ಆ್ಯಪ್ನಗರ

Raksha Bandhan 2022 Shubh Muhurat: ಈ ಮುಹೂರ್ತದಲ್ಲಿ ರಾಖಿ ಕಟ್ಟಲೇಬೇಡಿ..! ಇಲ್ಲಿದೆ ರಾಖಿ ಶುಭ ಮುಹೂರ್ತ..

ರಕ್ಷಾ ಬಂಧನ 2022 ಒಂದು ಹಬ್ಬ ಮಾತ್ರವಲ್ಲ, ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವನ್ನು ಬಲಪಡಿಸುವ ದಿನವಾಗಿದೆ. ಈ ದಿನದಂದು ಸಹೋದರಿಯರು ರಾಖಿ ಕಟ್ಟುತ್ತಾರೆ ಮತ್ತು ಅವರ ಯೋಗಕ್ಷೇಮ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಇದು ಭಾವನಾತ್ಮಕ ಸಂಬಂಧವನ್ನು ಸಹ ಬಲಪಡಿಸುತ್ತದೆ. ರಕ್ಷಾ ಬಂಧನ 2022 ರ ಶುಭ ಮುಹೂರ್ತ ಯಾವುದು..? ರಕ್ಷಾ ಬಂಧನದ ಮಹತ್ವವೇನು..? ಈ ಶುಭ ಮುಹೂರ್ತದಲ್ಲಿ ರಾಖಿ ಕಟ್ಟಿದರೆ ಶುಭ ಫಲ..!

Vijaya Karnataka Web 11 Aug 2022, 1:25 pm
ಶ್ರಾವಣ ಮಾಸದ ಹುಣ್ಣಿಮೆಯಂದು ಶ್ರವಣ ನಕ್ಷತ್ರದ ಸಮಯದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಈ ಶುಭ ದಿನವು ಆಗಸ್ಟ್‌ 11 ರಂದು ಗುರುವಾರ ಬಂದಿದೆ. ಆದರೆ ಅಗಸ್ಟ್ 11 ರಂದು ಇಡೀ ದಿನ ಭದ್ರಕಾಲ ಇರಲಿರುವುದರಿಂದ ಭದ್ರನ ಬಗ್ಗೆ ಹಲವರಿಗೆ ಅನುಮಾನವಿದೆ. ರಾಹುಕಾಲ ಮತ್ತು ಭದ್ರಕಾಲದಲ್ಲಿ ರಾಖಿ ಕಟ್ಟುವುದಿಲ್ಲ. ಹಾಗಾದರೆ, ಈ ದಿನ ರಾಖಿಯನ್ನು ಯಾವ ಮುಹೂರ್ತದಲ್ಲಿ ಕಟ್ಟುವುದು ಶ್ರೇಯಸ್ಕರವೆಂದು ತಿಳಿಯೋಣ ಬನ್ನಿ..
Vijaya Karnataka Web raksha bandhan 2022 on 11 august here are the auspicious time for tying rakhi and its importance
Raksha Bandhan 2022 Shubh Muhurat: ಈ ಮುಹೂರ್ತದಲ್ಲಿ ರಾಖಿ ಕಟ್ಟಲೇಬೇಡಿ..! ಇಲ್ಲಿದೆ ರಾಖಿ ಶುಭ ಮುಹೂರ್ತ..


​ಪೂರ್ಣಿಮಾ ತಿಥಿ

ಪೂರ್ಣಿಮಾ ತಿಥಿ ಆರಂಭ: 2022 ಆಗಸ್ಟ್ 11 ರಂದು ಗುರುವಾರ ಬೆಳಿಗ್ಗೆ 10:38 ರಿಂದ

ಪೂರ್ಣಿಮಾ ತಿಥಿ ಮುಕ್ತಾಯ: 2022 ಆಗಸ್ಟ್ 12 ರಂದು ಶುಕ್ರವಾರ ಬೆಳಿಗ್ಗೆ 7.05 ಕ್ಕೆ ರವರೆಗೆ.

ಹಿಂದೂ ಧರ್ಮ

ಶಿವನು ಅರ್ಧನಾರೀಶ್ವರನಾಗಲು ಇದೇ ಕಾರಣ..! ಶ್ರಾವಣ ಸೋಮವಾರ ಶಿವನಿಗೇಕೆ ಪೂಜೆ..?

​ರಕ್ಷಾ ಬಂಧನ ಶುಭ ಯೋಗ ಸಂಯೋಜನೆ

- ರವಿಯೋಗ: ರವಿಯೋಗವು ಬೆಳಿಗ್ಗೆ 05:30 ರಿಂದ 06:53 ರವರೆಗೆ ಇರುತ್ತದೆ.

- ಆಯುಷ್ಮಾನ್ ಯೋಗ: ಆಗಸ್ಟ್ 10 ರಂದು 07:35 ರಿಂದ ಆಗಸ್ಟ್ 11 ರವರೆಗೆ ಮಧ್ಯಾಹ್ನ 03:31 ರವರೆಗೆ.

- ಸೌಭಾಗ್ಯ ಯೋಗ: ಆಗಸ್ಟ್ 11 ರಂದು ಮಧ್ಯಾಹ್ನ 03:32 ರಿಂದ ಆಗಸ್ಟ್ 12 ರಂದು ಬೆಳಿಗ್ಗೆ 11:33 ರವರೆಗೆ.

- ಶೋಭನ ಯೋಗ: ಧನಿಷ್ಟ ನಕ್ಷತ್ರದ ಜೊತೆಗೆ ಶೋಭನ ಯೋಗವೂ ನಡೆಯುತ್ತದೆ.

ಪೂಜಾ ವಿಧಿಗಳು

ಎರಡನೇ ಶ್ರಾವಣ ಸೋಮವಾರ: ಸಂತೋಷ, ಸಮೃದ್ಧಿಗಾಗಿ ವಿಷ್ಣು ಮತ್ತು ಶಿವನನ್ನು ಹೀಗೆ ಪೂಜಿಸಿ..!

​ರಕ್ಷಾ ಬಂಧನ 2022 ಶುಭ ಮುಹೂರ್ತ

- ಅಭಿಜಿತ್ ಮುಹೂರ್ತ: 2022 ಆಗಸ್ಟ್ 11 ರಂದು ಗುರುವಾರ 11:37 ರಿಂದ ಮಧ್ಯಾಹ್ನ 12:29 ರವರೆಗೆ.

- ವಿಜಯ ಮುಹೂರ್ತ: 2022 ಆಗಸ್ಟ್ 11 ರಂದು ಗುರುವಾರ ಮಧ್ಯಾಹ್ನ 02:14 ರಿಂದ 03:07 ರವರೆಗೆ.

- ಸಂಧ್ಯಾ ಮುಹೂರ್ತ: 2022 ಆಗಸ್ಟ್ 11 ರಂದು ಗುರುವಾರ ಸಂಜೆ 06:23 ರಿಂದ 06:47 ರವರೆಗೆ.

- ಸಂಜೆ ಸಂಧ್ಯಾ ಮುಹೂರ್ತ: 2022 ಆಗಸ್ಟ್ 11 ರಂದು ಗುರುವಾರ ಸಂಜೆ 06:36 ರಿಂದ 07:42 ರವರೆಗೆ.

- ಅಮೃತ ಕಾಲ ಮುಹೂರ್ತ: 2022 ಆಗಸ್ಟ್ 11 ರಂದು ಗುರುವಾರ ಸಂಜೆ 06:55 ರಿಂದ 08:20 ರವರೆಗೆ.

ಪೂಜಾ ವಿಧಿಗಳು

ಪುತ್ರದ ಏಕಾದಶಿ 2022: ಸಂತಾನ ಭಾಗ್ಯಕ್ಕಾಗಿ ನೀವು ಈ ಕೆಲಸಗಳನ್ನು ಮಾಡಲೇಬೇಕು..!

​ಭದ್ರ ಸಮಯ

- ಬೆಳಿಗ್ಗೆ 10:38 ರಿಂದ ರಾತ್ರಿ 08:50 ರವರೆಗೆ. ಭದ್ರಾ ಪೂಂಚ ಸಮಯ ಸಂಜೆ 05.17 ರಿಂದ 06.18 ರವರೆಗೆ.

- ಭದ್ರಾ ಮುಖ - ಸಂಜೆ 06.18 ರಿಂದ 8.00 ರವರೆಗೆ. ರಾತ್ರಿ 08:50 ಕ್ಕೆ ಭದ್ರ ಕಾಲ ಅಂತ್ಯ.

- 'ಆಗಸ್ಟ್ 11 ರಂದು, ಪ್ರದೋಷ ಕಾಲದ ಸಮಯದಲ್ಲಿ, ಭದ್ರ ಪೂಂಚ ಸಮಯದಲ್ಲಿ, ನೀವು ಸಂಜೆ 5:18 ರಿಂದ 6.18 ರವರೆಗೆ ರಕ್ಷಣಾ ದಾರವನ್ನು ಕಟ್ಟಬಹುದು. ಇದಲ್ಲದೆ, ಭದ್ರ ಮುಗಿದ ನಂತರ 08:52:15 ರಿಂದ 09:13:18 ರವರೆಗೆ ರಾಖಿ ಕಟ್ಟಬಹುದು'.

ಹಿಂದೂ ಧರ್ಮ

ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತೇ..?

- ಆಗಸ್ಟ್ 11 ರಂದು, ಭದ್ರ ದಿನವಿಡೀ ಪ್ರಚಲಿತದಲ್ಲಿದೆ, ಆದರೆ ಜ್ಯೋತಿಷಿಗಳ ಪ್ರಕಾರ, ಭದ್ರನು ಮಕರ ರಾಶಿಯಲ್ಲಿರುವುದರಿಂದ, ಅದರ ವಾಸಸ್ಥಾನವು ಪಾತಾಳದಲ್ಲಿದೆ ಎಂದು ನಂಬಲಾಗಿದೆ. ಹಾಗಾಗಿ ಭದ್ರಾ ಪ್ರಭಾವ ಈ ದಿನ ಇರುವುದಿಲ್ಲ. ಚಂದ್ರನು ಮೇಷ, ವೃಷಭ, ಮಿಥುನ, ಕನ್ಯಾ, ತುಲಾ, ವೃಶ್ಚಿಕ, ಧನು ಅಥವಾ ಮಕರ ರಾಶಿಯಲ್ಲಿದ್ದರೆ, ಅದು ಶುಭ ಫಲಿತಾಂಶಗಳನ್ನು ನೀಡಲಿದೆ. ಆದ್ದರಿಂದ ರಕ್ಷಾ ಬಂಧನದ ಹಬ್ಬವನ್ನು ಆಗಸ್ಟ್‌ 11 ರಂದು ಮಾತ್ರ ಆಚರಿಸಬೇಕೆಂದು ಹೇಳಲಾಗುತ್ತದೆ.

ಪೂಜಾ ವಿಧಿಗಳು

ಶ್ರಾವಣ ಸೋಮವಾರ 2022: ಮಣ್ಣಿನ ಶಿವಲಿಂಗವನ್ನು ಹೀಗೆ ಪೂಜಿಸಿದರೆ ಸಂಪತ್ತಿನ

​ರಾಖಿಯ ಮೂರು ಗಂಟುಗಳ ಮಹತ್ವ

ರಾಖಿ ಕಟ್ಟುವಾಗ ಮೂರು ಗಂಟುಗಳನ್ನು ಕಟ್ಟುವುದು ಬಹಳ ಮುಖ್ಯ. ರಾಖಿಯ ಮೊದಲ ಗಂಟು ಸಹೋದರನ ದೀರ್ಘಾಯುಷ್ಯಕ್ಕಾಗಿ, ಎರಡನೆಯ ಗಂಟು ಅವನ ಸ್ವಂತ ದೀರ್ಘಾಯುಷ್ಯಕ್ಕಾಗಿ ಎಂದು ನಂಬಲಾಗಿದೆ. ಮತ್ತೊಂದೆಡೆ, ಮೂರನೇಯ ಗಂಟು ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧದ ದೀರ್ಘಾಯುಷ್ಯಕ್ಕಾಗಿ ಎನ್ನಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮೂರು ಗಂಟುಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ಮೂರು ದೇವರುಗಳಿಗೆ ಸಂಬಂಧಿಸಿವೆ.

ಪೂಜಾ ವಿಧಿಗಳು

ಶ್ರಾವಣ ಪುತ್ರದ ಏಕಾದಶಿ 2022: ಈ ದಿನ ನಾವು ಏನು ಮಾಡಬೇಕು..? ಏನು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ