ಆ್ಯಪ್ನಗರ

ಬಹುಬೇಗ ಹಣ ಗಳಿಸಬೇಕಾ..? ಇಲ್ಲಿದೆ ತಾಂತ್ರಿಕ ಮತ್ತು ವಾಸ್ತು ಸಲಹೆಗಳು..!

ಹಣದ ಸಮಸ್ಯೆಯೇ ಇಲ್ಲದ ಮನುಷ್ಯನಿಲ್ಲ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಹಣದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಆದರೆ ಇಲ್ಲಿ ತಾಂತ್ರಿ ಮತ್ತು ವಾಸ್ತು ಪರಿಹಾರಗಳನ್ನು ನೀಡಲಾಗಿದ್ದು, ಇದು ನಿಮ್ಮನ್ನು ಹಣದ ಸಮಸ್ಯೆಯಿಂದ ಮುಕ್ತಗೊಳಿಸುತ್ತದೆ. ಆ ಪರಿಹಾರಗಳಾವುವು..?

Vijaya Karnataka Web 11 Jun 2021, 8:55 am
ಜೀವನದಲ್ಲಿ ಹಣ ಗಳಿಸಬೇಕು ಎನ್ನುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಅದರಲ್ಲೂ ಕಡಿಮೆ ಸಮಯದಲ್ಲಿ ಹಣ ಗಳಿಸಬೇಕು ಎಂದು ಪ್ರತಿಯೊಬ್ಬರೂ ಕೂಡ ಬಯಸುತ್ತಾರೆ. ಅದಕ್ಕಾಗಿ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಇಲ್ಲಿ ಕೆಲವೊಂದು ಪರಿಹಾರಗಳನ್ನು ಸೂಚಿಸಲಾಗಿದೆ ಇವುಗಳನ್ನು ಅನುಸರಿಸುವುದರಿಂದ ನೀವು ಕಡಿಮೆ ಸಮಯದಲ್ಲಿ ಹಣ ಗಳಿಸಬಹುದಾಗಿದೆ. ಇದನ್ನು ಮಾಡುವುದರಿಂದ ನಿಮ್ಮ ಹಣದ ಬಿಕ್ಕಟ್ಟನ್ನು ತೆಗೆದುಹಾಕಬಹುದು ಎನ್ನುವ ನಂಬಿಕೆಯಿದೆ. ಇದನ್ನು ತಾಂತ್ರಿಕ ಪರಿಹಾರಗಳು ಎಂದೂ ಕರೆಯಲಾಗುತ್ತದೆ. ಇದನ್ನು ಪಾಲಿಸುವಾಗ ಎಚ್ಚರಿಕೆಯಿಂದ ಇರಬೇಕು. ಹಾಗೂ ನೀವು ಪಾಲಿಸುತ್ತಿರುವ ಕ್ರಮಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಈ ಪರಿಹಾರಗಳನ್ನು ನಾವು ವಾಸ್ತು ಶಾಸ್ತ್ರದಲ್ಲೂ ಕೂಡ ನೋಡಬಹುದು.
Vijaya Karnataka Web here are the easy solution for money problems
ಬಹುಬೇಗ ಹಣ ಗಳಿಸಬೇಕಾ..? ಇಲ್ಲಿದೆ ತಾಂತ್ರಿಕ ಮತ್ತು ವಾಸ್ತು ಸಲಹೆಗಳು..!


​ಭಾನುವಾರ ಈ ತಾಂತ್ರಿಕ ಪರಿಹಾರವನ್ನು ಮಾಡಿ:

ಭಾನುವಾರ ರಾತ್ರಿ ಮಲಗುವ ಸಮಯದಲ್ಲಿ, ಒಂದು ಲೋಟ ಹಾಲನ್ನು ನಿಮ್ಮ ತಲೆಯ ಬಳಿ ಇರಿಸಿ. ಮರುದಿನ ಬೆಳಿಗ್ಗೆ, ದೈನಂದಿನ ಕೆಲಸ ಮುಗಿಸಿದ ನಂತರ, ಈ ಹಾಲನ್ನು ಅಕೇಶಿಯ ಮರದ ಬುಡಕ್ಕೆ ಸುರಿಯಿರಿ. ಪ್ರತಿ ಭಾನುವಾರ ರಾತ್ರಿ ಇದನ್ನು ಮಾಡಿ. ಈ ತಾಂತ್ರಿಕ ಪರಿಹಾರವನ್ನು ಮಾಡುವುದರಿಂದ, ನಿಮ್ಮ ಮೇಲಿನ ಕೆಟ್ಟ ದೃಷ್ಟಿಯನ್ನು ತೆಗೆದುಹಾಕಬಹುದು. ಕುಟುಂಬದಲ್ಲಿಇರುವ ನಕಾರಾತ್ಮಕ ಶಕ್ತಿಗಳ ಪರಿಣಾಮವು ಕೊನೆಗೊಳ್ಳುತ್ತದೆ. ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಸಂಪತ್ತು ಪ್ರಾಪ್ತಿಯಾಗುತ್ತದೆ.

ಲಕ್ಷ್ಮಿ ಪೂಜೆ ವಿಶೇಷ: ಈ ಮಂತ್ರಗಳಿಂದ ಯಶಸ್ಸು ಸಿದ್ಧಿ..! ಪ್ರಯೋಜನವೇನು ಗೊತ್ತೇ..?

​ಸೋಮವಾರ ಈ ಪರಿಹಾರವನ್ನು ಮಾಡಿ:

ಸೋಮವಾರ ರಾತ್ರಿ ಚಂದ್ರ ಉದಯಿಸಿದಾಗ, ನಿಮ್ಮ ಹಾಸಿಗೆಯ ನಾಲ್ಕು ಮೂಲೆಗಳಲ್ಲಿ ಬೆಳ್ಳಿಯ ಹಾಳೆ ಅಥವಾ ಬೆಳ್ಳಿಯ ಕಡ್ಡಿಗಳನ್ನು ಸುತ್ತಿ. ಇದನ್ನು ಮಾಡುವುದರಿಂದ ಮನೆಯ ಸುತ್ತಲಿನ ಋಣಾತ್ಮಕ ಶಕ್ತಿಯು ನಾಶವಾಗುತ್ತದೆ ಮತ್ತು ಹಣದ ತೊಂದರೆಗಳು ದೂರವಾಗಲು ಪ್ರಾರಂಭವಾಗುತ್ತದೆ ಎನ್ನುವ ನಂಬಿಕೆಯಿದೆ.

ಈ ಗುಣವಿದ್ದರೆ ಹಣ ಸಿಗುತ್ತದೆ ಎನ್ನುತ್ತಾನೆ ಚಾಣಕ್ಯ..! ನಿಮ್ಮಲ್ಲಿದೆಯೇ ಈ ಗುಣ..?

​ಮಂಗಳವಾರ ಈ ಕ್ರಮಗಳನ್ನು ಮಾಡಿ:

ನೀವು ಸಾಲದಿಂದ ತೊಂದರೆಗೀಡಾಗಿದ್ದರೆ ಮತ್ತು ಸಾಲವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಸಾಲದ ಕಂತುಗಳನ್ನು ಮಂಗಳವಾರ ಮಾತ್ರ ಪಾವತಿಸಿ. ಬುಧವಾರ ಮತ್ತು ಗುರುವಾರ ಯಾರಿಗೂ ಸಾಲ ನೀಡಬೇಡಿ.

ನೀವೇನೇ ಕೇಳಿದ್ರೂ ಈಡೇರಿಸುತ್ತಾಳೆ ಈ ಸ್ಮಶಾನ ದೇವಿ..! ಯಾರೀ ದೇವಿ..?

​ಬುಧವಾರ ಮಾಡಬೇಕಾದ ಪರಿಹಾರಗಳು:

ಬುಧವಾರ ಏಳು ಹಸುಗಳಿಗೆ ಹೆಸರು ಬೇಳೆಯನ್ನು ಆಹಾರವಾಗಿ ನೀಡಿ. ಹಸಿರು ಬಟ್ಟೆಯನ್ನು ತೊಟ್ಟು ದೇವಾಲಯದ ಮೆಟ್ಟಿಲುಗಳ ಬಳಿ ಸ್ವಲ್ಪ ಹೊತ್ತು ಮೌನವಾಗಿ ಕೂರಿ. ಇದನ್ನು ಮಾಡುವಾಗ ಯಾರೂ ನಿಮ್ಮನ್ನು ನೋಡಬಾರದು.

ಈ 4 ರಾಶಿಯವರೆಂದರೆ ಲಕ್ಷ್ಮಿಗೆ ಬಲು ಪ್ರೀತಿ..! ನಿಮ್ಮ ರಾಶಿಗಿದೆಯೇ ಲಕ್ಷ್ಮಿ ಕೃಪೆ..?

​ಗುರುವಾರ ಮಾಡಬೇಕಾದ ಪರಿಹಾರಗಳು:

ಗುರುವಾರ ಹಳದಿ ಬಟ್ಟೆಗಳನ್ನು ಧರಿಸಿ. ಹಳದಿ ಬಣ್ಣದ ಸಿಹಿತಿಂಡಿಗಳನ್ನು ಸೇವಿಸಿ. ಇದರೊಂದಿಗೆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ. ಇದನ್ನು ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ.

ಮನೆಯಲ್ಲಿ ಈ ಬದಲಾವಣೆಯಾದರೆ ಹಣ ಹೆಚ್ಚಾಗುವುದು..! ದೇವರ ಅನುಗ್ರಹವೂ ಪ್ರಾಪ್ತಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ