ಆ್ಯಪ್ನಗರ

Garuda Purana: ಇಂತವರೇ ಬಡವರು, ಅತೃಪ್ತರು, ರೋಗಿಗಳು ಎನ್ನುತ್ತೆ ಗರುಡ ಪುರಾಣ..!

Garuda Purana On Death: ಗರುಡ ಪುರಾಣದಲ್ಲಿ ಬಡವರ, ಅತೃಪ್ತ ವ್ಯಕ್ತಿಯ ಮತ್ತು ರೋಗಿಯ ಗುಣ ಲಕ್ಷಣಗಳ ಬಗ್ಗೆ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಬಡವರ ಮತ್ತು ಅತೃಪ್ತ ವ್ಯಕ್ತಿಯ ಗುಣಲಕ್ಷಣಗಳಾವುವು..?

Authored byಮನಿಷಾ ಆನಂದ | Vijaya Karnataka Web 9 Sep 2023, 7:08 am
ಗರುಡ ಪುರಾಣವು ನಮಗೆ ಯಾವ ಕೆಲಸ ಮಾಡುವುದು ಸರಿ..? ಯಾವ ಕೆಲಸ ಮಾಡುವುದು ತಪ್ಪು..? ಎಂಬುದರ ಕುರಿತು ಜ್ಞಾನವನ್ನು ನೀಡುತ್ತದೆ. ಅಷ್ಟು ಮಾತ್ರವಲ್ಲ, ಓರ್ವ ವ್ಯಕ್ತಿಯ ಯಶಸ್ಸಿಗೆ ಸಹಕಾರಿಯಾಗುವ ವಿಚಾರಗಳ ಕುರಿತೂ ಮಾಹಿತಿಯನ್ನು ನೀಡುತ್ತದೆ. ಅದೇ ರೀತಿ ಗರುಡ ಪುರಾಣದ ಪುಟ 105 ರಲ್ಲಿ ಬಡವನ ಗುಣಲಕ್ಷಣಗಳ ಬಗ್ಗೆ ಮತ್ತು ಅತೃಪ್ತ ವ್ಯಕ್ತಿಯ ಗುಣಗಳ ಬಗ್ಗೆ ಹೇಳಲಾಗಿದೆ. ಅವುಗಳು ಯಾವುವು ಎಂಬುದನ್ನು ನಾವಿಲ್ಲಿ ನೋಡೋಣ.
Vijaya Karnataka Web according to garuda purana poor people and sad people always have these qualities
Garuda Purana: ಇಂತವರೇ ಬಡವರು, ಅತೃಪ್ತರು, ರೋಗಿಗಳು ಎನ್ನುತ್ತೆ ಗರುಡ ಪುರಾಣ..!


​ಇವರು ಶ್ರೇಷ್ಠರು​

ಗರುಡ ಪುರಾಣದಲ್ಲಿ ಭಗವಾನ್‌ ವಿಷ್ಣು ಶ್ರೇಷ್ಠ ವ್ಯಕ್ತಿಗಳು ಹೇಗಿರುತ್ತಾರ ಎನ್ನುವುದನ್ನು ವಿವರಿಸಿದ್ದಾನೆ. ಗರುಡ ಪುರಾಣದ ಪ್ರಕಾರ, ಯಾವ ವ್ಯಕ್ತಿಯ ಕೈ - ಕಾಲುಗಳು ಬೆವರಿನಿಂದ ಮುಕ್ತವಾಗಿರುತ್ತದೆಯೋ ಆ ವ್ಯಕ್ತಿಯನ್ನು ಶ್ರೇಷ್ಠ ವ್ಯಕ್ತಿಯೆಂದು ವಿಷ್ಣು ಗರುಡ ಪುರಾಣದಲ್ಲಿ ಹೇಳಿದ್ದಾನೆ. ಇಂತಹ ವ್ಯಕ್ತಿಗಳ ಸಹವಾಸವನ್ನು ನೀವು ಯಾವುದೇ ಅನುಮಾನವಿಲ್ಲದೆ ಮಾಡಬಹುದು.


PC:Pexel

Aja Ekadashi 2023: ಜಯ ಏಕಾದಶಿ 2023 ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ..!

​ಇವರು ನೃಪಶ್ರೇಷ್ಠರು​

ಯಾವ ವ್ಯಕ್ತಿಯ ಕೈ-ಕಾಲುಗಳು ಹೆಚ್ಚು ಮೃದುವಾಗಿರುತ್ತದೆಯೋ, ಕಮಲದ ಒಳಭಾಗದಂತೆ ರಕ್ತವೂ, ಬೆರಳುಗಳು ಬಿಗಿಯಾಗಿರುತ್ತದೆಯೋ, ಉಗುರುಗಳು ತಾಮ್ರದ ಬಣ್ಣದಲ್ಲಿರುತ್ತದೆಯೋ ಇಂತಹ ವ್ಯಕ್ತಿಯನ್ನು ನೃಪಶ್ರೇಷ್ಠರು ಎಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಯಾರಿಗೂ ತೊಂದರೆಯನ್ನು ನೀಡಲು ಮುಂದಾಗುವುದಿಲ್ಲ.
PC: Pexel

​ಇವರು ಅತ್ಯುತ್ತಮರು​

ಗರುಡ ಪುರಾಣದಲ್ಲಿ ವಿಷ್ಣು ಅತ್ಯುತ್ತಮರು ಹೇಗಿರುತ್ತಾರೆ ಎಂಬುದರ ಬಗ್ಗೆಯೂ ಹೇಳಿದ್ದಾನೆ. ಯಾವ ವ್ಯಕ್ತಿಯ ಪಾದಗಳು ಸುಂದರವಾಗಿರುತ್ತದೆಯೋ, ಪಾದಗಳು ರಕ್ತನಾಳಗಳ ಉಬ್ಬುವಿಕೆಯಿಂದ ಮುಕ್ತವಾಗಿರುತ್ತದೆಯೋ, ಮತ್ತು ಹೆಬ್ಬೆರೆಳುಗಳು ಮೇಲ್ಮುಖವಾಗಿರುತ್ತದೆಯೋ ಅಂತಹ ವ್ಯಕ್ತಿಗಳನ್ನು ಅತ್ಯುತ್ತಮರೆಂದು ಪರಿಗಣಿಸಲಾಗುತ್ತದೆ.

PC: Pexel

Garuda Purana: ಯಮರಾಜನು ಈ ಸೂಚನೆಗಳನ್ನು ನೀಡಿದರೆ ಸಾಯೋದು ಫಿಕ್ಸ್‌..!

​ಅತೃಪ್ತಿ ಮತ್ತು ಬಡವರು​

ಒರಟಾಗಿರುವ ಅಂದರೆ ಮೃದುವಾಗಿರದ ದೇಹ ಕಾಯವನ್ನು ಹಾಗೂ ಮನಸ್ಸನ್ನು, ಮಾತನ್ನು, ನಡವಳಿಕೆಯನ್ನು ಹೊಂದಿರುವ ವ್ಯಕ್ತಿಯನ್ನು ಅತೃಪ್ತಕ್ಕೆ ಒಳಗಾದವನೆಂದು ಪರಿಗಣಿಸಲಾಗುತ್ತದೆ. ಇವರ ದೇಹವು ಸ್ವಲ್ಪ ಹಳದಿ ಬಣ್ಣದಲ್ಲಿರುತ್ತದೆ. ಇಂತಹ ಮಹಿಳೆ ಅಥವಾ ಪುರುಷನನ್ನು ಅತೃಪ್ತಿಯ ಸ್ವಭಾವ ಉಳ್ಳವರೆಂದು ಪರಿಗಣಿಸಲಾಗುತ್ತದೆ. ಇಂತವರಿಂದ ನೀವು ಸಾಧ್ಯವಾದಷ್ಟು ದೂರ ಉಳಿದುಕೊಳ್ಳುವುದು ಉತ್ತಮ.

PC: Pexel

​ಇಂತವರು ಬಡವರಾಗಿರುತ್ತಾರೆ​

ಬಿಳಿ ಬಣ್ಣದ ಉಗುರುಗಳನ್ನು ಹೊಂದಿರುವವರು, ಉಬ್ಬಿದ ರಕ್ತನಾಳಗಳನ್ನು ಹೊಂದಿರುವವರು, ಮೊನಚಾದ ಪಾದಗಳನ್ನು ಹೊಂದಿರುವವರು, ಅಪರೂಪದ ಆಕಾರದ ಬೆರಳುಗಳನ್ನು ಹೊಂದಿರುವ ಜನರು ಬಡವರಾಗಿರುತ್ತಾರೆ. ಇಂತವರು ಗುಣದಲ್ಲೂ ಅತ್ಯಂತ ಬಡವರಾಗಿರುತ್ತಾರೆ. ಇಂತಹ ಗುಣಲಕ್ಷಣಗಳನ್ನು ಹೊಂದಿರುವ ಸ್ತ್ರೀ ಮತ್ತು ಪುರುಷರು ನಿಮ್ಮ ಸುತ್ತ ಮುತ್ತಲೂ ಇರಬಹುದು.

PC: Pexel

​ಇಂತವರು ರೋಗಿಗಳು​

ತುಂಬಾ ತೆಳುವಾದ ಅಂದರೆ ಕ್ಷೀಣವಾದ ಕೀಲುಗಳನ್ನು ಹೊಂದಿರುವ, ದೇಹದಲ್ಲಿ ಒಳ್ಳೆಯ ಮಾಂಸವನ್ನು ಹೊಂದಿರದ ವ್ಯಕ್ತಿಯನ್ನು ಗರುಡ ಪುರಾಣದಲ್ಲಿ ರೋಗಿಗಳೆಂದು ಹೇಳಲಾಗಿದೆ. ಇಂತವರು ಯಾವಾಗಲೂ ಯಾವುದೋ ಒಂದು ಚಿಂತೆಯನ್ನು ತಲೆಯಲ್ಲಿ ತುಂಬಿಕೊಂಡಿರುತ್ತಾರೆ. ಇಂತವರು ಎಷ್ಟೇ ದುಡಿದರೂ ಎಲ್ಲಾ ಹಣವನ್ನು ಆರೋಗ್ಯದ ಸಮಸ್ಯೆಗಳ ನಿವಾರಣೆಗೆ ಹಾಕುತ್ತಾರೆ.

PC: Pexel

Garuda Purana: ಮುಂಜಾನೆ ಈ 4 ಕೆಲಸ ಮಾಡಿದರೆ ಅದೃಷ್ಟವೇ ನಿಮಗೆ

ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ