ಮತ್ತೊಂದು ವರ್ಷ ಕಳೆದಿದೆ. ಇದು ನಮಗೆ ಆತ್ಮಾವಲೋಕನದ ಸಮಯ. ಕಳೆದ ವರ್ಷದ ಅನುಭವಗಳು ಹೊಸ ವರ್ಷಕ್ಕೆ ದಾರಿ, ಕಳೆದ ವರ್ಷದ ಅನುಭವಗಳು ಕಲಿಸಿದ ಪಾಠವೂ ಬದುಕಿಗೆ ಬೆಳಕು... ಇದರೊಂದಿಗೆ ಹೊಸ ಭರವಸೆ, ಹೊಸ ಹುರುಪಿನೊಂದಿಗೆ ಈ ವರ್ಷವನ್ನು ಆರಂಭಿಸಬೇಕು. ಅದಕ್ಕೆ ಧನಾತ್ಮಕ ಚಿಂತನೆಯೊಂದಿಗೆ ನಮ್ಮ ವರ್ಷದಾರಂಭವಾದರೆ ಚೆನ್ನ. ಧನಾತ್ಮಕ ಚಿಂತನೆಗಳು ಬದುಕಿಗೆ ಖುಷಿ ನೀಡುತ್ತದೆ, ಸವಾಲುಗಳನ್ನು ಎದುರಿಸುವ ಧೈರ್ಯ ತರುತ್ತದೆ. ನಕಾರಾತ್ಮಕ ಯೋಚನೆಗಳು ಯಾವತ್ತಿದ್ದರೂ ಜೀವನಕ್ಕೆ ಮಾರಕ. ಹೀಗಾಗಿ, ಪ್ರತಿಯೊಂದನ್ನು ಧನಾತ್ಮಕವಾಗಿ ಸ್ವೀಕರಿಸುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ವರ್ಷವನ್ನು ಸಕಾರಾತ್ಮಕ ಮನೋಭಾವದಿಂದ ಸ್ವಾಗತಿಸಬೇಕು. ನಮ್ಮ ಪವಿತ್ರ ಗ್ರಂಥಗಳಲ್ಲಿ ಇರುವ ಮಾತುಗಳು, ಜ್ಞಾನಿಗಳ ಸಂದೇಶಗಳೆಲ್ಲವೂ ಎಲ್ಲರ ಬದುಕಿಗೂ ಸ್ಫೂರ್ತಿ ತುಂಬುತ್ತವೆ. ಅದಕ್ಕಾಗಿಯೇ 2023ರ ಸ್ವಾಗತದ ಖುಷಿಗೆ ಭಗವಾನ್ ಶ್ರೀಕೃಷ್ಣನ ಒಂದಷ್ಟು ಸಂದೇಶಗಳು ಇಲ್ಲಿವೆ. ಈ ಅದ್ಭುತ ಸಂದೇಶಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವ ಮೂಲಕ ನೀವು ಹೊಸ ವರ್ಷವನ್ನು ಸ್ವಾಗತಿಸಬಹುದು.
ಶ್ರೀಕೃಷ್ಣನ ಮಾತುಗಳು
ಶ್ರೀಕೃಷ್ಣನ ಮಾತುಗಳು
- ಏನಾಗಿದೆಯೋ, ಅದು ಒಳ್ಳೆಯದಕ್ಕೇ ಆಗಿದೆ. ಏನಾಗುತ್ತಿದೆಯೋ ಅದು ಒಳ್ಳೆಯದಕ್ಕೇ ಆಗುತ್ತಿದೆ. ಏನಾಗಲಿದೆಯೋ ಅದೂ ಒಳ್ಳೆಯದಕ್ಕೇ ಆಗಲಿದೆ.
- ನಿನ್ನ ಹಕ್ಕಿರುವುದು ಕರ್ಮದ ಮೇಲೆಯೇ ಹೊರತು ಅದರ ಫಲಗಳಲ್ಲಿ ಅಲ್ಲ. ಫಲದ ನಿರೀಕ್ಷೆಯಲ್ಲಿ ನೀನು ಕರ್ಮದಲ್ಲಿ ತೊಡಗಬೇಡ. ಹಾಗೆಯೇ ಏನನ್ನೂ ಮಾಡದಿರುವ ಅಥವಾ ಕರ್ಮದಲ್ಲಿ ತೊಡಗದೇ ಇರುವ ಗುಣ ನಿನ್ನದಾಗದೇ ಇರಲಿ.
- ಆಧ್ಯಾತ್ಮಿಕ ಜೀವನಕ್ಕೆ ನಿಮ್ಮ ಸಂಕಲ್ಪ, ಸಮರ್ಪಣೆಯಿಂದ ಎಂದಿಗೂ ಹಿಂದೆ ಸರಿಯಬೇಡಿ. ಸ್ವಯಂ ನಿಯಂತ್ರಣ, ಪ್ರಾಮಾಣಿಕತೆ, ಸತ್ಯಸಂಧತೆ, ಪ್ರೀತಿ ಮತ್ತು ಸೇವಾ ಮನೋಭಾವ ನಿಮ್ಮದಾಗಿರಲಿ. ನಿರ್ಲಿಪ್ತರಾಗಿರಲು ಮತ್ತು ತ್ಯಾಗದಲ್ಲಿ ಸಂತೋಷವನ್ನು ಪಡೆಯಲು ಕಲಿಯಿರಿ. ಯಾವುದೇ ಜೀವಿರಾಶಿಗಳ ಮೇಲೆ ಕೋಪಗೊಳ್ಳಬೇಡಿ ಅಥವಾ ಹಾನಿ ಮಾಡಬೇಡಿ. ಸಹಾನುಭೂತಿ ಮತ್ತು ಸೌಮ್ಯವಾಗಿರಿ. ಎಲ್ಲರೊಂದಿಗೂ ಉತ್ತಮವಾಗಿರಿ. ಚೈತನ್ಯ, ತಾಳ್ಮೆ, ಇಚ್ಛೆ, ಶುದ್ಧತೆಯನ್ನು ಬೆಳೆಸಿಕೊಳ್ಳಿ. ದುರುದ್ದೇಶ ಮತ್ತು ಅಹಂಕಾರದ ಮನೋಭಾವದಿಂದ ದೂರ ಇರಿ.
- ನೀವು ಮಾಡಬೇಕಾದುದೆಲ್ಲವನ್ನೂ ಮಾಡಿ. ಆದರೆ, ದುರಾಶೆಯಿಂದ ಅಲ್ಲ, ಅಹಂಕಾರದಿಂದ ಅಲ್ಲ, ಕಾಮದಿಂದ ಅಲ್ಲ, ಅಸೂಯೆಯಿಂದ ಅಲ್ಲ, ಎಲ್ಲವನ್ನೂ ಪ್ರೀತಿ, ಸಹಾನುಭೂತಿ, ನಮ್ರತೆ ಮತ್ತು ಭಕ್ತಿಯಿಂದ ಮಾಡಿ.
- ಶಾಂತತೆ, ಸೌಮ್ಯತೆ, ಮೌನ, ಸ್ವಯಂ ಸಂಯಮ ಮತ್ತು ಶುದ್ಧತೆ: ಇವು ಮನಸ್ಸಿನ ಶಿಸ್ತುಗಳು.
- ಶೀತ ಅಥವಾ ಶಾಖ, ಸಂತೋಷ ಅಥವಾ ನೋವು ಅನುಭವಿಸಿ. ಈ ಅನುಭವಗಳು ಕ್ಷಣಿಕ. ಅವುಗಳು ಬಂದು ಹೋಗುತ್ತವೆ. ಅವುಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳಿ.
- ಮನಸ್ಸು ಚಂಚಲ ಮತ್ತು ನಿಗ್ರಹಿಸುವುದು ಕಷ್ಟ. ಆದರೆ, ಅಭ್ಯಾಸದಿಂದ ಇದನ್ನು ನಿಗ್ರಹಿಸಬಹುದು.
- ಮನಸ್ಸು ತನ್ನನ್ನು ನಿಯಂತ್ರಿಸದವರಿಗೆ ಶತ್ರುವಿನಂತೆ ವರ್ತಿಸುತ್ತದೆ.