ಆಚಾರ್ಯ ಚಾಣಕ್ಯರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲವಲ್ಲವೇ..? ಚಾಣಕ್ಯರು ತಮ್ಮ ರಾಜತಾಂತ್ರಿಕತೆಯಿಂದಾಗಿ ದೇಶದಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುವುದಕ್ಕಾಗಿ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಬಯಸುತ್ತಾರೆ. ಚಾಣಕ್ಯರ ನೀತಿಗಳನ್ನು ತಮ್ಮಲ್ಲಿ ಬೆಳೆಸಿಕೊಂಡು ಗುರಿಯನ್ನು ಸಾಧಿಸಿದವರು ಅನೇಕರಿದ್ದಾರೆ. ಆಚಾರ್ಯ ಚಾಣಕ್ಯರ ನೀತಿಗಳು ವ್ಯಕ್ತಿಗೆ ಎಂತಹುದ್ದೇ ಕಷ್ಟಕರ ಸಂದರ್ಭದಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಆಚಾರ್ಯ ಚಾಣಕ್ಯರ ನೀತಿಗಳು ಮಕ್ಕಳ ಬಗ್ಗೆಯೂ ಹೇಳುತ್ತದೆ. ಇವುಗಳನ್ನು ನಾವು ಮಕ್ಕಳಲ್ಲಿ ಬೆಳೆಸುವುದು ತುಂಬಾನೇ ಅವಶ್ಯಕವಾಗಿದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಮಕ್ಕಳನ್ನು ಯಶಸ್ವಿಯನ್ನಾಗಿಸಲು ಬಯಸಿದರೆ ಈ ವಿಚಾರಗಳಿಂದ ಅವರನ್ನು ದೂರವಿಡಿ ಎನ್ನುತ್ತಾರೆ. ಆ ವಿಚಾರಗಳಾವುವು..? Bad Habits: ಧನಲಕ್ಷ್ಮಿ ನಿಮಗೆ ಒಲಿಯಲು ಈ 8 ದುರಭ್ಯಾಸಗಳನ್ನು ಬಿಡಲೇಬೇಕು..!
Ganga Jala : ಪವಿತ್ರ ಗಂಗೆ : ಜೀವನದಲ್ಲಿ ಬರುವ ಕಷ್ಟಗಳನ್ನು ದೂರ ಮಾಡುತ್ತದೆಯಂತೆ ಗಂಗಾಜಲ
ಮಕ್ಕಳನ್ನು ಈ ವಿಷಯಗಳಿಂದ ದೂರವಿಡಿ:
ಆಚಾರ್ಯ ಚಾಣಕ್ಯರು ಮಕ್ಕಳನ್ನು ಜೇಡಿ ಮಣ್ಣಿಗೆ ಹೋಲಿಸುತ್ತಾರೆ. ಅವರನ್ನು ನಾವು ಜೇಡಿ ಮಣ್ಣಿನಂತೆ ಹೇಗೆ ಬೇಕಾದರೂ ರೂಪುಗೊಳಿಸಬಹುದು. ಆದ್ದರಿಂದ ಪೋಷಕರು ಯಾವಾಗಲೂ ತಮ್ಮ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಮತ್ತು ದೇಶಕ್ಕೆ ಉತ್ತಮ ಪ್ರಜೆಯಾಗುವಂತೆ ರೂಪಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಕ್ಕಳಿಗೆ ಅರಿವು ಮೂಡಿಸಲು ಮತ್ತು ಅವರಿಗೆ ಕರ್ತವ್ಯಗಳನ್ನು ನಿರ್ವಹಿಸುವುದರ ಬಗ್ಗೆ ಪಾಠವನ್ನು ಕಲಿಸಬೇಕು. ಅವರಲ್ಲಿ ಸ್ವಯಂ ಶಕ್ತಿಯನ್ನು ಹೆಚ್ಚಿಸಬೇಕೆಂದು ಚಾಣಕ್ಯರು ಹೇಳುತ್ತಾರೆ.
Tirupati Temple: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ತಂತ್ರಜ್ಞಾನ: ಇನ್ನು ದರ್ಶನ ಸರಳ..!
1. ಸುಳ್ಳಿನಿಂದ ದೂರವಿಡಿ:
ಆಚಾರ್ಯ ಚಾಣಕ್ಯ ತಮ್ಮ ಚಾಣಕ್ಯ ನೀತಿಯಲ್ಲಿ ಮಕ್ಕಳಿಗೆ ಪೋಷಕರು ಯಾವಾಗಲೂ ಸತ್ಯವನ್ನು ಹೇಳಲು ಕಲಿಸಬೇಕು ಎಂದು ಹೇಳಿದ್ದಾರೆ. ಇದಕ್ಕಾಗಿ, ಪೋಷಕರು ಯಾವಾಗಲೂ ತಮ್ಮ ಮಕ್ಕಳ ಮುಂದೆ ಸತ್ಯವನ್ನು ಮಾತನಾಡುವುದು ಮುಖ್ಯ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿರುತ್ತದೆ. ಪೋಷಕರು ಮಕ್ಕಳ ಮುಂದೆ ಯಾವ ರೀತಿ ವರ್ತಿಸುತ್ತಾರೋ ಮಕ್ಕಳು ಕೂಡ ಅದನ್ನೇ ಕಲಿತುಕೊಳ್ಳುತ್ತಾರೆ. ಪೋಷಕರು ಮಾಡುವ ತಪ್ಪುಗಳಿಂದ ಮಕ್ಕಳು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಬಹುದು. ಮಕ್ಕಳ ಮುಂದೆ ಪೋಷಕರು ಒಳ್ಳೆಯ ಮಾತುಗಳನ್ನಾಡಬೇಕು. ಅವರಿಗೆ ಸತ್ಯದ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಮೊದಲಿನಿಂದಲೂ ಸತ್ಯವನ್ನು ಹೇಳಲು ನಿಮ್ಮ ಮಕ್ಕಳಿಗೆ ಸ್ಫೂರ್ತಿ ನೀಡಿ.
Bansi Narayana Temple: ಕಾನನದ ನಡುವಿರುವ ಈ ದೇಗುಲ ತೆರೆಯುವುದು ವರ್ಷಕ್ಕೆ ಒಂದು
Puja Aarti: ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನೇಕೆ ಹಾಕಬೇಕು..?
2. ಸೋಮಾರಿತನದಿಂದ ದೂರವಿಡಿ:
ಸೋಮಾರಿತನವು ಓರ್ವ ವ್ಯಕ್ತಿಯ ಯಶಸ್ಸಿನ ಮಾರ್ಗಕ್ಕೆ ಅತಿದೊಡ್ಡ ಮಾರಕವಾಗಿದೆ. ಮತ್ತು ಸೋಮಾರಿತನದಿಂದ ನಾವು ಮಾಡಲು ಹೊರಟ ಅದೆಷ್ಟೋ ಕೆಲಸಗಳು ವಿಫಲತೆಯನ್ನು ಕಾಣುತ್ತದೆ. ನಿಮ್ಮ ಮಗು ದಿನಗಳು ಕಳೆದಂತೆ ಸೋಮಾರಿಯಾಗುತ್ತಿದ್ದಾನೆಯೇ..? ಎಂಬುದರ ಬಗ್ಗೆ ಗಮನ ನೀಡಬೇಕು. ಅವರನ್ನು ಸೋಮಾರಿತನದಿಂದ ದೂರವಿಡಲು ಕಷ್ಟಪಟ್ಟು ಕೆಲಸ ಮಾಡುವಂತೆ ಅವರನ್ನು ಪ್ರೇರೇಪಿಸಿ.
Shri Krishna : ಜನನ, ಮರಣ ಮತ್ತು ಅನಿವಾರ್ಯವಾದ ಕರ್ತವ್ಯ ಪಾಲನೆ : ಇಲ್ಲಿದೆ ಶ್ರೀಕೃಷ್ಣನ ಜ್ಞಾನದ
ಸೋಮಾರಿತನವು ಮನುಷ್ಯನ ಅತಿದೊಡ್ಡ ಶತ್ರು ಮತ್ತು ಯಶಸ್ಸಿಗೆ ಮಾರಕವಾದ ಅಂಶವಾಗಿದೆ. ನಿಮ್ಮ ಮಗುವಿನ ಭವಿಷ್ಯವು ಉಜ್ವಲವಾಗಬೇಕೆಂದು ನೀವು ಬಯಸಿದರೆ, ನೀವು ಅವರಿಗೆ ಕಷ್ಟಪಟ್ಟು ಕೆಲಸ ಮಾಡಲು ಪ್ರೇರೇಪಿಸಬೇಕು. ನಾವು ಮಕ್ಕಳನ್ನು ಓಳ್ಳೆಯ ವಿಚಾರಗಳಿಗೆ ಪ್ರೇರೇಪಿಸಿದರೆ ಅವರ ಭವಿಷ್ಯವು ಉಜ್ವಲವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
Menstrual Rules: ಮಹಿಳೆಯರು ಮುಟ್ಟಾದ 3 ದಿನಗಳವರೆಗೆ ತಲೆ ಸ್ನಾನ ಮಾಡಬಾರದೆನ್ನುತ್ತೆ ಶಾಸ್ತ್ರ..
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿರುವ ಈ ಮೇಲಿನ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಎಚ್ಚರಿಕೆ ನೀಡಬೇಕು. ಅವರ ಭವಿಷ್ಯವು ಅವರ ಬಾಲ್ಯದ ಮೇಲೆ ನಿರ್ಧರಿತವಾಗಿರುತ್ತದೆ. ನಾವು ಅವರನ್ನು ಬಾಲ್ಯದಲ್ಲಿ ಹೇಗೆ ಬೆಳೆಸಿರುತ್ತೇವೆಯೋ ಹಾಗೇ ಅವರ ಭವಿಷ್ಯ ರೂಪಿತವಾಗಿರುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
Ganga Jala : ಪವಿತ್ರ ಗಂಗೆ : ಜೀವನದಲ್ಲಿ ಬರುವ ಕಷ್ಟಗಳನ್ನು ದೂರ ಮಾಡುತ್ತದೆಯಂತೆ ಗಂಗಾಜಲ
ಮಕ್ಕಳನ್ನು ಈ ವಿಷಯಗಳಿಂದ ದೂರವಿಡಿ:
ಆಚಾರ್ಯ ಚಾಣಕ್ಯರು ಮಕ್ಕಳನ್ನು ಜೇಡಿ ಮಣ್ಣಿಗೆ ಹೋಲಿಸುತ್ತಾರೆ. ಅವರನ್ನು ನಾವು ಜೇಡಿ ಮಣ್ಣಿನಂತೆ ಹೇಗೆ ಬೇಕಾದರೂ ರೂಪುಗೊಳಿಸಬಹುದು. ಆದ್ದರಿಂದ ಪೋಷಕರು ಯಾವಾಗಲೂ ತಮ್ಮ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಮತ್ತು ದೇಶಕ್ಕೆ ಉತ್ತಮ ಪ್ರಜೆಯಾಗುವಂತೆ ರೂಪಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಕ್ಕಳಿಗೆ ಅರಿವು ಮೂಡಿಸಲು ಮತ್ತು ಅವರಿಗೆ ಕರ್ತವ್ಯಗಳನ್ನು ನಿರ್ವಹಿಸುವುದರ ಬಗ್ಗೆ ಪಾಠವನ್ನು ಕಲಿಸಬೇಕು. ಅವರಲ್ಲಿ ಸ್ವಯಂ ಶಕ್ತಿಯನ್ನು ಹೆಚ್ಚಿಸಬೇಕೆಂದು ಚಾಣಕ್ಯರು ಹೇಳುತ್ತಾರೆ.
Tirupati Temple: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ತಂತ್ರಜ್ಞಾನ: ಇನ್ನು ದರ್ಶನ ಸರಳ..!
1. ಸುಳ್ಳಿನಿಂದ ದೂರವಿಡಿ:
ಆಚಾರ್ಯ ಚಾಣಕ್ಯ ತಮ್ಮ ಚಾಣಕ್ಯ ನೀತಿಯಲ್ಲಿ ಮಕ್ಕಳಿಗೆ ಪೋಷಕರು ಯಾವಾಗಲೂ ಸತ್ಯವನ್ನು ಹೇಳಲು ಕಲಿಸಬೇಕು ಎಂದು ಹೇಳಿದ್ದಾರೆ. ಇದಕ್ಕಾಗಿ, ಪೋಷಕರು ಯಾವಾಗಲೂ ತಮ್ಮ ಮಕ್ಕಳ ಮುಂದೆ ಸತ್ಯವನ್ನು ಮಾತನಾಡುವುದು ಮುಖ್ಯ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿರುತ್ತದೆ. ಪೋಷಕರು ಮಕ್ಕಳ ಮುಂದೆ ಯಾವ ರೀತಿ ವರ್ತಿಸುತ್ತಾರೋ ಮಕ್ಕಳು ಕೂಡ ಅದನ್ನೇ ಕಲಿತುಕೊಳ್ಳುತ್ತಾರೆ. ಪೋಷಕರು ಮಾಡುವ ತಪ್ಪುಗಳಿಂದ ಮಕ್ಕಳು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಬಹುದು. ಮಕ್ಕಳ ಮುಂದೆ ಪೋಷಕರು ಒಳ್ಳೆಯ ಮಾತುಗಳನ್ನಾಡಬೇಕು. ಅವರಿಗೆ ಸತ್ಯದ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಮೊದಲಿನಿಂದಲೂ ಸತ್ಯವನ್ನು ಹೇಳಲು ನಿಮ್ಮ ಮಕ್ಕಳಿಗೆ ಸ್ಫೂರ್ತಿ ನೀಡಿ.
Bansi Narayana Temple: ಕಾನನದ ನಡುವಿರುವ ಈ ದೇಗುಲ ತೆರೆಯುವುದು ವರ್ಷಕ್ಕೆ ಒಂದು
Puja Aarti: ಆರತಿಯನ್ನು ತೆಗೆದುಕೊಳ್ಳುವಾಗ ನಾವು ಆರತಿ ತಟ್ಟೆಗೆ ಹಣವನ್ನೇಕೆ ಹಾಕಬೇಕು..?
2. ಸೋಮಾರಿತನದಿಂದ ದೂರವಿಡಿ:
ಸೋಮಾರಿತನವು ಓರ್ವ ವ್ಯಕ್ತಿಯ ಯಶಸ್ಸಿನ ಮಾರ್ಗಕ್ಕೆ ಅತಿದೊಡ್ಡ ಮಾರಕವಾಗಿದೆ. ಮತ್ತು ಸೋಮಾರಿತನದಿಂದ ನಾವು ಮಾಡಲು ಹೊರಟ ಅದೆಷ್ಟೋ ಕೆಲಸಗಳು ವಿಫಲತೆಯನ್ನು ಕಾಣುತ್ತದೆ. ನಿಮ್ಮ ಮಗು ದಿನಗಳು ಕಳೆದಂತೆ ಸೋಮಾರಿಯಾಗುತ್ತಿದ್ದಾನೆಯೇ..? ಎಂಬುದರ ಬಗ್ಗೆ ಗಮನ ನೀಡಬೇಕು. ಅವರನ್ನು ಸೋಮಾರಿತನದಿಂದ ದೂರವಿಡಲು ಕಷ್ಟಪಟ್ಟು ಕೆಲಸ ಮಾಡುವಂತೆ ಅವರನ್ನು ಪ್ರೇರೇಪಿಸಿ.
Shri Krishna : ಜನನ, ಮರಣ ಮತ್ತು ಅನಿವಾರ್ಯವಾದ ಕರ್ತವ್ಯ ಪಾಲನೆ : ಇಲ್ಲಿದೆ ಶ್ರೀಕೃಷ್ಣನ ಜ್ಞಾನದ
ಸೋಮಾರಿತನವು ಮನುಷ್ಯನ ಅತಿದೊಡ್ಡ ಶತ್ರು ಮತ್ತು ಯಶಸ್ಸಿಗೆ ಮಾರಕವಾದ ಅಂಶವಾಗಿದೆ. ನಿಮ್ಮ ಮಗುವಿನ ಭವಿಷ್ಯವು ಉಜ್ವಲವಾಗಬೇಕೆಂದು ನೀವು ಬಯಸಿದರೆ, ನೀವು ಅವರಿಗೆ ಕಷ್ಟಪಟ್ಟು ಕೆಲಸ ಮಾಡಲು ಪ್ರೇರೇಪಿಸಬೇಕು. ನಾವು ಮಕ್ಕಳನ್ನು ಓಳ್ಳೆಯ ವಿಚಾರಗಳಿಗೆ ಪ್ರೇರೇಪಿಸಿದರೆ ಅವರ ಭವಿಷ್ಯವು ಉಜ್ವಲವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
Menstrual Rules: ಮಹಿಳೆಯರು ಮುಟ್ಟಾದ 3 ದಿನಗಳವರೆಗೆ ತಲೆ ಸ್ನಾನ ಮಾಡಬಾರದೆನ್ನುತ್ತೆ ಶಾಸ್ತ್ರ..
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿರುವ ಈ ಮೇಲಿನ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಎಚ್ಚರಿಕೆ ನೀಡಬೇಕು. ಅವರ ಭವಿಷ್ಯವು ಅವರ ಬಾಲ್ಯದ ಮೇಲೆ ನಿರ್ಧರಿತವಾಗಿರುತ್ತದೆ. ನಾವು ಅವರನ್ನು ಬಾಲ್ಯದಲ್ಲಿ ಹೇಗೆ ಬೆಳೆಸಿರುತ್ತೇವೆಯೋ ಹಾಗೇ ಅವರ ಭವಿಷ್ಯ ರೂಪಿತವಾಗಿರುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.