ಆ್ಯಪ್ನಗರ

ಈ ಲಕ್ಷಣಗಳಿದ್ದರೆ ಸಾವು ಖಚಿತ ಎನ್ನುತ್ತೆ ಶಿವ ಪುರಾಣ..! ಮರಣದ ಸೂಚನೆಗಳಿವು ಎಚ್ಚರ..

ನಮ್ಮ ಮರಣಕ್ಕೂ ಮುನ್ನ ಕೆಲವೊಂದು ಸೂಚನೆಗಳು ನಮಗೆ ಕಾಣಿಸುತ್ತದೆ ಎಂದು ಶಿವ ಪುರಾಣ ಹೇಳುತ್ತದೆ. ಆದರೆ ಇವುಗಳನ್ನು ನಾವು ಸರಿಯಾಗಿ ಗಮನಿಸಿರುವುದಿಲ್ಲ. ಶಿವ ಪುರಾಣದ ಪ್ರಕಾರ, ಸಾವಿನ ಸೂಚನೆಗಳಾವುವು..? ಇವುಗಳೇ ಸಾವಿನ ಮುನ್ಸೂಚನೆ..!

Vijaya Karnataka Web 30 Jul 2021, 2:46 pm
ಸಾವು ಕೂಡ ಹಾಗೆ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ. ಸಾವಿನ ಬಗ್ಗೆ ನಮಗೆ ಸಾವಿಗೂ ಮುನ್ನ ತಿಳಿಯಲು ಆರಂಭವಾಗುತ್ತದೆ. ಶಿವ ಪುರಾಣದಲ್ಲಿ, ಶಿವನೇ ಸಾವಿಗೆ ಸಂಬಂಧಿಸಿದ ಚಿಹ್ನೆಗಳು ಎಂಬುದನ್ನು ಹೇಳಿದ್ದಾನೆ. ಇವುಗಳು ಸಾವಿಗೂ ಮುನ್ನ ನಮ್ಮ ಗಮನಕ್ಕೆ ಬರುವ 5 ಪ್ರಮುಖ ವಿಷಯಗಳು. ಅವುಗಳು ಯಾವುವು ಗೊತ್ತೇ..? ನಿಮಗೂ ಕೂಡ ಈ ಸೂಚನೆ ಬರಬಹುದು..
Vijaya Karnataka Web here are the 5 signs of death according to shiv puran
ಈ ಲಕ್ಷಣಗಳಿದ್ದರೆ ಸಾವು ಖಚಿತ ಎನ್ನುತ್ತೆ ಶಿವ ಪುರಾಣ..! ಮರಣದ ಸೂಚನೆಗಳಿವು ಎಚ್ಚರ..


​ಇಂತಹ ವಿಚಿತ್ರ ಘಟನೆಗಳು ನಡೆಯಲಾರಂಭಿಸುವುದು

ಶಿವ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ನೀರು, ಎಣ್ಣೆ, ತುಪ್ಪ ಮತ್ತು ಗಾಜಿನಲ್ಲಿ ತನ್ನ ಪ್ರತಿಬಿಂಬವನ್ನು ನೋಡದಿದ್ದಾಗ, ಜಾಗರೂಕರಾಗಿರಿ. ಅಂತಹ ಜನರು 6 ತಿಂಗಳ ಮುಂಚಿತವಾಗಿ ಈ ಸಾವಿನ ಚಿಹ್ನೆಯನ್ನು ನೋಡಲು ಪ್ರಾರಂಭಿಸುತ್ತಾರೆ ಎನ್ನುವ ನಂಬಿಕೆಯಿದೆ. ಇದರ ಹೊರತಾಗಿ, ಯಾವುದೇ ಓರ್ವ ವ್ಯಕ್ತಿ ತಲೆಯೇ ಇಲ್ಲದ ತನ್ನ ನೆರಳನ್ನು ನೋಡಿದಾಗ ಅವರು ಕೂಡ ಜಾಗರೂಕರಾಗಿರಬೇಕು. ಅಂತಹ ಜನರು 6 ತಿಂಗಳೊಳಗೆ ಸಾಯಬಹುದು.

ಶಿವನಿಗೇಕೇ ಎಕ್ಕದ ಹೂವನ್ನು ಅರ್ಪಿಸಬೇಕು..? ತಪ್ಪದೇ ಇದರ ಪ್ರಯೋಜನವನ್ನು ತಿಳಿಯಿರಿ..!

​ಈ ರೀತಿಯಾದ ಘಟನೆ ಸಂಭವಿಸುವುದು

ಶಿವ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಬೆಂಕಿಯ ಬೆಳಕನ್ನು ಸರಿಯಾಗಿ ನೋಡದಿದ್ದರೆ ಮತ್ತು ಸುತ್ತಲೂ ಕಪ್ಪು ಕತ್ತಲೆ ಕಾಣಿಸಿಕೊಳ್ಳಲು ಪ್ರಾರಂಭವಾಗುವುದು. ಆದ್ದರಿಂದ ಅಂತಹ ಜನರು 6 ತಿಂಗಳೊಳಗೆ ಸಾಯಬಹುದು. ಅದೇ ಸಮಯದಲ್ಲಿ, ಇದ್ದಕ್ಕಿದ್ದಂತೆ ಓರ್ವ ವ್ಯಕ್ತಿಯು ನೀಲಿ ಬಣ್ಣದ ನೊಣಗಳಿಂದ ಸುತ್ತುವರಿದರೆ ಆ ವ್ಯಕ್ತಿಯ ವಯಸ್ಸು ಕೇವಲ ಒಂದು ತಿಂಗಳು ಮಾತ್ರ ಎಂದು ಶಿವ ಪುರಾಣ ಹೇಳುತ್ತದೆ. ಅಂತಹ ಚಿಹ್ನೆಗಳು ಕಂಡುಬಂದರೆ, ಜನರು ತಕ್ಷಣ ಜಾಗರೂಕರಾಗಿರಬೇಕು.

ಹಾಲಿನ ಕನಸು ಬಿದ್ದರೆ ಶುಭವೋ..? ಅಶುಭವೋ..? ಈ ಕನಸಿನ ಅರ್ಥವೇನು ಗೊತ್ತೇ..?

​ಈ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ

ಶಿವ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಮೇಲೆ ರಣಹದ್ದು, ಕಾಗೆ ಅಥವಾ ಪಾರಿವಾಳ ಬಂದು ಕುಳಿತುಕೊಳ್ಳುವುದು ಅಥವಾ ರಣಹದ್ದುಗಳು ಮತ್ತು ಕಾಗೆಗಳು ಆತನನ್ನು ಸುತ್ತುವರಿದರೆ, ಅಂತಹ ಜನರು ಸುಮಾರು ಒಂದು ತಿಂಗಳೊಳಗೆ ಸಾಯಬಹುದು. ಅದೇ ಸಮಯದಲ್ಲಿ, ಅಂತಹ ಜನರು ಸೂರ್ಯ ಮತ್ತು ಚಂದ್ರನನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ ದಿಕ್ಕುಗಳ ಭ್ರಮೆಯನ್ನು ಹೊಂದಿರುತ್ತಾರೆ. ಆದ್ದರಿಂದ ಅಂತಹ ಜನರು 6 ತಿಂಗಳಲ್ಲಿ ಸಾಯಬಹುದು ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ.

ಈ 5 ಜನರೊಂದಿಗಿದ್ದರೆ ಜೀವವೇ ಹೋಗಬಹುದು ಎನ್ನುತ್ತಾನೆ ಚಾಣಕ್ಯ..! ಆದಷ್ಟು ಎಚ್ಚರದಿಂದಿರಿ..

​ಸೂರ್ಯ ಮತ್ತು ಚಂದ್ರ ಈ ರೀತಿ ಕಾಣಿಸಿಕೊಳ್ಳುವರು

ಶಿವ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಚಂದ್ರ ಮತ್ತು ಸೂರ್ಯನ ಸುತ್ತ ಕಪ್ಪು ಅಥವಾ ಕೆಂಪು ವೃತ್ತವನ್ನು ನೋಡಲು ಪ್ರಾರಂಭಿಸಿದರೆ, ಅವನು ಸುಮಾರು 15 ದಿನಗಳಲ್ಲಿ ಸಾಯಬಹುದು. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿಯು ಚಂದ್ರ ಮತ್ತು ನಕ್ಷತ್ರಗಳನ್ನು ಸರಿಯಾಗಿ ನೋಡದಿದ್ದರೆ ಅಥವಾ ಸ್ಪಷ್ಟವಾಗಿ ಗೋಚರಿಸದಿದ್ದರೆ, ಅವನು ಒಂದು ತಿಂಗಳಲ್ಲಿ ಸಾಯಬಹುದು.

ಪತಿ - ಪತ್ನಿ ಈ 2 ದಿನ ದೈಹಿಕ ಸಂಬಂಧ ಹೊಂದಿದರೆ ಮಹಾ ಪಾಪಿಗಳಾಗುವರು..! ಎಚ್ಚರ..

​ಸಾವಿಗೂ ಮುನ್ನ ದೇಹದ ಬಣ್ಣ ಬದಲಾಗುತ್ತದೆ

ಶಿವ ಪುರಾಣದ ಪ್ರಕಾರ, ಓರ್ವ ವ್ಯಕ್ತಿ ಸ್ವಾಭಾವಿಕ ಮರಣವನ್ನು ಹೊಂದುವಂತಿದ್ದರೆ ಸಾವಿಗೂ ಮುನ್ನ ಆತನ ದೇಹದಲ್ಲಿ ಅನೇಕ ಲಕ್ಷಣಗಳು, ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಸ್ವಾಭಾವಿಕ ಸಾವಿಗೂ ಮುನ್ನ ಆ ವ್ಯಕ್ತಿಯ ದೇಹವು ಬಿಳಿ ಅಥವಾ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗೇ ಆತನ ಕಣ್ಣುಗಳು ಕೆಂಪಾಗುವುದರ ಮೂಲಕ ವ್ಯಕ್ತಿಯ ಪ್ರಸ್ತುತ ಜೀವನವು ಇನ್ನು ಮುಂದೆ ಅಸ್ಥಿತ್ವದಲ್ಲಿರುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ಸೂರ್ಯ ಗ್ರಹಣ 2021: ಯಾವ ಮಂತ್ರವನ್ನು ಪಠಿಸಬೇಕು..? ಗ್ರಹಣ ದೋಷಕ್ಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ