ಆ್ಯಪ್ನಗರ

ಈ ತಪ್ಪುಗಳನ್ನು ಮಾಡಿದರೆ ಪಾಪಿಗಳಾಗೋದು ಗ್ಯಾರೆಂಟಿ ಎನ್ನುತ್ತೆ ಗರುಡ ಪುರಾಣ..!

ಉತ್ತಮ ಜೀವನಕ್ಕಾಗಿ ನಾವು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ನಾವು ಯಾವ ಕೆಲಸ ಮಾಡಬೇಕು..? ಯಾವ ಕೆಲಸ ಮಾಡಬಾರದು..?

Vijaya Karnataka Web 22 Sep 2021, 9:23 am
ಜೀವನದಲ್ಲಿನ ಸಮಸ್ಯೆಗಳನ್ನು ತಪ್ಪಿಸಲು, ಗರುಡ ಪುರಾಣದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಜೀವನವನ್ನು ಉತ್ತಮ ರೀತಿಯಲ್ಲಿ ಬದುಕಲು ಗರುಡ ಪುರಾಣ ಮಾರ್ಗದರ್ಶನ ನೀಡುತ್ತದೆ. ನಾವು ಜೀವನದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಗರುಡ ಪುರಾಣದಲ್ಲಿ ಚೆನ್ನಾಗಿ ಹೇಳಲಾಗಿದೆ. ಗರುಡ ಪುರಾಣದ ನೀತಿಯ ಪ್ರಕಾರ ಜೀವನದಲ್ಲಿ ಮಾಡಬಾರದ ಕೆಲವು ಕೆಲಸಗಳಿವೆ ಎಂದು ಹೇಳಲಾಗಿದೆ. ನಾವು ಸಮಯಕ್ಕೆ ಸರಿಯಾಗಿ ಅವುಗಳಿಂದ ಅಂತರ ಕಾಯ್ದುಕೊಳ್ಳದಿದ್ದರೆ, ಜೀವನದಲ್ಲಿ ತೊಂದರೆ ಉಂಟಾಗಬಹುದು. ಅದಕ್ಕಾಗಿಯೇ ನಾವು ಬಿಕ್ಕಟ್ಟು ಬರುವ ಮೊದಲೇ ಅವುಗಳಿಂದ ದೂರವಿರಬೇಕು. ನಮ್ಮನ್ನು ತೊಂದರೆಗೆ ದೂಡುವ ಅಂತಹ ಕೆಲಸಗಳಾವುವು..?
Vijaya Karnataka Web according to garuda purana we should never do these mistakes
ಈ ತಪ್ಪುಗಳನ್ನು ಮಾಡಿದರೆ ಪಾಪಿಗಳಾಗೋದು ಗ್ಯಾರೆಂಟಿ ಎನ್ನುತ್ತೆ ಗರುಡ ಪುರಾಣ..!


ಸ್ಮಶಾನದಲ್ಲಿ ದೀರ್ಘಕಾಲ ಉಳಿಯಬೇಡಿ

ಗರುಡ ಪುರಾಣದ ಪ್ರಕಾರ, ಸ್ಮಶಾನದ ನೆಲದಲ್ಲಿ ದೀರ್ಘಕಾಲ ಉಳಿಯಬಾರದು ಎಂದು ಹೇಳಲಾಗಿದೆ. ನೀವು ಯಾರೊಬ್ಬರ ಶವ ಸಂಸ್ಕಾರಕ್ಕೆ ಹೋದರೆ, ನಂತರ ಬೇಗನೆ ಅಲ್ಲಿಂದ ಹೊರಬರಲು ಪ್ರಯತ್ನಿಸಿ. ಇದಕ್ಕೆ ಕಾರಣವೆಂದರೆ, ಸಾವಿನ ನಂತರ, ಮೃತ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾದ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಸೇರಿಕೊಳ್ಳಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆ ಬ್ಯಾಕ್ಟೀರಿಯಾಗಳು ನಿಮ್ಮ ದೇಹಕ್ಕೂ ಹೋಗಬಹುದು. ಸ್ಮಶಾನದಲ್ಲಿ ಒಂದಲ್ಲ ಒಂದು ಶವಗಳ ಅಂತ್ಯಕ್ರಿಯೆಯನ್ನು ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಆ ಸ್ಥಳದಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಾಗಿರುತ್ತದೆ.

ಬುಧವಾರ ಗಣೇಶನನ್ನು ಪೂಜಿಸುವುದರ ಪ್ರಯೋಜನವೇನು..? ಕಡ್ಡಾಯವಾಗಿ ಪೂಜಿಸಿ..!

​ಮೊಸರನ್ನು ರಾತ್ರಿ ತಡವಾಗಿ ತಿನ್ನಬೇಡಿ

ಮೊಸರನ್ನು ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅದನ್ನು ತಿನ್ನಲು ಸರಿಯಾದ ಸಮಯವಿದೆ. ನೀವು ರಾತ್ರಿ ವೇಳೆ ಮೊಸರನ್ನು ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗಬಹುದು ಎಂದು ಹೇಳಲಾಗುತ್ತದೆ. ಮೊಸರು ಪ್ರಕೃತಿಯಲ್ಲಿ ತಣ್ಣಗಿರುತ್ತದೆ ಎಂದು ಹೇಳಲಾಗುತ್ತದೆ, ಮತ್ತು ಹವಾಮಾನವು ರಾತ್ರಿಯಲ್ಲಿ ತಂಪಾಗಿರುತ್ತದೆ. ಮೊಸರನ್ನು ರಾತ್ರಿಯಲ್ಲಿ ಸೇವಿಸಿದರೆ, ವ್ಯಕ್ತಿಯು ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗಬಹುದು.

ಮಕ್ಕಳಿಲ್ಲದವರ ಶ್ರಾದ್ಧವನ್ನು ಯಾರು ಮಾಡಬೇಕು..? ಶ್ರಾದ್ಧದ ಪ್ರಯೋಜನ ಹೀಗಿದೆ..!

​ಸೂರ್ಯ ಉದಯಿಸುವ ಮುನ್ನ ಎಚ್ಚರಗೊಳ್ಳಬೇಕು

ಸೂರ್ಯ ಉದಯಿಸುವ ಮುನ್ನ ಏಳುವುದು ಅಗತ್ಯ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದನ್ನು ಮಾಡುವುದರಿಂದ ನೀವು ತಾಜಾ ಗಾಳಿಯನ್ನು ಪಡೆಯುತ್ತೀರಿ, ಅದು ನಿಮ್ಮ ಶ್ವಾಸಕೋಶವನ್ನು ಫಿಟ್ ಆಗಿರಿಸುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಫಿಟ್ನೆಸ್ ಮೇಲೆ ಕೂಡ ಪರಿಣಾಮ ಬೀರುತ್ತದೆ. ಹಾಗೂ ಮುಂಜಾನೆ ಬೇಗ ಏಳುವವರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವು ಇರುತ್ತದೆ.

ಹಿಂದೂ ಧರ್ಮಪಿತೃ ಪಕ್ಷದ ಈ ದಿನ ಶಾಪಿಂಗ್‌ ಮಾಡಿದರೆ, ಹೊಸ ಕೆಲಸ ಆರಂಭಿಸಿದರೆ ಶುಭ..!

​ಹಿಂದಿನ ದಿನದ ಆಹಾರವನ್ನು ತೆಗೆದುಕೊಳ್ಳಬೇಡಿ

ಹಳೆಯ ಆಹಾರವು ಅನೇಕ ವಿಧದ ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹಲವು ಬಾರಿ ಅಡುಗೆ ಮಾಡಿದ ನಂತರವೂ, ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುವುದಿಲ್ಲ. ಅದಕ್ಕಾಗಿಯೇ ಗರುಡ ಪುರಾಣದಲ್ಲಿ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಹಳೆಯ ಆಹಾರ ಸೇವಿಸುವುದನ್ನು ಮರೆತು ಬಿಡಬೇಕು ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ನೀವು ರೋಗಗಳಿಗೆ ಬಲಿಯಾಗಬಹುದು.

ಹಿಂದೂ ಧರ್ಮಪಿತೃ ಪಕ್ಷದಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ ಐಶ್ವರ್ಯ ಒಲಿಯುವುದು..! ಆ ವಸ್ತುಗಳಾವುವು..?

​ಇಂತವರ ಮನೆಯಲ್ಲಿ ಆಹಾರ ಸೇವಿಸಬೇಡಿ

ಅಪರಾಧಿಗಳ ಮನೆಯಲ್ಲಿ ಊಟವನ್ನು ಮಾಡಬಾರದು. ಅಂಥವರ ಮನೆಯಲ್ಲಿ ಆಹಾರ ಸೇವನೆಯನ್ನು ಮಾಡುವುದರಿಂದ ಅವರ ಪಾಪ ನಮಗೆ ಸುತ್ತಿಕೊಳ್ಳುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ. ಹಾಗೂ ಜಿಪುಣರ ಮನೆಯಲ್ಲಿ, ಕೋಪಿಷ್ಟರ ಮನೆಯಲ್ಲಿ, ದುರಾಸೆಯುಳ್ಳ ವ್ಯಕ್ತಿಗಳ ಮನೆಯಲ್ಲೂ ಕೂಡ ಆಹಾರವನ್ನು ಸೇವಿಸಬಾರದು.

ಪೂಜಾ ವಿಧಿಗಳುಪಿತೃ ದೋಷ ಇದೆಯೇ ಎಂದು ತಿಳಿಯುವುದು ಹೇಗೆ..? ಪಿತೃ ದೋಷದ ಸಂಕೇತಗಳಿವು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ