂಡಿರುತ್ತವೆ.

ವರ್ತಕರು ಅಥವಾ ರಿಯಲ್ ಎಸ್ಟೇಟ್ ಏಜೆಂಟರ್‍ಗಳಿಂದ ಪ್ರಭಾವಿತರಾಗುವುದು ಸುಲಭ. ಆದರೆ ಅವು ಭವಿಷ್ಯದಲ್ಲಿ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಹಾಗಾಗಿ ಭವಿಷ್ಯದಲ್ಲಿ ಯಾವುದೇ ತೊಂದರೆ ಉಂಟುಮಾಡದಂತಹ ಆಸ್ತಿಯನ್ನು ಮಾತ್ರ ಖರೀದಿಸಿ. ಯಾವುದೇ ಭೂಮಿಯನ್ನು ಖರೀದಿಸುವ ಮುನ್ನ ನೀವು ಆ ಭೂಮಿಯ ದಾಖಲೆಗಳನ್ನು ಎರಡು ಬಾರಿ ಪರಿಶೀಲಿಸಿ.

ಕಂದಾಯ ಇಲಾಖೆಯ ವೆಬ್‍ಸೈಟ್‍ಗೆ ಭೇಟಿ ನೀಡಿ. ಪೋರ್ಟಲ್‍ನಲ್ಲಿ ಲಭ್ಯವಿರುವ ನಕ್ಷೆಗಳ ಸಹಾಯದಿಂದ ನಿಮ್ಮ ಆಸ್ತಿಯ ಸ್ಥಾನವನ್ನು ಪರಿಶೀಲಿಸಿ. ಇಲ್ಲವಾದರೆ ಇಲಾಖೆಗೆ ವೈಯಕ್ತಿಕವಾಗಿ ಭೇಟಿ ನೀಡಿ. ನಿಮ್ಮ ಅನುಮಾನಗಳನ್ನು ಹಾಗೂ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳಿ. ಹಾಗೊಮ್ಮೆ ನೀವು ಸಮಯದ ಕೊರತೆ ಅಥವಾ ಇನ್ಯಾವುದೇ ಸಮಸ್ಯೆಗೆ ಒಳಗಾಗಿದ್ದೀರಿ ಎಂದಾದರೆ, ದಿಶಾಂಕ್ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಿ. ಅದರಿಂದ ಸಾಕಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ