ಆ್ಯಪ್ನಗರ

ದೀಪಾವಳಿಯಂದು ರೊಟ್ಟಿ ಸೇವಿಸಿದರೆ ಏನಾಗುತ್ತೆ..? ಈ ದಿನಗಳಲ್ಲಿ ರೊಟ್ಟಿ ತಯಾರಿಸದಿರಿ..!

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ರೊಟ್ಟಿಯನ್ನು ತಯಾರಿಸುತ್ತಾರೆ. ಆದರೆ ಎಲ್ಲಾ ದಿನಗಳಲ್ಲೂ ರೊಟ್ಟಿಯನ್ನು ತಯಾರಿಸಬಾರದೆನ್ನುವುದು ನಿಮಗೆ ತಿಳಿದಿದೆಯೇ..? ಹಾಗಾದರೆ ಯಾವೆಲ್ಲಾ ದಿನ ಮನೆಯಲ್ಲಿ ರೊಟ್ಟಿ ತಯಾರಿಸಬಾರದು..?

Navbharat Times 5 Aug 2020, 10:38 am
ಭಾರತದ ಹೆಚ್ಚಿನ ಮನೆಗಳಲ್ಲಿ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ರೊಟ್ಟಿಯನ್ನು ಅಥವಾ ಚಪಾತಿಯನ್ನು ತಮ್ಮ ಆಹಾರವಾಗಿ ಸೇವಿಸುತ್ತಾರೆ. ಚಪಾತಿ ಅಥವಾ ರೊಟ್ಟಿಯಿಲ್ಲದ ಊಟ ಅಪೂರ್ಣವೆಂದು ಹೆಚ್ಚಿನವರು ಭಾವಿಸುತ್ತಾರೆ. ನಮ್ಮ ಹಸಿವನ್ನು ಹೋಗಲಾಡಿವ ರೊಟ್ಟಿಯನ್ನು ಪ್ರತಿನಿತ್ಯ ಮನೆಯಲ್ಲಿ ತಯಾರಿಸಬಾರದೆಂದು ಹಿಂದೂ ಧರ್ಮದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಏಕಾದಶಿಯಲ್ಲಿ ಅಕ್ಕಿಯ ಆಹಾರವನ್ನು ಸೇವಿಸುವ ಬದಲು ರೊಟ್ಟಿ, ಚಪಾತಿ ತಿನ್ನುವುದರಿಂದ ಪುಣ್ಯ ಪ್ರಾಪ್ತವಾಗುತ್ತದೆ ಎಂದು ಹೇಳಲಾಗಿದೆ.
Vijaya Karnataka Web Roti
ರೊಟ್ಟಿ


ಹಣೆಗೆ ಸಿಂಧೂರವನ್ನಿಡಲು ಕಾರಣವೇನು..? ಸಿಂಧೂರವನ್ನು ತಪ್ಪದೇ ಹಣೆಗಿಡಿ..!

ಹಿಂದೂ ಧರ್ಮದಲ್ಲಿ ಹೇಳಿರುವಂತೆ ನಾವು ಕೆಲವೊಂದು ದಿನಗಳಲ್ಲಿ ರೊಟ್ಟಿಯನ್ನು ಸೇವಿಸಬಾರದು. ಈ ದಿನಗಳಲ್ಲಿ ರೊಟ್ಟಿಯನ್ನು ಸೇವಿಸುವುದರಿಂದ ನಾವು ಸಾಕಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಯಾವ ಸಂದರ್ಭಗಳಲ್ಲಿ ಅಥವಾ ಯಾವೆಲ್ಲಾ ದಿನಗಳಲ್ಲಿ ರೊಟ್ಟಿಯನ್ನು ತಯಾರಿಸಬಾರದು ಮತ್ತು ಸೇವಿಸಬಾರದೆಂದು ತಿಳಿದುಕೊಳ್ಳಿ.

ಸೌಂದರ್ಯ ಮಂತ್ರ: ನೀವು ಸುಂದರವಾಗಿ ಕಾಣಬೇಕೇ..? ಈ ಮಂತ್ರವನ್ನು ಪಠಿಸಿ

ಮನೆಯಲ್ಲಿ ಮೃತರಾದಾಗ ರೊಟ್ಟಿ ತಯಾರಿಸುವುದಿಲ್ಲ


1) ಮನೆಯಲ್ಲಿ ಯಾರಾದರೂ ಮೃತರಾದಾಗ ರೊಟ್ಟಿ ತಯಾರಿಸುವುದಿಲ್ಲ:
ಮನೆಯಲ್ಲಿ ಯಾರಾದರೂ ಸತ್ತಾಗ, ಹದಿಮೂರನೇ ದಿನದ ವಿಧಿ ವಿಧಾನಗಳ ನಂತರವೇ ರೊಟ್ಟಿಯನ್ನು ತಯಾರಿಸಲಾಗುತ್ತದೆ. ಹದಿಮೂರನೇ ದಿನಕ್ಕಿಂತಲೂ ಮೊದಲು ಸತ್ತವರ ಮನೆಯಲ್ಲಿ ರೊಟ್ಟಿ ತಯಾರಿಸಿದರೆ ಅದರಿಂದ ಸತ್ತ ವ್ಯಕ್ತಿಗಳ ಸೂಕ್ಷ್ಮ ದೇಹದ ಮೇಲೆ ಗುಲ್ಳೆಗಳು ಬರಲು ಕಾರಣವಾಗುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಮನೆಯಲ್ಲಿ ಯಾರಾದರು ಸತ್ತರೆ 13 ದಿನಗಳು ಕಳೆದ ನಂತರವೇ ರೊಟ್ಟಿಯನ್ನು ತಯಾರಿಸಲಾಗುತ್ತದೆ.

ಹಣೆಗೆ ಬಿಂದಿಯ ಬದಲು ಸ್ಟಿಕ್ಕರ್‌ ಇಟ್ಟರೆ ಏನಾಗುತ್ತದೆ..? ಸ್ಟಿಕ್ಕರ್‌ ಇಡುವುದರ

2) ನಾಗರಪಂಚಮಿ:
ನಾಗರಪಂಚಮಿ ದಿನದಂದು ಮನೆಯಲ್ಲಿ ಪಾಯಸವನ್ನು, ಹಲ್ವಾ ವನ್ನು ಸೇರಿದಂತೆ ಇನ್ನಿತರ ಸಿಹಿ ಖಾದ್ಯಗಳನ್ನು ತಯಾರಿಸಬೇಕು. ಈ ದಿನ ಮನೆಯಲ್ಲಿ ರೊಟ್ಟಿಯನ್ನು ತಯಾರಿಸಬಾರದು. ಸನಾತನ ಧರ್ಮದಲ್ಲೂ ಕೂಡ ನಾಗರ ಪಂಚಮಿಯಂದು ರೊಟ್ಟಿಯನ್ನು ತಯಾರಿಸಬಾರದಂದು ಹೇಳಲಾಗಿದೆ. ನಾಗರ ಪಂಚಮಿಯಂದು ಮನೆಯಲ್ಲಿ ರೊಟ್ಟಿಯನ್ನು ತಯಾರಿಸಿದರೆ ನಾಗ ದೇವತೆಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಮತ್ತು ನಾಗರ ಹಾವುಗಳಿಂದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲ, ನಾಗರ ಪಂಚಮಿಯಂದು ಕಬ್ಬಿಣದ ಪಾತ್ರೆಯಲ್ಲಿ ಆಹಾರ ತಯಾರಿಸುವುದನ್ನು ಕೂಡ ನಿಷೇಧಿಸಲಾಗಿದೆ.

ವಧುವಿನ ಸೋಲಾ ಸಿಂಗಾರ ಎಂದರೇನು..? ಇಲ್ಲಿದೆ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವ

ನಾಗರಪಂಚಮಿ


ಕೃಷ್ಣ ರುಕ್ಮಿಣಿಯರ ಪ್ರೀತಿಗೆ ಸರಿಸಾಟಿಯಾರು..? ಇದು ಕೃಷ್ಣ ರುಕ್ಮಿಣಿಯ ಪ್ರೇಮ್‌ಕಹಾನಿ

3) ಶೀತಲಾಷ್ಟಮಿ:
ಶೀತಲಾಷ್ಟಮಿ ದಿನದಂದು ಮಾತೆ ಶೀತಲಾಳನ್ನು ಪೂಜಿಸಲಾಗುತ್ತದೆ. ಈ ದಿನ ಹೆಚ್ಚಿನವರು ಆಹಾರವನ್ನು ಸೇವಿಸದೇ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಕುಟುಂಬದ ಉತ್ತಮ ಆರೋಗ್ಯಕ್ಕಾಗಿ ಶೀತಲಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ದಿನ ತಾಯಿ ಶೀತಲಾಳನ್ನು ಭಕ್ತಿಯಿಂದ ಪೂಜಿಸಿದರೆ ಆಕೆ ಉತ್ತಮ ಆರೋಗ್ಯವನ್ನು ಕರುಣಿಸುತ್ತಾಳೆನ್ನುವ ನಂಬಿಕೆಯಿದೆ. ಶೀತಲಾಷ್ಟಮಿಯ ದಿನ ಮನೆಯಲ್ಲಿ ರೊಟ್ಟಿಯನ್ನು ತಯಾರಿಸುವುದಿಲ್ಲ. ಒಂದು ವೇಳೆ ಮನೆಯಲ್ಲಿ ಈ ದಿನ ರೊಟ್ಟಿಯನ್ನು ತಯಾರಿಸಿದರೆ ಚರ್ಮರೋಗ ಬರುವ ಸಾಧ್ಯತೆಗಳಿವೆ ಎನ್ನುವುದು ಜನರ ನಂಬಿಕೆ.

ಇದು ಪರಶಿವನ ಪ್ರೇಮ ಕಥೆ.. ಪರಶಿವನ ಪ್ರೇಯಸಿಯರು ಯಾರು ಗೊತ್ತಾ..?

4) ಶರದ್‌ ಪೂರ್ಣಿಮಾ:
ಶರದ್‌ ಪೌರ್ಣಮಿಯನ್ನು ಕೋಜಾಗರಿ ಹಬ್ಬವೆಂದು ಆಚರಿಸಲಾಗುತ್ತದೆ. ಈ ದಿನ ಚಂದ್ರನನ್ನು ಮತ್ತು ತಾಯಿ ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ತಾಯಿ ಲಕ್ಷ್ಮಿ ದೇವಿಯು ಇದೇ ಜನಿಸಿದ್ದಾಳೆಂದು ಹೇಳಲಾಗಿದೆ. ಈ ದಿನ ಪೂಜೆಯಲ್ಲಿ ವಿಶೇಷವಾಗಿ ಸಿಹಿ ಖಾದ್ಯವನ್ನು ತಯಾರಿಸಿ ಲಕ್ಷ್ಮಿಗೆ ಮತ್ತು ಚಂದ್ರನಿಗೆ ಅರ್ಪಿಸಲಾಗುತ್ತದೆ. ಈ ದಿನ ಮನೆಯಲ್ಲಿ ರೊಟ್ಟಿ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆನ್ನುವ ಕಾರಣದಿಂದ ಮನೆಯಲ್ಲಿ ರೊಟ್ಟಿಯನ್ನು ಮಾಡುವುದಿಲ್ಲ.

ಮಗು ಜನಿಸಿದ ನಂತರ ಆಚರಿಸಲಾಗುವ ಸಂಸ್ಕಾರಗಳಾವುವು..? ಇದರ ಮಹತ್ವವೇನು..?

5) ದೀಪಾವಳಿ:
ತಾಯಿ ಲಕ್ಷ್ಮಿಗೆ ಸಂಬಂಧಿಸಿದ ಪ್ರತಿಯೊಂದು ಹಬ್ಬದಲ್ಲೂ ಮನೆಯಲ್ಲಿ ರೊಟ್ಟಿಯನ್ನು ತಯಾರಿಸುವುದಿಲ್ಲ. ತಾಯಿ ಲಕ್ಷ್ಮಿ ಪೂಜೆಯಲ್ಲಿ ಕೇವಲ ಸಿಹಿ ಖಾದ್ಯವನ್ನು ತಯಾರಿಸಲಾಗುತ್ತದೆ. ದೀಪಾವಳಿಯಲ್ಲಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಈ ದಿನ ಮನೆಯಲ್ಲಿ ರೊಟ್ಟಿಯನ್ನು ತಯಾರಿಸುವುದಿಲ್ಲ. ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ದೀಪಾವಳಿಯಲ್ಲಿ ಲಕ್ಷ್ಮಿಯನ್ನು ಧ್ಯಾನಿಸಲಾಗುತ್ತದೆ.

ದೀಪಾವಳಿ


ಸಪ್ತಪದಿ.. ಇದು ಏಳು ಹೆಜ್ಜೆಗಳ ಅನುಬಂಧ.. ಸಪ್ತಪದಿಯ ಅರ್ಥವೇನು ಗೊತ್ತಾ..?

6) ಅಮ್ಮ ಅಥವಾ ಸಿಡುಬಾದಾಗ ರೊಟ್ಟಿಯನ್ನು ಮಾಡುವುದಿಲ್ಲ:
ಮನೆಯಲ್ಲಿ ಯಾರಿಗಾದರು ಅಮ್ಮ ಆಗಿದ್ದರೆ ಆ ಸಂದರ್ಭದಲ್ಲಿ ರೊಟ್ಟಿಯನ್ನು ತಯಾರಿಸುವುದಿಲ್ಲ. ವಿಜ್ಞಾನದಲ್ಲಿ ಅದನ್ನು ಸಿಡುಬು ಎಂದು ಕರೆದರೆ, ಹಿಂದೂ ಧರ್ಮದಲ್ಲಿ ಅದನ್ನು ದೇವಿಯ ಕೋಪವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಯಾರಿಗಾದರೂ ಅಮ್ಮ ಆದರೆ ಆ ಮನೆಯಲ್ಲಿ ರೊಟ್ಟಿಯನ್ನು ತಯಾರಿಸಲಾಗುವುದಿಲ್ಲ. ಇದರಿಂದ ಅಮ್ಮ ಹೆಚ್ಚಾಗಬಹುದು ಮತ್ತು ಬಹುಬೇಗ ಅದು ಗುಣವಾಗದೇ ಇರಬಹುದೆನ್ನುವ ಕಾರಣದಿಂದ ಈ ದಿನಗಳಲ್ಲಿ ರೊಟ್ಟಿಯನ್ನು ತಯಾರಿಸುವುದಿಲ್ಲ.

ಮೂಗುತಿ ಧರಿಸುವ ಮುನ್ನ ಅದರ ಮಹತ್ವ ಹಾಗೂ ಪ್ರಯೋಜನವನ್ನು ತಿಳಿದುಕೊಳ್ಳಿ

ಈ ಮೇಲಿನ ದಿನಗಳಲ್ಲಿ ರೊಟ್ಟಿಯನ್ನು ಮನೆಯಲ್ಲಿ ತಯಾರಿಸುವುದಿಲ್ಲ. ಲಕ್ಷ್ಮಿ ಪೂಜೆಯಲ್ಲಿ ರೊಟ್ಟಿಯನ್ನು ಮಾಡುವ ಬದಲು ಸಿಹಿ ಖಾದ್ಯಗಳನ್ನು ಅದರಲ್ಲೂ ಸಿಹಿಯಾದ ಪಾಯಸವನ್ನು ತಯಾರಿಸಿ ತಾಯಿ ಲಕ್ಷ್ಮಿಗೆ ಅರ್ಪಿಸಬೇಕು. ನಂತರ ಅರ್ಪಿಸಿದ ಸಿಹಿ ಖಾದ್ಯವನ್ನೇ ಪ್ರಸಾದವೆಂದು ಸ್ವೀಕರಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ಸಂತೋಷಗೊಳ್ಳುವಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ