ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹಣ ಪ್ರಮುಖ ಪಾತ್ರ ವಹಿಸುತ್ತದೆ. ಹಣವಿಲ್ಲದ ವ್ಯಕ್ತಿಯನ್ನು ಈ ಸಮಾಜ ಹೀನಾಯವಾಗಿ ಕಾಣುವುದು ಸಾಮಾನ್ಯ. ಚಾಣಕ್ಯರ ಪ್ರಕಾರ, ನಾವು ಹಣವನ್ನು ಸಂಪಾದಿಸುವುದು ಹೇಗೆ..? ಹಣವನ್ನು ಸಂಪಾದಿಸಲು ಈ 5 ಕೆಲಸವನ್ನು ಮಾಡಿ ಎನ್ನುತ್ತಾರೆ ಚಾಣಕ್ಯ..!
ಹಣ ಯಾರಿಗೆ ತಾನೆ ಬೇಡವಲ್ಲವೇ..? ಪ್ರತಿಯೊಬ್ಬರೂ ಹಣವನ್ನು ಪಡೆಯಲು ಬಯಸುತ್ತಾರೆ. ಮತ್ತು ಹಣಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಶ್ರಮಿಸುತ್ತಿರುತ್ತಾನೆ. ಆಚಾರ್ಯ ಚಾಣಕ್ಯರ ನೀತಿ ಇಂದಿಗೂ ಜನಪ್ರಿಯವಾಗಿದೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಆಚಾರ್ಯ ಚಾಣಕ್ಯರು ಸಂಪತ್ತಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ನಿಮಗೆ ಹಣ ಬೇಕಾದರೆ ಆಚಾರ್ಯ ಚಾಣಕ್ಯರ 5 ವಿಷಯಗಳನ್ನು ಎಂದಿಗೂ ಮರೆಯಬೇಡಿ.
Photo Credit: Unsplash
ಧರ್ಮದ ಮಾರ್ಗದಲ್ಲಿ ಹಣ ಸಂಪಾದಿಸಿ
ನೀವು ಹಣವನ್ನು ಪಡೆಯಲು ಅಥವಾ ಹೊಂದಲು ಬಯಸಿದರೆ, ನಿಮ್ಮ ಕ್ರಿಯೆಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬೇಕು. ತನ್ನ ಗುರಿಯನ್ನು ಹೊಂದಿಸಲು ಸಾಧ್ಯವಾಗದ ವ್ಯಕ್ತಿ ಎಂದಿಗೂ ವಿಜಯಶಾಲಿಯಾಗಲು ಅಥವಾ ಶ್ರೀಮಂತನಾಗಲು ಸಾಧ್ಯವಿಲ್ಲ. ಹಣವನ್ನು ಸರಿಯಾದ ರೀತಿಯಲ್ಲಿ ಸಂಪಾದಿಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಅಧರ್ಮದಲ್ಲಿ ಸಂಪಾದಿಸಿದ ಹಣ ಇಂದಲ್ಲ ನಾಳೆ ನಮ್ಮಿಂದ ದೂರಾಗೋದು ಖಚಿತ.
PC: Pexel
ದಾನ ಮಾಡಿ
ಚಾಣಕ್ಯನ ಪ್ರಕಾರ ದೇವಾಲಯದಲ್ಲಿ ಕಾಲಕಾಲಕ್ಕೆ ದಕ್ಷಿಣೆ ನೀಡುವುದರಿಂದ ದೇವರ ಅನುಗ್ರಹವಿದ್ದು ಸಂಪತ್ತು ಮತ್ತಷ್ಟು ಹೆಚ್ಚುತ್ತದೆ. ಬಡತನ ಮನೆಗೆ ಬರುವುದಿಲ್ಲ. ಅತಿಯಾದ ದಾನವು ಹಾನಿಯನ್ನುಂಟುಮಾಡುತ್ತದೆ. ಯಾವಾಗಲೂ ನಿಮ್ಮ ಮಿತಿಯಲ್ಲಿ ದಾನ ಮಾಡಿ. ಇತಿ ಮಿತಿಯಲ್ಲಿ ದಾನ - ಧರ್ಮ ಕಾರ್ಯವನ್ನು ಮಾಡುವುದರಿಂದ ಓರ್ವ ವ್ಯಕ್ತಿಯಲ್ಲಿನ ಹಣವು ದುಪ್ಪಟ್ಟಾಗಲು ಪ್ರಾರಂಭವಾಗುತ್ತದೆ. PC: Pixabay
ಇಂತವರೊಂದಿಗಿರಿ
ನಿಮಗೆ ಹಣ ಬೇಕಾದರೆ, ಸಮೃದ್ಧ ವ್ಯಾಪಾರಿಗಳು, ವಿದ್ಯಾವಂತ ಬ್ರಾಹ್ಮಣರು, ಸೈನಿಕರು, ನದಿಗಳು ಮತ್ತು ವೈದ್ಯರು ಮತ್ತು ಎಲ್ಲಾ ಉದ್ಯೋಗದ ಮಾರ್ಗಗಳು ಇರುವಲ್ಲಿಯೇ ಇರಿ. ಅಥವಾ ಇಂತವರ ಸ್ನೇಹವನ್ನು ಮಾಡಬೇಕು ಎಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ. ವಿದ್ಯಾವಂತ, ಸದ್ಗುಣಶೀಲ ವ್ಯಕ್ತಿಗಳು ಇರುವಲ್ಲಿ ನಾವು ವಾಸಿಸುವುದರಿಂದ ನಮ್ಮ ಜೀವನವು ಅವರಂತೆ ಸಮೃದ್ಧವಾಗಿರುತ್ತದೆ.
PC: Pexel
ಭವಿಷ್ಯದ ಬಗ್ಗೆ ಗಮನವಿರಲಿ
ಯಶಸ್ವಿ ಮತ್ತು ಶ್ರೀಮಂತ ಜನರು ಉಳಿತಾಯದ ಬಗ್ಗೆಯೂ ಗಮನ ಹರಿಸುತ್ತಾರೆ. ಕೆಟ್ಟ ದಿನಗಳಿಗಾಗಿ ಹಣವನ್ನು ಉಳಿಸಬೇಕು, ಏಕೆಂದರೆ ಬಡತನದ ಸಮಯದಲ್ಲಿ ಎಲ್ಲರೂ ನಿಮ್ಮನ್ನು ತೊರೆದಾಗ ಮಾತ್ರ ಈ ಉಳಿತಾಯವು ಉಪಯುಕ್ತವಾಗಿರುತ್ತದೆ. ಹಾಗಾಗಿ ಉಳಿತಾಯ ಮಾಡುವತ್ತ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸಬೇಕೆಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ.
PC: Pexel
ಸ್ವಾಭಿಮಾನಿಗಳಾಗಿರಿ
ಸ್ವಾಭಿಮಾನವೇ ವ್ಯಕ್ತಿಯ ಬಂಡವಾಳ ಎಂದು ಹೇಳಲಾಗುತ್ತದೆ, ಅದನ್ನು ಎಂದಿಗೂ ಖರೀದಿಸಲಾಗುವುದಿಲ್ಲ. ಒಬ್ಬ ವ್ಯಕ್ತಿ ಹಣ ಸಂಪಾದಿಸುತ್ತಾನೆ ಆದರೆ, ಸ್ವಾಭಿಮಾನ ಪಡೆಯುವುದು ತುಂಬಾ ಕಷ್ಟ. ಕಳೆದುಹೋದ ಹಣವನ್ನು ಮರಳಿ ಪಡೆಯಬಹುದು ಎಂದು ಹೇಳಲಾಗುತ್ತದೆ, ಆದರೆ ಹಣ ಗಳಿಸುವುದಕ್ಕಿಂತ ಸ್ವಾಭಿಮಾನವನ್ನು ಗಳಿಸುವುದು ತುಂಬಾ ಕಷ್ಟ. ಸ್ವಾಭಿಮಾನ ತುಂಬಿದ ವ್ಯಕ್ತಿ ಹಣದ ಅಮಲಿನಲ್ಲಿದ್ದವನಿಗಿಂತ ಶ್ರೀಮಂತ ಎನ್ನುತ್ತಾನೆ ಚಾಣಕ್ಯ.
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.