Goddess Lakshmi Lives In These Things And Tips To Get Blessings From Devi Lakshmi
Goddess Lakshmi : ಈ ಐದು ವಸ್ತುಗಳೆಂದರೆ ದೇವಿ ಲಕ್ಷ್ಮಿಗೆ ಬಲು ಪ್ರಿಯ
ದೇವಿ ಲಕ್ಷ್ಮಿ ಎಂದರೆ ಸಂಪತ್ತಿನ ಅಧಿದೇವತೆ. ಲಕ್ಷ್ಮಿಯ ಕೃಪಾಕಟಾಕ್ಷವಿದ್ದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬುದು ಆಸ್ತಿಕರ ಬಲವಾದ ನಂಬಿಕೆ.
Authored byಸುನೀಲ್ | Vijaya Karnataka Web18 Jan 2023, 3:02 pm
ಸಂಪತ್ತು, ಸಮೃದ್ಧಿಯನ್ನು ಕರುಣಿಸುವ ದೇವತೆ ತಾಯಿ ಲಕ್ಷ್ಮಿ. ಮಹಾಲಕ್ಷ್ಮಿಯ ಆಶೀರ್ವಾದ ಇರುವ ಮನೆಯಲ್ಲಿ ಖುಷಿ, ಸಮೃದ್ಧಿಗೇನೂ ಕೊರತೆ ಇರದು. ಈ ಮನೆಯವರು ಬಲು ಶಾಂತಿಯಿಂದ ವಾಸವಾಗಿರುತ್ತಾರೆ. ಅಂತೆಯೇ, ತಾಯಿಯ ಕೃಪೆಯನ್ನು ಪಡೆಯಲು ಎಲ್ಲರೂ ಪೂಜೆ ಪ್ರಾರ್ಥನೆಯನ್ನು ಮಾಡುತ್ತಾರೆ. ಸರಿಯಾದ ದಾರಿಯಲ್ಲಿ ಜೀವನ ನಡೆಸಿದರೆ, ಮನೆಯವರೊಂದಿಗೆ ಪ್ರೀತಿ ವಿಶ್ವಾಸದಲ್ಲಿದ್ದರೆ, ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ನಾನಾ ರೀತಿಯಲ್ಲಿ ದೇವಿಯ ಆಶೀರ್ವಾದ ಲಭಿಸುತ್ತದೆ. ಇದರ ಜತೆಗೆ, ಲಕ್ಷ್ಮಿ ದೇವಿಯು ಮನೆಯ ಅನೇಕ ವಸ್ತುಗಳಲ್ಲಿ ನೆಲೆಸಿದ್ದಾಳೆ ಎಂಬ ನಂಬಿಕೆ ಕೂಡಾ ಇದೆ. ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ದೇವಿಯು ಪ್ರಸನ್ನಳಾಗುತ್ತಾಳೆ. ಒಂದೊಮ್ಮೆ ಮನೆಯಲ್ಲಿರುವ ಈ ವಸ್ತುಗಳಿಗೆ ಅಗೌರವ ತೋರಿದರೆ ದೇವಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ. ಅಂತೆಯೇ, ತಾಯಿ ಲಕ್ಷ್ಮಿಯ ನೆಚ್ಚಿನ ಮತ್ತು ತಾಯಿ ವಾಸವಾಗಿರುತ್ತಾಳೆ ಎಂದು ಪರಿಗಣಿಸಲ್ಪಡುವ ವಸ್ತುಗಳ ಬಗ್ಗೆ ಇಲ್ಲಿ ನೋಡೋಣ.
| Image Courtesy : iStock
ತುಳಸಿ ಗಿಡ
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನ. ತುಳಸಿ ಕಟ್ಟೆ ಇಲ್ಲದ, ತುಳಸಿ ಗಿಡವನ್ನು ಪೂಜಿಸದ ಹಿಂದೂ ಧರ್ಮೀಯರ ಮನೆ ಸಿಗುವುದು ಕಷ್ಟ. ಬೆಳಗ್ಗೆ ಎದ್ದು ತುಳಸಿಗೆ ನೀರೆರೆದು ಭಕ್ತಿ ಭಾವದಿಂದ ನಮಿಸಿದ ಬಳಿಕವೇ ಸಾಕಷ್ಟು ಮಂದಿಯ ದಿನಚರಿ ಆರಂಭವಾಗುವುದು. ವಿಷ್ಣುವಿಗೆ ಬಲು ಪ್ರಿಯ ತುಳಸಿ. ತುಳಸಿ ಇಲ್ಲದೆ ವಿಷ್ಣು ದೇವರ ಪೂಜೆಯೇ ಆಗುವುದಿಲ್ಲ. ವಿಷ್ಣುವಿನೊಂದಿಗೆ ದೇವಿ ಲಕ್ಷ್ಮಿಗೂ ತುಳಸಿ ನೆಚ್ಚಿನ ಗಿಡ. ತುಳಸಿಯಲ್ಲಿ ತಾಯಿ ಲಕ್ಷ್ಮಿ ವಾಸವಾಗಿದ್ದಾಳೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ತುಳಸಿಯನ್ನು ಪೂಜಿಸಿದರೆ, ತುಳಸಿ ಗಿಡವನ್ನು ಕಾಳಜಿಯಿಂದ ನೋಡಿಕೊಂಡರೆ ದೇವಿ ಲಕ್ಷ್ಮಿಯು ಪ್ರಸನ್ನಗೊಳ್ಳುತ್ತಾಳೆ, ಆಶೀರ್ವಾದದ ಮಳೆಗರೆಯುತ್ತಾಳೆ ಎಂಬ ನಂಬಿಕೆ ಆಸ್ತಿಕರದ್ದು. ಇದಲ್ಲದೆ ತುಳಸಿಯ ಮುಂದೆ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವುದು ಕೂಡಾ ಶ್ರೇಯಸ್ಕರ ಎಂಬ ನಂಬಿಕೆ ಹಿಂದೂ ಧರ್ಮದ್ದು. image by emeraldwiz from pixabay
ತೆಂಗಿನಕಾಯಿ
ಕಲ್ಪವೃಕ್ಷಕ್ಕೆ ನಮ್ಮಲ್ಲಿ ಮಹತ್ವದ ಸ್ಥಾನವಿದೆ. ಅಂತೆಯೇ, ತೆಂಗಿನಕಾಯಿ ಅತ್ಯಂತ ಪವಿತ್ರ ಎಂಬ ನಂಬಿಕೆ ನಮ್ಮದು. ದೇವರ ಪೂಜೆಗೆ ತೆಂಗಿನಕಾಯಿ ಬೇಕೇಬೇಕು. ಇದನ್ನು ಶ್ರೀಫಲ ಎಂದೂ ಕರೆಯುತ್ತಾರೆ. ಶ್ರೀ ಎಂದರೆ ದೇವಿ ಲಕ್ಷ್ಮಿ ಎಂದರ್ಥ. ತಾಯಿ ಲಕ್ಷ್ಮಿಗೆ ತೆಂಗಿನಕಾಯಿ ಎಂದರೆ ಬಲು ಪ್ರಿಯ. ಅಂತೆಯೇ, ಪೂಜೆ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಗಳ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಅಗತ್ಯವಾಗಿ ಬಳಸಲಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೆಂಗಿನಕಾಯಿಯ ಬಳಕೆ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ವಾರದ ಪೂಜೆಯ ಸಮಯದಲ್ಲಿ ತೆಂಗಿನಕಾಯಿಯನ್ನು ಮನೆಯಲ್ಲಿ ಇಡಬಹುದು. image by brij vaghasiya from pixabay
ಹಿಂದೂ ಧರ್ಮದಲ್ಲಿ ಹಸುವಿಗೂ ಪವಿತ್ರ ಸ್ಥಾನ. ಹಸುವನ್ನು ದೇವರೆಂದು ಪೂಜಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಹಸುವಿನೊಳಗೆ ತಾಯಿ ಲಕ್ಷ್ಮಿ ನೆಲೆಯಾಗಿದ್ದಾಳೆ ಎಂಬುದು ನಂಬಿಕೆ. ಸೆಗಣಿ, ಗೋಮೂತ್ರಕ್ಕೂ ಪವಿತ್ರ ಸ್ಥಾನವಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಗೋಧೂಳಿಯ ಸಂದರ್ಭದಲ್ಲಿ ಲಕ್ಷ್ಮಿ ಆರಾಧನೆ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಗೋಧೂಳಿ ಸಮಯ ಎಂದರೆ ಸಂಧ್ಯಾಕಾಲ, ಸಂಜೆ ಎಂದರ್ಥ. ಗೋವುಗಳು ಹಟ್ಟಿಗೆ ಮರಳುವಾಗ ಅವುಗಳ ಪಾದಗಳಿಂದ ಏಳುವ ಧೂಳಿಗೆ ಹೀಗೆ ಎನ್ನುತ್ತಾರೆ. ಅಂದರೆ, ಮುಸ್ಸಂಜೆಯಲ್ಲಿ ಹಸುಗಳು ಮನೆಗೆ ಮರಳುವ ಸಮಯ ಅತ್ಯಂತ ಮಂಗಳಕರ ಎಂಬುದು ನಂಬಿಕೆ. ತಾಯಿ ಲಕ್ಷ್ಮಿಗೂ ಇಷ್ಟವಾದ ಸಮಯ ಇದು. image by petra from pixabay
ತಾವರೆ ಹೂವಿಗೂ ನಮ್ಮಲ್ಲಿ ಮಂಗಳಕರ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ತಾವರೆ ಹೂವನ್ನು ಬಳಸಲಾಗುತ್ತದೆ. ತಾಯಿ ಲಕ್ಷ್ಮಿ ಕಮಲದ ಹೂವಿನ ಮೇಲೆ ಕುಳಿತಿರುತ್ತಾಳೆ. ಹೀಗಾಗಿ, ಈ ಹೂವು ತಾಯಿ ಲಕ್ಷ್ಮಿಯ ನೆಚ್ಚಿನ ಹೂವು ಎಂದೇ ಪರಿಗಣಿಸಲಾಗಿದೆ. ಮನೆಯ ಬಾಗಿಲಿನಲ್ಲಿ ಕಮಲದ ಹೂವನ್ನು ಇಡುವುದು ಮಂಗಳಕರ ಎಂಬ ನಂಬಿಕೆ. ದೇವಿಯನ್ನು ಮನೆಗೆ ಸ್ವಾಗತಿಸುವ ಸಲುವಾಗಿ ತಾವರೆ ಹೂವನ್ನು ಮನೆಯ ಬಾಗಿಲಿನಲ್ಲಿ ಇಡಲಾಗುತ್ತದೆ. ಶುಕ್ರವಾರ ತಾಯಿ ಲಕ್ಷ್ಮಿಯ ಪಾದಗಳಿಗೆ ಕಮಲದ ಹೂವನ್ನು ಅರ್ಪಿಸಿದರೆ, ಇಡೀ ಕುಟುಂಬದ ಮೇಲೆ ತಾಯಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. image by bob williams from pixabay
ಶಂಖದ ಧ್ವನಿಯನ್ನು ಕೇಳುವುದು, ದೇವರ ಕೋಣೆಯಲ್ಲಿ ಶಂಖವನ್ನು ಇಡುವುದು ಅತ್ಯಂತ ಮಂಗಳಕರ ಎಂಬ ನಂಬಿಕೆ ಹಿಂದೂ ಧರ್ಮದ್ದು. ಇದರ ಜತೆಗೆ, ಪುರಾಣ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ತಾಯಿ ಲಕ್ಷ್ಮಿಯು ಶಂಖದಿಂದ ಅವತರಿಸಿದಳು ಎಂದು ನಂಬಲಾಗಿದೆ. ಹೀಗಾಗಿ, ಶಂಖವನ್ನು ದೇವಿ ಲಕ್ಷ್ಮಿಯ ವಾಸಸ್ಥಾನ ಎಂದೇ ಪರಿಗಣಿಸಲಾಗುತ್ತದೆ. ಇದರ ಜತೆಗೆ, ಭಗವಾನ್ ವಿಷ್ಣುವಿಗೂ ಶಂಖ ಬಲು ಪ್ರಿಯ. ವಿಷ್ಣುವಿನ ಕೈಯಲ್ಲಿ ಶಂಖವನ್ನು ನೋಡಬಹುದು. ಹೀಗಾಗಿ, ಶಂಖ ಎಂದರೆ ಲಕ್ಷ್ಮಿಗೂ ಬಲು ಪ್ರಿಯ. ಶಂಖವನ್ನು ಮನೆಯಲ್ಲಿ ಇಡುವುದು, ಭಕ್ತಿ ಭಾವದಿಂದ ನೋಡಿಕೊಳ್ಳುವುದು ಮಂಗಳಕರ ಎಂಬ ನಂಬಿಕೆ ಇದೆ.
ಈ ಎಲ್ಲವನ್ನೂ ಬಲು ಪವಿತ್ರ ಭಾವದಿಂದ ನೋಡಿಕೊಳ್ಳಬೇಕು. ಒಂದೊಮ್ಮೆ ಇವುಗಳಿಗೆ ಅಗೌರವ ತೋರಿದರೆ ತಾಯಿ ಲಕ್ಷ್ಮಿಯ ಕೋಪಕ್ಕೂ ತುತ್ತಾಗಬೇಕಾಗಬಹುದು ಎಂಬ ನಂಬಿಕೆ ಇದೆ. ದೇವಿ ಲಕ್ಷ್ಮಿಯ ಕೃಪೆ ಇದ್ದರೆ ಆ ಮನೆಯಲ್ಲಿ, ಆ ಕುಟುಂಬದಲ್ಲಿ ಹಣ ಮತ್ತು ಧಾನ್ಯಗಳ ಕೊರತೆಯನ್ನು ಎಂದಿಗೂ ಎದುರಿಸುವುದಿಲ್ಲ ಎಂಬುದು ನಂಬಿಕೆ. ಅಂತಹ ಕುಟುಂಬ ಯಾವಾಗಲೂ ಅಭಿವೃದ್ಧಿ ಹೊಂದುತ್ತದೆ ಎಂಬ ಬಲವಾದ ನಂಬಿಕೆ ಆಸ್ತಿಕರದ್ದು.
"2007ರ ಸೆಪ್ಟೆಂಬರ್ನಿಂದ ಪತ್ರಿಕೋದ್ಯಮದ ಪಯಣ ಶುರು. ಪ್ರಮುಖ ದಿನಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ವೃತ್ತಿ ಜೀವನ ಆರಂಭ. ಇದಾದ ಆರು ತಿಂಗಳ ಬಳಿಕ ನ್ಯೂಸ್ ಚಾನೆಲ್ನಲ್ಲಿ ಕೆಲಸ. 2008ರಿಂದ ಶುರುವಾದ ಸುದ್ದಿ ವಾಹಿನಿಯ ಪಯಣ ನ್ಯೂಸ್ ಡೆಸ್ಕ್ನ ವಿವಿಧ ಜವಾಬ್ದಾರಿಗಳ ನಿರ್ವಹಣೆಯೊಂದಿಗೆ 2019ರ ತನಕ ಸಾಗಿತ್ತು. ಅಲ್ಲಿಂದ ಮತ್ತೊಂದು ಬದಲಾವಣೆಯ ಕ್ಷಣ. 2019ರಿಂದ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಕಲಿಕೆಯೊಂದಿಗೆ ಹೊಸ ಜೀವನ ಶುರು. ಇಲ್ಲಿಂದ ಈ ಕ್ಷಣದವರೆಗೆ ವಿಜಯ ಕರ್ನಾಟಕ ಬಳಗದೊಂದಿಗೆ ನನ್ನ ವೃತ್ತಿ ಬದುಕು ಸಾಗಿದೆ. ಇಷ್ಟು ವರ್ಷದ ಪಯಣದಲ್ಲಿ ವಿವಿಧ ಸಂಸ್ಥೆಗಳಲ್ಲಿ ಹಲವು ವಿಭಾಗಗಳಲ್ಲಿ ಕೆಲಸದ ಅನುಭವ ಪಡೆದ ತೃಪ್ತಿ ನನ್ನದು. ಎಲ್ಲಾ ಪತ್ರಕರ್ತರಿಗೂ ಪ್ರಮುಖವಾಗಿರುವ ಓದು ನನ್ನ ಹವ್ಯಾಸಗಳಲ್ಲಿ ಒಂದು. ಬಿಡುವಾದಾಗ ಪ್ರವಾಸಕ್ಕೆ ಹೋಗುವುದು ಕೂಡಾ ನನ್ನ ಜೀವನದ ಖುಷಿಯ ಭಾಗ. "... ಇನ್ನಷ್ಟು ಓದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.