ಆ್ಯಪ್ನಗರ

Meena Sankranti 2023: ಮೀನ ಸಂಕ್ರಾಂತಿ 2023 ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಹೀಗಿದೆ..!

ಸೂರ್ಯನ ರಾಶಿ ಪರಿವರ್ತನೆಯನ್ನು ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಸೂರ್ಯನು ರಾಶಿ ಚಕ್ರದ 12 ರಾಶಿಗಳಲ್ಲಿ ಯಾವ ರಾಶಿಯನ್ನು ಪ್ರವೇಶಿಸುತ್ತಾನೋ ಅದು ಆ ರಾಶಿಯ ಸಂಕ್ರಾಂತಿಯಾಗಿರುತ್ತದೆ. ಈ ಬಾರಿ ಅಂದರೆ ಮಾರ್ಚ್ 15 ರಂದು ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ಮೀನ ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಸೂರ್ಯನು ಮಾರ್ಚ್ 15 ರಿಂದ 2023 ರ ಏಪ್ರಿಲ್‌ 14 ರವರೆಗೆ ಈ ರಾಶಿಯಲ್ಲೇ ಸಂಚರಿಸುತ್ತಾನೆ. ಮೀನ ಸಂಕ್ರಾಂತಿ 2023 ರ ಶುಭ ಮುಹೂರ್ತ ಯಾವುದು..? ಮೀನ ಸಂಕ್ರಾಂತಿ ಪೂಜೆ ವಿಧಾನ ಮತ್ತು ಮಹತ್ವದ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ..

Authored byಮನಿಷಾ ಆನಂದ | TNN & Agencies 14 Mar 2023, 2:43 pm

ಹೈಲೈಟ್ಸ್‌:

ಹೈಲೈಟ್ಸ್‌:
  • ಮೀನ ಸಂಕ್ರಾಂತಿ 2023
  • ಮೀನ ಸಂಕ್ರಾಂತಿ 2023 ಶುಭ ಮುಹೂರ್ತ
  • ಮೀನ ಸಂಕ್ರಾಂತಿ ಪೂಜೆ ವಿಧಾನ
  • ಮೀನ ಸಂಕ್ರಾಂತಿ ಮಹತ್ವ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Meena Sankranti 2023
ಮೀನ ಸಂಕ್ರಾಂತಿ 2023 - PC: Pixabay, Vijaya Karnataka
ಹಿಂದೂ ಧರ್ಮವೂ ಒಂದು ವರ್ಷದಲ್ಲಿ 12 ಸಂಕ್ರಾಂತಿಗಳಿವೆ ಎಂದು ಹೇಳುತ್ತದೆ. ಇವುಗಳಲ್ಲಿ ಮೀನ ಸಂಕ್ರಾಂತಿಯೂ ಇಂದು. ಸೂರ್ಯ ದೇವನು ತನ್ನ ರಾಶಿಯನ್ನು ಬದಲಾಯಿಸುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನು ಯಾವ ರಾಶಿಯನ್ನು ಸೇರುತ್ತಾನೋ ಅದು ಆ ರಾಶಿಯ ಸಂಕ್ರಾಂತಿಯಾಗಿರುತ್ತದೆ. 12 ಸಂಕ್ರಾಂತಿಗಳಲ್ಲಿ ಮೀನ ಸಂಕ್ರಾಂತಿಯೂ ಒಂದು. ಸೂರ್ಯನು ಮಾರ್ಚ್‌ 15 ರಂದು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ ಇದನ್ನು ಮೀನ ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳಲ್ಲಿ ಮೀನ ಸಂಕ್ರಾಂತಿಯನ್ನು ಸೂರ್ಯನ ಆರಾಧನೆಗೆ ಪ್ರಮುಖವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೀನ ಸಂಕ್ರಾಂತಿಯ ದಿನಾಂಕ, ಮಹತ್ವ ಹಾಗೂ ಈ ದಿನದಂದು ಕೈಗೊಳ್ಳಬೇಕಾದ ಕೆಲವು ವಿಶೇಷ ಕ್ರಮಗಳ ಬಗ್ಗೆ ಇಲ್ಲಿ ತಿಳಿಯೋಣ.
Baby Shower: ಸೀಮಂತ ಶಾಸ್ತ್ರವನ್ನೇಕೆ ಮಾಡಬೇಕು..? ಯಾವಾಗ ಮಾಡಬೇಕು ಗೊತ್ತೇ..?

ಮೀನ ರಾಶಿ


1. ಮೀನ ಸಂಕ್ರಾಂತಿ ಶುಭ ಮುಹೂರ್ತ:
2023 ರ ಮಾರ್ಚ್ 14 ಮತ್ತು 15 ರ ಮಧ್ಯರಾತ್ರಿ 12:16 ಕ್ಕೆ ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅದರ ನಂತರ, ಮಾರ್ಚ್‌ 15 ರಂದು ಬೆಳಿಗ್ಗೆ 6.33 ರಿಂದ 8.30 ರವರೆಗಿನ ಸಮಯವು ಪೂಜೆಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಗಂಗಾ ಅಥವಾ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಸೂರ್ಯನ ಆಶೀರ್ವಾದವನ್ನು ನಿಮಗೆ ನೀಡುತ್ತದೆ. ಭಗವಾನ್ ಸೂರ್ಯನನ್ನು ಗೌರವದ ಅಂಶವೆಂದು ಪರಿಗಣಿಸಲಾಗಿದೆ. ಈ ದಿನ ಆದಿತ್ಯ ಹೃದಯ ಸ್ರೋತವನ್ನು ಪಠಿಸುವುದರಿಂದ ಶತ್ರುಗಳು ನಾಶವಾಗುತ್ತಾರೆ. ಇದಲ್ಲದೆ, ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ.

Buddha Lesson: ಈ 3 ಕೆಲಸದಿಂದ ದುಃಖ ನಿಮ್ಮ ಬಳಿ ಸುಳಿಯೋದೇ ಇಲ್ಲಿ ಎನ್ನುತ್ತಾರೆ ಗೌತಮ ಬುದ್ಧ..!
2. ಮೀನ ಸಂಕ್ರಾಂತಿ ಮಹತ್ವ:
ಮೀನ ಸಂಕ್ರಾಂತಿಯು 16 ಘಟಿಗಳ ನಂತರ ಸಂಭವಿಸುತ್ತದೆ ಮತ್ತು ಈ ದಿನ ದಾನ ಮತ್ತಿತರ ಪುಣ್ಯ ಕಾರ್ಯಗಳನ್ನು ಮಾಡುವ ಜನರಿಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಬಡವರಿಗೆ, ನಿರ್ಗತಿಕರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದರಿಂದ ಸಂಪತ್ತು ಮತ್ತು ಸಮೃದ್ಧಿಯ ರೂಪದಲ್ಲಿ ಆಶೀರ್ವಾದವನ್ನು ತರುತ್ತದೆ ಎಂದು ನಂಬಲಾಗಿದೆ. ಮೀನ ಸಂಕ್ರಾಂತಿ ದಿನದಂದು ದೇವಾಲಯಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ ಮತ್ತು ಉತ್ಸಾಹದಿಂದ ಪೂಜೆಯನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ, ಹಿಂದೂಗಳು ಸೂರ್ಯನ ಸಂಕ್ರಮಣಕ್ಕಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಸೂರ್ಯ


3. ಮೀನ ಸಂಕ್ರಾಂತಿಯ ಆಚರಣೆಗಳು:
- ಮೀನ ಸಂಕ್ರಾಂತಿ ದಿನದಂದು ಭಕ್ತರು ಮುಂಜಾನೆಯೇ ಎದ್ದು, ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ.
- ಸ್ನಾನದ ನಂತರ ಸೂರ್ಯನನ್ನು ಪೂಜಿಸಲಾಗುತ್ತದೆ ಮತ್ತು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವ ಮೂಲಕ ಸೂರ್ಯನ ಆಶೀರ್ವಾದವನ್ನು ಪಡೆಯುತ್ತಾರೆ.
- ಅವರು ತಮ್ಮ ಆಲೋಚನೆಗಳನ್ನು ಶಾಂತಗೊಳಿಸಲು ಸೂರ್ಯ ಮಂತ್ರಗಳನ್ನು ಪಠಿಸುತ್ತಾರೆ.
- ಈ ದಿನ ಉಪವಾಸ ಮಾಡುವವರು ಈರುಳ್ಳಿ, ಬೆಳ್ಳುಳ್ಳಿ ಮತ್ತು ಮದ್ಯೆವನ್ನು ಸೇವಿಸಬಾರದು.
- ಈ ದಿನದಿಂದ ಹಗಲು ಹೆಚ್ಚಾಗಿರುತ್ತದೆ ಮತ್ತು ರಾತ್ರಿ ಕಡಿಮೆಯಾಗುತ್ತದೆ.

Garuda Purana: ಇಂತಹ ಬ್ರಾಹ್ಮಣರಿಂದ ಪೂಜೆಯನ್ನು ಮಾಡಿಸಲೇಬೇಡಿ ಎನ್ನುತ್ತೆ ಗರುಡ
4. ಮೀನ ಸಂಕ್ರಾಂತಿಯಂದು ಇವುಗಳನ್ನು ಮಾಡಬಾರದು:
ಮಲಮಾಸ ಅಥವಾ ಧನುರ್ಮಾಸವು ಮೀನ ಸಂಕ್ರಾಂತಿಯ ದಿನದಿಂದಲೇ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಿಂದ ಇಡೀ ತಿಂಗಳು ಶುಭ ಕಾರ್ಯಗಳು ನಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮದುವೆ, ಮುಂಡನ, ಗೃಹಪ್ರವೇಶ, ಹೊಸ ಉದ್ಯಮ ಆರಂಭಿಸುವುದು ಒಳ್ಳೆಯದಲ್ಲ. ಇದು ನಿಮ್ಮ ಜೀವನದಲ್ಲಿ ಸಂಕಷ್ಟಗಳನ್ನು, ತೊಂದರೆಗಳನ್ನು ಹೆಚ್ಚಿಸಬಹುದು.

ಸೂರ್ಯ ದೇವನು ಮಾರ್ಚ್‌ 15 ರಂದು ಕುಂಭ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನೇ ಮೀನ ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಈ ದಿನ ಸಂಕಷ್ಟಗಳಿಂದ ದೂರಾಗಲು, ಜೀವನದ ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ಜನರು ಸೂರ್ಯ ದೇವನನ್ನು ಪೂಜೆ ಮಾಡುತ್ತಾರೆ.
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ